Thursday, April 30, 2026
Thursday, April 30, 2026

Klive Special Article ವಿಶಿಷ್ಟಾವತಾರಾ.. ನರಸಿಂಹಾವತಾರ ಲೇ: ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ

Date:

Klive Special Article ವಿಷ್ಣುವಿನ ದಶಾವತಾರದಲ್ಲಿ ನಾಲ್ಕನೇ ಅವತಾರವೇ ನೃಸಿಂಹಾವತಾರ.
ದಶಾವತಾರದಲ್ಲಿ ಇದೊಂದು ವಿಶಿಷ್ಟಾವತಾರ.
ಹೆಸರೇ ಹೇಳುವಂತೆ ಅರ್ಧಭಾಗ ಮನುಷ್ಯ ಶರೀರ,ಉಳಿದರ್ಧ ಭಾಗ ಮೃಗ(ಸಿಂಹ)ದ ಶರೀರವನ್ನು ಹೊಂದಿರುವ ಅವತಾರ.
ದಾನವ ಹಿರಣ್ಯಕಶಿಪು ಸಾವನ್ನು ಗೆಲ್ಲಲು ಬಹಳ ಕಠಿಣ ತಪಸ್ಸನ್ನು ಮಾಡಿ ಬ್ರಹ್ಮನನ್ನು ಪ್ರತ್ಯಕ್ಷ ಗೊಳಿಸಿ ಕೊಳ್ಳುತ್ತಾನೆ.ಹಿರಣ್ಯಕಶಿಪುವಿನ ಕಠಿಣ ತಪಸ್ಸಿಗೆ ಪ್ರತ್ಯಕ್ಷನಾದ ಬ್ರಹ್ಮದೇವನಿಂದ ಸಾವನ್ನೇ
ವರವನ್ನು ನೀಡುವಂತೆ ಕೇಳುತ್ತಾನೆ. ಹಿರಣ್ಯಕಶಿಪುವಿನ ಕಠಿಣ ತಪಸ್ಸಿಗೆ ಪ್ರಸನ್ನನಾದ ಬ್ರಹ್ಮದೇವರು ಹೇಳುತ್ತಾನೆ ಭೂಮಿಯಲ್ಲಿ ಹುಟ್ಟಿದವರಿಗೆ ಮರಣವಿದ್ದೇ ಇರುತ್ತದೆ.ಈ ನಿಯಮವನ್ನು ಬದಲಾಯಿಸಲು ಸಾಧ್ಯವೇ ಇಲ್ಲ.
ಆದ್ದರಿಂದ ನೀನು ಬೇರೆಯಾವುದಾದರೂವರವನ್ನು ಕೇಳುಎಂದುಬ್ರಹ್ಮದೇವನುಹೇಳುತ್ತಾನೆ.ಹಿರಣ್ಯಕಶಿಪುಬಹಳಯೋಚನೆಮಾಡಿ”ತನಗೆಮನುಷ್ಯರಿಂದಾಗಲೀ,ಮೃಗಗಳಿಂದಾಗಲೀ,ಯಾವುದೇಶಸ್ತ್ತ್ರಾಸ್ತ್ರಗಳಿಂದಾಗಲೀ,ಮನೆಯಒಳಗಾಗಲೀಹೊರಗಾಗಲೀ,ಹಗಲಿನಲ್ಲಾಗಲೀರಾತ್ರಿಯಲ್ಲಾಗಲೀಸಾವುಬಾರದಂತೆವರವನ್ನುಕೊಡುಎಂದುಬ್ರಹ್ಮನಲ್ಲಿಪ್ರಾರ್ಥಿಸುತ್ತಾನೆ.ಬ್ರಹ್ಮದೇವನು ತಥಾಸ್ತು ಎಂದು ವರವನ್ನು ಕೊಟ್ಟುಅದೃಶ್ಯನಾಗುತ್ತಾನೆ.
ಹಿರಣ್ಯಕಶಿಪುವಿನಪತ್ನಿಕಯಾದುಗರ್ಭಿಣಿಯಾಗಿದ್ದಾಗ ಕೆಲವು ಕಾಲ ನಾರದ ಮಹರ್ಷಿಗಳ ಆಶ್ರಮದಲ್ಲಿ
ಇರಬೇಕಾದ ಪ್ರಸಂಗ ಬರುತ್ತದೆ. ಕಯಾದುವಿನ ಹೊಟ್ಟೆಯಲ್ಲಿ ಹರಿಯ ಭಕ್ತ ಪ್ರಹ್ಲಾದನು ಬೆಳೆಯುತ್ತಿರುತ್ತಾನೆ.ನಾರದರು ಮಾಡುತ್ತಿದ್ದ ಶ್ರೀಹರಿಯ ಗುಣಗಾನ ಕಯಾದುವಿನ ಹೊಟ್ಟೆಯಲ್ಲಿದ್ದ ಪ್ರಹ್ಲಾದನಿಗೆ ಹರಿಯ ಮೇಲಿನ ಭಕ್ತಿಯನ್ನು ಇಮ್ಮಡಿಗೊಳಿಸಿತ್ತು.
ತನ್ನ ಕಠಿಣ ತಪಸ್ಸನ್ನು ಮುಗಿಸಿಕೊಂಡು ಬಂದ ಮೇಲೆ ಹಿರಣ್ಯಕಶಿಪು ಕಯಾದು ಗಂಡುಮಗುವಿನ ತಾಯಿಯಾಗಿರುವ ವಿಷಯ ಕೇಳಿ ಬಹಳ ಸಂತೋಷಗೊಳ್ಳುತ್ತಾನೆ.ಪ್ರಹ್ಲಾದನೆಂದು ನಾಮಕರಣವೂ ಆಗುತ್ತದೆ.
ಹಿರಣ್ಯಕಶಿಪುವಿಗೆ ಮಗ ಹುಟ್ಟಿರುವ ವಿಷಯ ಕೇಳಿ ಶ್ರೀಹರಿಯ ಬದ್ಧ ದ್ವೇಷಿಯಾದ ಇವನು ತನ್ನ ಜೊತೆ ಹೋರಾಡಲು ತನ್ನ ಮಗನೂ ಜೊತೆಗೆ ಸಿಗುತ್ತಾನೆ ಎಂದು ಮನಸ್ಸಿನಲ್ಲಿ ಲೆಕ್ಕಾಚಾರ ಹಾಕುತ್ತಾನೆ.
ವಿದ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ಕಳಿಸಿಕೊಡುತ್ತಾನೆ.
Klive Special Article ಗುರುಕುಲದಲ್ಲಿಯೂ ಬಾಲಕ ಪ್ರಹ್ಲಾದನಿಗೆ ಶ್ರೀಹರಿಯದೇ ಧ್ಯಾನ.ದಾನವಕುಲದಲ್ಲಿ ಹುಟ್ಟಿದ
ಪ್ರಹ್ಲಾದನನ್ನು ಕಟುಕತನದಿಂದ ಬೆಳೆಸಬೇಕೆಂದರೂ ಅದು ಸಾಧ್ಯವಾಗದೆ ಬಹಳಮೃದು ಮನಸ್ಸಿನಿಂದ ಹರಿಯ ನಾಮವನ್ನೇತನ್ನಉಸಿರಲ್ಲಿಸೇರಿಸಿಕೊಂಡು ಬೆಳೆಯತೊಡಗಿದ ಪ್ರಹ್ಲಾದ. ಪ್ರಹ್ಲಾದನು ಎಷ್ಟು ಹರಿಭಕ್ತನಾಗಿದ್ದನೋ ಅಷ್ಟೇ
ಹರಿದ್ವೇಷಿಯಾಗಿದ್ದ ಹಿರಣ್ಯಕಶಿಪು.
ಹಿರಣ್ಯಕಶಿಪುಪ್ರಹ್ಲಾದನನ್ನುತನ್ನಕಡೆಸೆಳೆದುಕೊಳ್ಳಲು ಮಾಡಿದ ಪ್ರಯತ್ನಗಳೆಲ್ಲವೂವಿಫಲವಾಗುತ್ತವೆ.
ಪ್ರಹ್ಲಾದನೇ ತನ್ನ ತಂದೆಗೆ “ಅಪ್ಪಾ ಶ್ರೀಹರಿಯು ಎಲ್ಲಾ ಕಡೆಯೂ ಇದ್ದಾನೆ,ಅವನೇ ನಮ್ಮೆಲ್ಲರನ್ನು
ರಕ್ಷಿಸುತ್ತಿರುವನು”ಎಂದು ಹೇಳುತ್ತಾನೆ. ಹರಿ,ಹರಿ ಎಂಬ ಶಬ್ದವನ್ನು ಪದೇಪದೇ ಪ್ರಹ್ಲಾದನ
ಬಾಯಿಂದ ಕೇಳಿ ಕೇಳಿ ಸಾಕಾಗಿ ಹಿರಣ್ಯ ಕಶಿಪು ತನ್ನ ಅರಮನೆಯ ಕಂಭವೊಂದನ್ನು ತೋರಿಸಿ
ಈ ಕಂಭದಲ್ಲಿದ್ದಾನೇಯೋ ನಿನ್ನ ಶ್ರೀಹರಿ ಎಂದು ಕೇಳಿದಾಗ ಪ್ರಹ್ಲಾದನು ಹೌದಪ್ಪಾ ಶ್ರೀಹರಿ ಎಲ್ಲಾ
ಕಡೆಯೂ ಇದ್ದಾನೆ,ಈ ಕಂಭದಲ್ಲಿಯೂ ಇದ್ದಾನೆ, ಆ ಕಂಭದಲ್ಲಿಯೂ ಇದ್ದಾನೆ ಎಂದು ಹೇಳಿದ ಕೂಡಲೇ ಹಿರಣ್ಯಕಶಿಪು ತನ್ನ ಗದೆಯಿಂದ ತನ್ನೆದುರಿನ ಕಂಭಕ್ಕೆ ಹೊಡೆಯುತ್ತಾನೆ. ಕೂಡಲೇ ಭಯಂಕರ ಶಬ್ದದಿಂದ ಕಂಬದಿಂದ ನೃಸಿಂಹರೂಪದಿಂದ ಶ್ರೀಹರಿಯು ಪ್ರತ್ಯಕ್ಷನಾಗಿ ಹಿರಣ್ಯಕಶಿಪುವನ್ನು ಸಂಹಾರಮಾಡುತ್ತಾನೆ.ಹಿರಣ್ಯ
ಕಶಿಪುವನ್ನು ಸಂಹಾರ ಮಾಡಿದ ನೃಸಿಂಹರೂಪಿ ಶ್ರೀಹರಿಯನ್ನು ಶಾಂತವಾಗಿಸಲುಸ್ವತಃ:ಲಕ್ಷ್ಮೀದೇವಿಯಿಂದಲೇ ಸಾಧ್ಯವಾಗುವುದಿಲ್ಲ.
ಬಾಲಕ ಪ್ರಹ್ಲಾದನೇ ನೃಸಿಂಹ ರೂಪಿಯಾದ ಭಗವಂತನನ್ನು ಪ್ರಾರ್ಥನೆ ಮಾಡಿ ಸಮಾಧಾನ ಮಾಡುತ್ತಾನೆ.
ನೃಸಿಂಹದೇವರು ತನ್ನ ಅಂತರಂಗ ಭಕ್ತ ಪ್ರಹ್ಲಾದನ
ಪ್ರಾರ್ಥನೆಯ ಮೇರೆಗೆ ಶಾಂತನಾಗುವುದಲ್ಲದೇ ಅವನ ಪ್ರಾರ್ಥನೆಯಂತೆ ಹಿರಣ್ಯಕಶಿಪುವಿಗೆ ಮುಕ್ತಿಯನ್ನೂ ದಯಪಾಲಿಸುತ್ತಾನೆ.
ನಾವೂ ಹಿರಣ್ಯಕಶಿಪುವಿನಂತೆ ನಮ್ಮೊಳಗಿರುವ
ಕೋಪ,ಅಸಹನೆ,ದ್ವೇಷ ಭಾವನೆ,ಅಸೂಯೆ,ಇವುಗಳನ್ನು ಹೊರಹಾಕಿ ಎಲ್ಲರ ಮೇಲೆ ಪ್ರೀತಿ,ವಿಶ್ವಾಸ,ಒಳ್ಳೆಯ ಮನಸ್ಸನ್ನು
ನಮ್ಮೊಳಗೆ ತುಂಬಿಕೊಂಡು ಶ್ರೀನೃಸಿಂಹದೇವರ ಅನುಗ್ರಹಕ್ಕೆ ಪಾತ್ರರಾಗೋಣ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ನಗರದ ಬಡಾವಣೆಗಳಲ್ಲಿನ ಚರಂಡಿ ಸಮಸ್ಯೆ ತ್ವರಿತ ಬಗೆಹರಿಸಿ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಶಿವಮೊಗ್ಗ ನಗರದ ಬಡಾವಣೆಗಳಲ್ಲಿನ ಚರಂಡಿ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ...

B.Y. Raghavendra ಪ್ರವಾಸಿ ತಾಣವಾಗಿ ಜೋಗದ ಅಭಿವೃದ್ದಿ ಕಾಮಗಾರಿ ಶೀಘ್ರ ಪೂರೈಸಲು ಸಂಸದ ರಾಘವೇಂದ್ರ ಸೂಚನೆ

B.Y. Raghavendra ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ಪ್ರವಾಸಿ ತಾಣವಾದ ಜೋಗ ಜಲಪಾತವನ್ನು...

Revenue Department ಮೇ 1 & 2 ಶಿವಮೊಗ್ಗದಲ್ಲಿ ಕಂದಾಯ ಇಲಾಖಾ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ

Revenue Department ಕಂದಾಯ ಇಲಾಖೆ, ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ...