Wednesday, April 15, 2026
Wednesday, April 15, 2026

D S Arun ಶಿವಮೊಗ್ಗ ಹಾಸನ& ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯ ವಿವಿಧ ವಯೋಮಾನ ವಿಭಾಗಗಳಲ್ಲಿ ಕೆಎಸ್ಸಿಎ ವಲಯ ಆಯ್ಕೆ ಪ್ರಕ್ರಿಯೆ- ಡಿ.ಎಸ್.ಅರುಣ್

Date:

D S Arun ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ.ಎಸ್.ಸಿ.ಎ.), ಶಿವಮೊಗ್ಗ ವಲಯದ ವತಿಯಿಂದ 2026–27ನೇ ಸಾಲಿನ ಅಕಾಡೆಮಿ ಆಯ್ಕೆ ಪ್ರಕ್ರಿಯೆಗಳು (ಪುರುಷರು ಹಾಗೂ ಮಹಿಳೆಯರಿಗೆ) ಆಯೋಜಿಸಲಾಗುತ್ತಿದೆ ಎಂಬುದನ್ನು ತಿಳಿಸಲು ಸಂತೋಷವಾಗುತ್ತದೆ.
ಈ ಆಯ್ಕೆ ಪ್ರಕ್ರಿಯೆಗಳು ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳ ವ್ಯಾಪ್ತಿಯಲ್ಲಿ ವಿವಿಧ ವಯೋಮಾನದ ವಿಭಾಗಗಳಲ್ಲಿ ನಡೆಯಲಿದ್ದು, ದಿನಾಂಕ 20 ಮಾರ್ಚ್ 2026 ರಂದು ಪ್ರಕಟಿಸಿದ ಅಧಿಕೃತ ವೇಳಾಪಟ್ಟಿಯಂತೆ ಆಯೋಜಿಸಲಾಗುತ್ತಿದೆ.
ಈ ಪ್ರಕ್ರಿಯೆಗಳ ಮೂಲಕ ಅಂಡರ್-14, ಅಂಡರ್-16, ಅಂಡರ್-19 (ಬಾಲಕರು) ಹಾಗೂ ಅಂಡರ್-15, ಅಂಡರ್-19 (ಮಹಿಳೆಯರು) ವಿಭಾಗಗಳಲ್ಲಿ ಪ್ರತಿಭಾವಂತ ಆಟಗಾರರನ್ನು ಗುರುತಿಸಿ, ಮುಂದಿನ ಹಂತದಲ್ಲಿ ಕೆ.ಎಸ್.ಸಿ.ಎ. ಅಕಾಡೆಮಿ ತರಬೇತಿ ಕಾರ್ಯಕ್ರಮಗಳಿಗೆ ಆಯ್ಕೆ ಮಾಡಲಾಗುತ್ತದೆ.
ಈ ಸಂದರ್ಭದಲ್ಲಿ, ಕೆ.ಎಸ್.ಸಿ.ಎ. ಶಿವಮೊಗ್ಗ ವಲಯದ ಕನ್ವೀನರ್ ಶ್ರೀ ಡಿ. ಎಸ್. ಅರುಣ್ ಅವರು ಸ್ಥಳದಲ್ಲಿ ಹಾಜರಿದ್ದು, ಆಯ್ಕೆ ಪ್ರಕ್ರಿಯೆಯು ನ್ಯಾಯಸಮ್ಮತವಾಗಿ, ಪಾರದರ್ಶಕವಾಗಿ ಹಾಗೂ ಸುಗಮವಾಗಿ ನಡೆಯುವಂತೆ ಮೇಲ್ವಿಚಾರಣೆ ನಡೆಸುತ್ತಿದಾರೆ.
ಈ ಮಹತ್ವದ ಕ್ರೀಡಾ ಚಟುವಟಿಕೆಯನ್ನು ನಿಮ್ಮ ಪ್ರತಿಷ್ಠಿತ ಮಾಧ್ಯಮಗಳ ಮೂಲಕ ಪ್ರಸಾರ / ಪ್ರಕಟಣೆ ಮಾಡುವಂತೆ ವಿನಂತಿಸುತ್ತೇವೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಕೆ.ಎಸ್.ಸಿ.ಎ. ಶಿವಮೊಗ್ಗ ವಲಯ: ಕೆ.ಎಸ್.ಸಿ.ಎ. ನವಲೆ ಕ್ರೀಡಾಂಗಣ, ಶಿವಮೊಗ್ಗ
ಇಮೇಲ್: shivamogga@ksca.co.in
ನಿಮ್ಮ ಸಹಕಾರಕ್ಕೆ ಧನ್ಯವಾದಗಳು.
ವಂದನೆಗಳೊಂದಿಗೆ,
ಡಿ. ಎಸ್. ಅರುಣ್
ವಲಯ ಕನ್ವೀನರ್
KSCA ಶಿವಮೊಗ್ಗ ವಲಯ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Dr. B.R. Ambedkar ಡಾ.ಅಂಬೇಡ್ಕರ್ ಸರಳ ಜೀವನ ನಡೆಸಿದ ಮಹನ್ ನಾಯಕರು- ಸುರೇಶ್ ವೈ ಹಳ್ಳಿ.

Dr. B.R. Ambedkar ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ...

Dr. Ambedkar ಇಂದಿನ ಯುವಕರು ಅಂಬೇಡ್ಕರ್ ಜೀವನ ಚರಿತ್ರೆ ಓದಿದರೆ ಸಾಕು ಖಿನ್ನತೆಯಿಂದ ಹೊರಬರಬಹುದು- ಬಿ.ವೈ‌ರಾಘವೇಂದ್ರ.

Dr. Ambedkar ಅನ್ಯಾಯದ ವಿರುದ್ದ ಧ್ವನಿಯಾಗಿ, ಸಮಾನತೆಗಾಗಿ ಹೋರಾಡಿದಯುಗಪುರುಷ ಡಾ.ಬಾಬಾ ಸಾಹೇಬ್...

Nalanda Chess Academy ನಳಂದ ಚೆಸ್ ಅಕಾಡೆಮಿಯ ಬೇಸಿಗೆ ಶಿಬಿರದ ಮಾಹಿತಿ.

Nalanda Chess Academy ನಗರದ ನಳಂದಾ ಚೆಸ್ ಅಕಾಡೆಮಿಯಿಂದ ಬರುವ ಗ್ರೀಷ್ಮ...