Rovers and Rangers ಸಾಗರದ ಎಲ್ ಬಿ ಮತ್ತು ಎಸ್ ಬಿ ಎಸ್ ಕಾಲೇಜಿನಲ್ಲಿ ರೋಟರಿ ಕ್ಲಬ್ ಸಹಯೋಗದೊಂದಿಗೆ ಕಾಲೇಜಿನ ಎನ್ ಎಸ್ ಎಸ್, ಎನ್ ಸಿ ಸಿ, ಯೂತ್ ರೆಡ್ ಕ್ರಾಸ್, ರೆಡ್ ರಿಬ್ಬನ್ ಕ್ಲಬ್ ಹಾಗೂ ರೋವರ್ಸ್ ಮತ್ತು ರೆಂಜರ್ಸ್ ಘಟಕಗಳ ಪರವಾಗಿ ಆರೋಗ್ಯ ತಪಾಸಣೆ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಶಿಬಿರವನ್ನು ಉದ್ಘಾಟಿಸಿದ ಶ್ರೀ ಕೆ ಎಸ್ ಗೌತಮ್ ಅವರು ರಕ್ತದಾನದ ಮಹತ್ವ ಹಾಗೂ ಅದರಿಂದ ಉಂಟಾಗುವ ಲಾಭಗಳ ಕುರಿತು ಮಾತನಾಡಿದರು.
ವೈದ್ಯಾಧಿಕಾರಿಗಳಾದ ಡಾ. ಸಚಿನ್ ಆರ್ ರಕ್ತದಾನ ಹಾಗೂ ಅದರ ವಿವಿಧ ಹಂತಗಳ ಕುರಿತು ಪರಿಚಯಿಸಿದರು. ಮತ್ತೋರ್ವ ವೈದ್ಯಾಧಿಕಾರಿಗಳಾದ ಡಾ. ಲಿಖಿತ್ ಕುಮಾರ್ ಎಸ್ಆರ್ ಇವರು ರಕ್ತದಾನದ ಪ್ರಕ್ರಿಯೆ, ರಕ್ತದ ಪರೀಕ್ಷೆ ಹಾಗೂ ರಕ್ತವನ್ನು ಯಾವ ರೀತಿಯಾಗಿ ಅಗತ್ಯ ಇರುವವರಿಗೆ ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಲಕ್ಷ್ಮೀಶ್ ಎ ಎಸ್ ಇವರು ರಕ್ತದಾನವು ಅತ್ಯಂತ ಮಹತ್ವದ್ದಾಗಿದ್ದು ಪ್ರತಿಯೊಬ್ಬರೂ ಸಹ ಈ ಕಾರ್ಯದಲ್ಲಿ ತೊಡಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಕೆಎಂ ಸೂರ್ಯನಾರಾಯಣ ಉಪಾಧ್ಯಕ್ಷರು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಇವರು ರಕ್ತದಾನವು ಅತ್ಯಂತ ಶ್ರೇಷ್ಠವಾದ ಕೆಲಸ ಎಂದರು. ರಕ್ತದಾನದಿಂದಾಗಿ ತುರ್ತು ಸಂದರ್ಭಗಳಲ್ಲಿ ಇಂತಹ ರಕ್ತದಾನ ಶಿಬಿರಗಳು ಬಹಳ ಪ್ರಯೋಜನಕಾರಿ ಎಂದರು.
Rovers and Rangers ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎನ್ಎಸ್ಎಸ್ ಘಟಕ ಅಧಿಕಾರಿಗಳಾದ ಶ್ರೀ ಅಶೋಕ್ ಎಂ, ರೋವರ್ಸ್ ಹಾಗೂ ರೆಂಜರ್ಸ್ ಅಧಿಕಾರಿಗಳಾದ ಶ್ರೀಮತಿ ದೀಪ್ತಿ ನಾಯಕ್ ಹಾಗೂ ಶ್ರೀ ಗಜೇಂದ್ರ ಎಸ್, ಕಂದಾಯ ಅಧಿಕಾರಿಗಳಾದ ಶ್ರೀ ಶ್ರೀಧರ, ಮತ್ತು ಕಾಲೇಜಿನ ಭರತ್ ರಾಜ್,ಅಣ್ಣಪ್ಪ ಇವರು ಉಪಸ್ಥಿತರಿದ್ದರು. ಸ್ವಾಗತವನ್ನು ಕ್ಯಾll ನೂತನ್ ಎಚ್ ಡಿ ಹಾಗೂ ವಂದನಾರ್ಪಣೆಯನ್ನು ಶ್ರೀ ಪುನೀತ್ ನಾಯಕ್ ಪಿ ಇವರು ನಡೆಸಿಕೊಟ್ಟರು.ಪ್ರಾರ್ಥನೆಯನ್ನು ಕುಮಾರಿ ಆಶಿತಾ ತಂಡದವರು ನಡೆಸಿ ಕೊಟ್ಟರು.ಶ್ರೀ ವಿನಯ ಇವರು ನಿರೂಪಣೆಯನ್ನು ಮಾಡಿದರು.
ಈ ಶಿಬಿರದಲ್ಲಿ ಒಟ್ಟು 42 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
