Wednesday, August 12, 2026
Wednesday, August 12, 2026

Shivamogga News ಎಮ್ಮೆಹಟ್ಟಿಯಲ್ಲಿ ಮನಸೆಳೆದ ಮೆಲೋಡಿ ರಮೇಶ್ ತಂಡದ ಸಾಂಸ್ಕೃತಿಕ‌ ಕಾರ್ಯಕ್ರಮ.

Date:

Shivamogga News ಮೆಲೋಡಿ ರಮೇಶ್ ತಂಡದಿಂದ ಎಮ್ಮೆಹಟ್ಟಿಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮೆಚ್ಚುಗೆ ಗಳಿಸಿತು.
ಶ್ರೀ ಉಜ್ಜಯಿನಿ ಮರುಳ ಸಿದ್ದೇಶ್ವರ ಸ್ವಾಮಿಯ ನೂತನ ದೇವಸ್ಥಾನ ಉದ್ಘಾಟನೆ ಪ್ರಯುಕ್ತ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.
ಮೆಲೋಡಿ ರಮೇಶ್ ತಂಡದಿಂದ ಭಕ್ತಿಗೀತೆ, ಭಾವಗೀತೆ ಹಾಗೂ ಜನಪದ ಗೀತೆಗಳ ಮನಮೋಹಕ ಕಾರ್ಯಕ್ರಮ ನಡೆಯಿತು. ಕೀಬೋರ್ಡ್ ಮತ್ತು ಕೊಳಲು ವಾದನವನ್ನು ಶಿವಮೊಗ್ಗದ ಎಲ್.ವೇಣುಗೋಪಾಲ್ ನಿರ್ವಹಿಸಿದರು.
ಗಾಯಕರಾಗಿ ಮೆಲೋಡಿ ರಮೇಶ್, ಮೇಘನಾ, ಆಕಾಶವಾಣಿ ಗಾಯಕರಾದ ಎಲ್.ವೇಣುಗೋಪಾಲ್ ಹಾಗೂ ಹಿನ್ನೆಲೆ ಗಾಯಕರಾದ ಆರ್.ಸುಮಿತ್ ಭಾಗವಹಿಸಿದ್ದದರು. ತಬಲಾ ವಾದನವನ್ನು ಪ್ರಶಾಂತ್ ಮತ್ತು ರಿದಮ್ ಅನ್ನು ವಿಠ್ಠಲ್ ನಿರ್ವಹಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು.
Shivamogga News ಕಾರ್ಯಕ್ರಮಕ್ಕೆ ಗ್ರಾಮಸ್ಥರು ಭಾರಿ ಸಂಖ್ಯೆಯಲ್ಲಿ ಹಾಜರಾಗಿದ್ದರು. ಕಲಾವಿದರ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...