B.Y. Raghavendra ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಬುತ್ವವಾದ ಭಾರತದಲ್ಲಿ ಐತಿಹಾಸಿಕ ಮಹಿಳಾ ಮೀಸಲಾತಿ ಜಾರಿಗೆ ತರಲಾಗುತ್ತಿದೆ.ಮೂಲ ಕಾನೂನಿಗೆ ತಿದ್ದುಪಡಿ ತಂದು ಕ್ಷೇತ್ರ ಮರು ವಿಂಗಡಣೆ ಮಾಡಿ ಮಹಿಳೆಯರಿಗೆ ಸ್ಥಾನ ನೀಡುವ ಕೆಲಸ ಆಗಿದೆ. 33% ಸ್ಥಾನವನ್ನು ಮಹಿಳೆಯರಿಗೆ ಮೀಸಲು ಇಡುವ ಈ ಕಾಯ್ದೆಯಿಂದ ಆಗಲಿದೆ. ಈ ಅದಿಸೂಚನೆ ಕೇವಲ ಕಾಯ್ದೆ ಅಲ್ಲ ದೇಶದ ಮಹಿಳೆಯರಿಗೆ ಕೊಡುತ್ತಿರು ಗೌರವ. ನಾರಿ ಶಕ್ತಿಯು 2026 ಚುನಾವಣೆಯಲ್ಲಿ ಈ ಮೀಸಲಾತಿ ಸಿಗಲಿದೆ ಎಂದು ತಿಳಿಸಿದ್ದಾರೆ.
ಲೋಕಸಭೆಯಲ್ಲಿ ೫೪೩ ರಿಂದ ೮೫೦ ಕ್ಕೆ ಸ್ಥಾನಗಳಿಗೆ ಏರಿಕೆ ಆಗಲಿದೆ. 270 ಕ್ಕೂ ಹೆಚ್ಚು ಸ್ಥಾನಗಳು ಮಹಿಳೆಯರಿಗೆ ಸಿಗಲಿದೆ.ಅಡುಗೆ ಮನೆಯಿಂದ ಅಂತರಿಕ್ಷ ಹೋದ ಮಹಿಳೆಯರಿಗೆ ಈ ಸ್ಥಾನ ಸಿಗಲಿವೆ. ಆರ್ಟಿಕಲ್ ೩೭೦ ಕಿತ್ತು ಒಗೆಯುವ ಸಂದರ್ಭದಿದಂದ ಹಿಡಿದು ಈ ನಾರಿ ಶಕ್ತಿ ಮೀಸಲಾತಿ ನೀಡುವ ವರೆಗೂ ನಾನೂ ಲೋಕಸಭಾ ಸದಸ್ಯನಾಗಿ ಕೆಲಸ ಮಾಡಿದ್ದೇನ. ಇದು ನನ್ನ ಕ್ಷೇತ್ರದ ತಾಯಿಯೆಂದಿರು ನೀಡಿರು ಶಕ್ತಿ. ಅವರಿಗೆ ನಾನೂ ಕೃತಜ್ಞತೆ ಸಲ್ಲಿಸುತ್ತೇವೆ ಎಂದಿದ್ದಾರೆ.
ಇಷ್ಟು ವರ್ಷ ಮಹಿಳೆಯರನ್ನ ರಾಜಕೀಯ ಪಕ್ಷಗಳು ವೋಟ್ ಬ್ಯಾಂಕ್ ಆಗಿ ಮಾಡಿಕೊಂಡಿದ್ದರು. ಪ್ರಧಾನಿ ಮೋದಿಯವರು ಈ ಕಾಯ್ದೆವತರುವಾಗ ಗಿಮಿಕ್ ಎಂದು ವಿರೋಧ ಪಕ್ಷದವರು ಹೇಳಿದ್ರು. ಈ ಐತಿಹಾಸಿಕ ಪರಿವರ್ತನೆ ಮಾಡುತ್ತಿರುವ ಪ್ರಧಾನಿ ಮೋದಿಯವರಿಗೆ ಶಿವಮೊಗ್ಗ ಜನತೆ ಪರವಾಗಿ ಅಭಿನಂದನೆ ತಿಳಿಸುತ್ತೇವೆ ಎಂದು ಹೇಳಿದ್ದಾರೆ.
B.Y. Raghavendra ದಕ್ಷಿಣ ಭಾರತಕ್ಕೆ ಸ್ಥಾನ ಹಂಚಿಕೆ ವಿಚಾರದಲ್ಲಿ ಅನ್ಯಾಯ ವಾಗದಂತೆ ನೋಡಿಕೊಳ್ಳಬೇಕು. ಜನಸಂಖ್ಯೆ ಆಧಾರದಮೇಲೆ ವಿಂಗಡಣೆ ಮಾಡಿದರೆ ದಕ್ಷಿಣಕ್ಕೆ ಅನ್ಯಾಯವಾಗುತ್ತದೆ. ಅದನ್ನು ನಾವು ಸದನದಲ್ಲಿ ಕುಳಿತು ಚರ್ಚೆ ಮಾಡುತ್ತೇವೆ. ಮಹಿಳಾ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಿಕೊಂಡು ಬರುತ್ತಿದ್ದಾರೆ. ಅವರ ಕಾಲದಲ್ಲಿ ಈ ಕಾಯ್ದೆ ತರಲು ಮುಂದಾಗಿರಲ್ಲಿಲ್ಲ. ಶಿವಮೊಗ್ಗ ಲೋಕಸಭಾ ಕ್ಷೇತ್ರವೇ ಮಹಿಳಾ ಮೀಸಲಾತಿ ಗೆ ಸಿಕ್ಕರೂ ನನಗೆ ಸಂತೋಷ ಎಂದಿದ್ದಾರೆ.
