Monday, April 27, 2026
Monday, April 27, 2026

ಎಸ್ಎಸ್ಎಲ್ ಸಿ ಪರೀಕ್ಷೆ: ಪತ್ರಕರ್ತರ ಮಕ್ಕಳ ಸಾಧನೆ

Date:

ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಪತ್ರಕರ್ತರ ಮಕ್ಕಳು ಗಣನೀಯ ಸಾಧನೆ ಮಾಡಿದ್ದಾರೆ. ಈ ಸಾಧಕ ಮಕ್ಕಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ಅಭಿನಂದಿಸಿ, ಶುಭ ಕೋರಿದೆ.
ಪ್ರಜಾವಾಣಿ ಪತ್ರಿಕೆ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಮತ್ತು ಶಿಲ್ಪ ದಂಪತಿಯ ಪುತ್ರಿ ಎನ್. ಸಾನ್ವಿ, ಶೇಕಡ 93.44 ಅಂಕ ಗಳಿಸಿ ಶಾಲೆಗೆ ಮೂರನೇ ಸ್ಥಾನ ಗಳಿಸಿದ್ದಾಳೆ. ಶಿವಮೊಗ್ಗ ಟೈಮ್ಸ್ ಪತ್ರಿಕೆಯ ಉಪಸಂಪಾದಕ ಆರ್. ಅಭಿನಂದನ್ ಮತ್ತು ಸವಿತಾ ದಂಪತಿಗಳ ಪುತ್ರಿ ಎ. ಸಂಜನ ಗೆ ಶೇ. 95 ಅಂಕಗಳಿಸಿದ್ದಾಳೆ. ಸಾತ್ವಿಕ ಪತ್ರಿಕೆ ಸಂಪಾದಕ ಸತೀಶ್ ರವರ ಪುತ್ರ ಎಂ. ಎಸ್. ಸಾತ್ವಿಕ್ ಶೇ.80.60 ಅಂಕ ಗಳಿಸಿದ್ದಾರೆ. ಧ್ರುವ ಎಸ್. ಹೆಗಡೆ ಶೇ.95.50 ಸಾಧನೆ ಮಾಡಿದ್ದಾನೆ. ಈತ ಶಿವಮೊಗ್ಗ ವಿಕಾಸ ಪ್ರೌಢಶಾಲೆ ವಿದ್ಯಾರ್ಥಿ ಯಾಗಿದ್ದು, ವಿಜಯವಾಣಿ ಶಿವಮೊಗ್ಗ ಬ್ಯೂರೋ ಮುಖ್ಯ ಉಪಸಂಪಾದಕ ಸಂದೇಶ ಹೆಗಡೆ ಹಾಗೂ ಆಶಾ ಹೆಗಡೆ ದಂಪತಿ ಪುತ್ರ. ಪತ್ರಕರ್ತ ಆದಿತ್ಯಪ್ರಸಾದ್ ಹಾಗೂ ಡಾ. ಮೈತ್ರೇಯಿರವರ ಪುತ್ರ ಸಿದ್ಧಾರ್ಥ ಎ. ಕಶ್ಯಪ 625ಕ್ಕೆ 605 (ಶೇ. 96..8)ಅಂಕಗಳನ್ನು ಗಳಿಸಿ ಹೆಮ್ಮೆ ತಂದಿದ್ದಾನೆ.
ಪತ್ರಕರ್ತೆ ಪದ್ಮಿನಿ ವಿಶ್ವನಾಥ್ ಮತ್ತು ಕಾಶಿ ವಿಶ್ವನಾಥ್ ದಂಪತಿಗಳ ಪುತ್ರಿ ಪ್ರೇರಣಾ ಕೆ. ರಾವ್ ಅಹಮದಾಬಾದ್ ನಲ್ಲಿ ನಡೆದ ರಾಷ್ಟ್ರೀಯ ರಕ್ಷಾ ವಿವಿಯ 5ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಎಂಎಸ್ಸಿ ಸೈಬರ್ ಸೆಕ್ಯುರಿಟಿ ಅಂಡ್ ಡಿಜಿಟಲ್ ಫೋರೆನ್ಸಿಕ್ಸ್ನಲ್ಲಿ ಚಿನ್ನದ ಪದಕ ಸ್ವೀಕರಿಸಿದ್ದಾರೆ. ನಾವಿಕ ಪತ್ರಿಕೆಯ ಡಿಟಿಪಿ ಆಪರೇಟರ್ ಗಿರಿಜಮ್ಮ, ಎನ್. ಬಿ. ನಾಗರಾಜ್ ದಂಪತಿಗಳ ಪುತ್ರಿ ಎನ್. ವರ್ಷಿಣಿ 531 (ಶೇ. 84.96) ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದಾಳೆ. ಗೋಪಾಳ ರಾಮಕೃಷ್ಣ ವಿದ್ಯಾನಿಕೇತನದ ವಿದ್ಯಾರ್ಥಿನಿ ಎಚ್.ವೈ.ಚೇತನಾ ಎಸ್‌ಎಸ್‌ಎಲ್‌ಸಿಯಲ್ಲಿ 553 ಅಂಕ ಗಳಿಸಿದ್ದಾಳೆ. ಈಕೆ ವಿಜಯವಾಣಿ ಛಾಯಾಗ್ರಾಹಕ ಶಿವಮೊಗ್ಗ ಯೋಗರಾಜ್, ಬಿ.ಆರ್.ಸೌಮ್ಯಾ ದಂಪತಿಯ ಪುತ್ರಿ. ನುಡಿಗಿಡ ಪತ್ರಿಕೆಯ ಡಿಟಿಪಿ ಆಪರೇಟರ್ ಶೋಭರವರ ಪುತ್ರ ತನ್ನಿಷ್ಕ 551 ಅಂಕ ಗಳಿಸಿ ತರಗತಿಗೆ ಮೊದಲಿಗ ನಾಗಿದ್ದಾನೆ. ಈತ ಎನ್ ಇ ಎಸ್ ಪ್ರೌಢಶಾಲೆಯ ವಿದ್ಯಾರ್ಥಿ.
ಪತ್ರಿಕಾ ಛಾಯಾಗ್ರಾಹಕ ಕೆ. ಆರ್. ಸೋಮನಾಥ್ ಮತ್ತು ಎಸ್. ಉಷಾ ದಂಪತಿಗಳ ಪುತ್ರಿ ಕೆ. ಎಸ್. ಲಲಿತೇಶ್ವರಿ ಆಯುರ್ವೇದ ವೈದ್ಯಕೀಯ (ಬಿಎಎಂಎಸ್)ನಲ್ಲಿ ಎರಡನೇ ರ‍್ಯಾಂಕ್ ಪಡೆದಿದ್ದಾಳೆ. ಈಕೆ ಟಿ ಎಂ ಎ ಇ ಎಸ್ ಆಯುವೇದ ಮೆಡಿಕಲ್ ಕಾಲೆಜ್‌ವಿದ್ಯಾರ್ಥಿನಿ. ಈ ಪ್ರತಿಭಾನ್ವಿತ ವಿದ್ಯಾರ್ಥಿನಿ ಈ ಹಿಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 97, ಪಿಯುಸಿ ಪರೀಕ್ಷೆಯಲ್ಲಿ ಶೆ. 87 ಅಂಕ ಗಳಿಸಿದ್ದಳು. ಹಾಗೆಯೇ ಭರತನಾಟ್ಯ ಪರೀಕ್ಷೆಗಳಲ್ಲಿಯೂ ಸಹ ಅಗ್ರ ಸ್ಥಾನದಲ್ಲಿ ಉತ್ತೀರ್ಣಳಾಗಿದ್ದಾಳೆ.
ಈ ಎಲ್ಲಾ ಪ್ರತಿಭಾನ್ವಿತರಿಗೆ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ಹೆಚ್. ಯು. ವೈದ್ಯನಾಥ್, ಪ್ರಧಾನ ಕಾರ್ಯದರ್ಶಿ ಆರ್. ಎಸ್. ಹಾಲಸ್ವಾಮಿ, ರಾಜ್ಯ ಸಮಿತಿ ನಿರ್ದೇಶಕರಾದ ಕೆ. ವಿ. ಶಿವಕುಮಾರ್, ಎನ್. ರವಿಕುಮಾರ್ ಹಾಗೂ ಪದಾಽಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಅಭಿನಂದಿಸಿ ಶುಭಕೋರಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ನಾರಿ ಶಕ್ತಿ ವಂದನ ವಿರೋಧಿಸಿದ ಕಾಂಗ್ರೆಸ್ ವಿರುದ್ಧ ಶಾಸಕ ಚನ್ನಿ ಆಕ್ರೋಶ

S.N. Channabasappa ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಐತಿಹಾಸಿಕ 'ನಾರಿ ಶಕ್ತಿ...

Madhu Bangarappa ಗಾಳಿಮಳೆಯಿಂದಾದ ಹಾನಿಗೆ ಸೂಕ್ತ ಕ್ರಮಕ್ಕೆ ಸೂಚನೆ : ಎಸ್ಸೆಸ್ಎಲ್ಸಿ & ಪಿಯು ಅತ್ಯುತ್ತಮ ಫಲಿತಾಂಶ- ಮಧುಬಂಗಾರಪ್ಪ

Madhu Bangarappa ಶಿಕ್ಷಣ ಇಲಾಖೆಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ವಿಚಾರಧಾರೆಗಳನ್ನು...

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ : ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.), ಶಿವಮೊಗ್ಗ ಜಿಲ್ಲಾ ಘಟಕದ ೨ನೇ...

B.Y. Raghavendra ಕಳೆದ ರಾತ್ರಿ ಜಿಲ್ಲೆಯಾದ್ಯಂತ ಸುರಿದ ಮಳೆ:ವಿವಿಧೆಡೆ ಹಾನಿ, ತಕ್ಷಣ ಕ್ರಮಕೈಗೊಳ್ಳಿ-ಸಂಸದ ರಾಘವೇಂದ್ರ

B.Y. Raghavendra ಶಿವಮೊಗ್ಗ ಜಿಲ್ಲೆಯಾದ್ಯಂತ ಕಳೆದ ರಾತ್ರಿ ಸುರಿದ ಭಾರೀ ಮಳೆ...