ಶಿವಮೊಗ್ಗದ KSCA ನವುಲೆ ಸ್ಟೇಡಿಯಂನಲ್ಲಿ ನಡೆದ KSCA ಅಕಾಡೆಮಿ ಸಮರ್ ಕ್ಯಾಂಪ್ ಉದ್ಘಾಟನಾ ಸಮಾರಂಭ ನಡೆಯಿತು.
ಈ ಕಾರ್ಯಕ್ರಮವನ್ನು ಶ್ರೀ ನಿಖಿಲ್ ಬಿ., ಐಪಿಎಸ್, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಉದ್ಘಾಟಿಸಿದರು. ಅವರ ಗೌರವಾನ್ವಿತ ಉಪಸ್ಥಿತಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ಈ ಸಮಾರಂಭದಲ್ಲಿ ಶ್ರೀ ಅವಿನಾಶ್ ವೈದ್ಯ, ಶ್ರೀ ಆರ್. ಪಿ. ನಾಗರಾಜ್, ಮಾಜಿ ವಲಯ ಅಧ್ಯಕ್ಷರಾದ ಶ್ರೀ ರಾಜೇಂದ್ರ ಕಾಮತ್ ಎನ್., ಶ್ರೀ ಎಸ್. ಎಸ್. ಸುಕುಮಾರ್ ಪಟೇಲ್, ಮಾಜಿ ವಲಯ ಸಂಚಾಲಕರಾದ ಡಿ. ಆರ್ . ನಾಗರಾಜ್, ಶ್ರೀ ಸದಾನಂದ ಹೆಚ್.ಎಸ್., ಹಾಗೂ KSCA ಪದಾಧಿಕಾರಿಗಳು, ತರಬೇತುದಾರರು, ಪೋಷಕರು, ಕ್ಲಬ್ ಕಾರ್ಯದರ್ಶಿಗಳು, ಜೀವಮಾನ ಸದಸ್ಯರು, ಆಟಗಾರರು ಮತ್ತು ಕ್ರಿಕೆಟ್ ಅಭಿಮಾನಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭವಾಗಿ, ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟನೆ ನೆರವೇರಿತು. ನಂತರ ಹಸಿರು ಅಭಿಯಾನದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಅಂಡರ್-14 ಬಾಲಕರು, ಅಂಡರ್-16 ಬಾಲಕರು, ಅಂಡರ್-19 ಬಾಲಕರು, ಅಂಡರ್-15 ಬಾಲಕಿಯರು ಹಾಗೂ ಅಂಡರ್-19 ಮಹಿಳಾ ವಿಭಾಗಗಳ ಸಮರ್ ಕ್ಯಾಂಪ್ಗಳಿಗೆ ಚಾಲನೆ ನೀಡಲಾಯಿತು.
ಕೆಎಸ್ಸಿಎ ಅಕಾಡೆಮಿ ಸಮರ್ ಕ್ಯಾಂಪ್ ಉದ್ಘಾಟನೆ
Date:
