Sunday, May 31, 2026
Sunday, May 31, 2026

Bapuji Institute of Hi-Tech Education ಯಶಸ್ವಿ ಬದುಕಿಗೆ ಶಾಲಾ ಪಾಠಕ್ಕಿಂತ ಜೀವನ ಪಾಠವೇ ಮುಖ್ಯ- ಡಾ.ರಾಹುಲ್ ದೇವರಾಜ್

Date:

Bapuji Institute of Hi-Tech Education ಜಾಗತಿಕ ಸವಾಲುಗಳನ್ನೆದುರಿಸುತ್ತಾ ಬದುಕಿನಲ್ಲಿ ಯಶಸ್ಸು ಸಾಧಿಸಲು ಶಾಲಾ ಪಾಠಕ್ಕಿಂತ ಜೀವನ ಪಾಠವೇ ಮುಖ್ಯ ಎಂದು ಸಮಾಜ ಕಾರ್ಯಕರ್ತ ಡಾ. ರಾಹುಲ್ ದೇವರಾಜ್ ಹೇಳಿದರು.

ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್ ನ ವಾಣಿಜ್ಯ ವಿಭಾಗದ ಬಿಕಾಂ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಪ್ರೌಢಾವಸ್ಥೆಯಲ್ಲಿನ ನಿರ್ಧಾರಗಳು ಸ್ವಂತದ್ದಾಗಿರಬೇಕೇ ವಿನಹ ಮತ್ತೊಬ್ಬರ ಅನುಭವದ ಎರವಲು ಅಭಿಪ್ರಾಯಗಳಾಗಿಬಾರದು, ಹಣ ಮತ್ತು ಅಧಿಕಾರಕ್ಕಿಂತ ಜ್ಞಾನ ಮತ್ತು ಸೇವೆಗೆ ಮೌಲ್ಯ ಜಾಸ್ತಿ ಎಂದರಲ್ಲದೆ ಮನುಷ್ಯ ಶಕ್ತಿಗಿಂತ ಮಿಗಿಲಾದ ದೈವಶಕ್ತಿ ಒಂದಿದೆ, ಅದು ನಮ್ಮ ಬದುಕಿಗೆ ಭರವಸೆ ಕೊಡಬಲ್ಲದು ಎಂದರು.

ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಡಾ. ಅಥಣಿ ಎಸ್ ವೀರಣ್ಣನವರು ಮಧ್ಯಪ್ರಾಚ್ಯದ ಯುದ್ಧವು ಪ್ರತಿಷ್ಠೆಯ ಹಾಗೂ ಸ್ವಾರ್ಥದ ಅಮಾನವೀಯ ನಡವಳಿಕೆಯಾಗಿದ್ದು ವಿಶ್ವವೇ ಇದರ ತೊಂದರೆ ಅನುಭವಿಸುತ್ತಿದೆ ಎಂದರಲ್ಲದೆ ಕೆಲಸ ಹುಡುಕಿ ಹೋಗುವುದಕ್ಕಿಂತ ನೂರಾರು ಜನಕ್ಕೆ ಕೆಲಸ ಕೊಡುವಂತಾಗಿರಿ ಎಂದು ಪದವೀಧರರಿಗೆ ಕರೆ ಕೊಟ್ಟರು.

ಕಾಲೇಜಿನ ಪ್ರಾಂಶುಪಾಲ ಡಾ. ಬಿ ವೀರಪ್ಪನವರ ಉಪಸ್ಥಿತಿಯಲ್ಲಿ ನಿರ್ದೇಶಕ ಡಾ.ಸ್ವಾಮಿ ತ್ರಿಭವನಾನಂದ ಸ್ವಾಗತ ಕೋರಿದರು. ಭಾಗ್ಯಶ್ರೀ ಬಿ ಎನ್, ಭೂಮಿಕಾ ನಾಡಿಗೇರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಲಿಖಿತಾ ತಂಡದವರು ಹಾಡಿದರು.

ಪ್ರೊ.ಶ್ವೇತಾ ಬಿ ವಿ ವರದಿ ವಾಚನ ಮಾಡಿದರು. ಪ್ರೊ.ನರೇಂದ್ರ ಡಿ ಆರ್, ಪ್ರೊ.ವೀಣಾ ಹೆಚ್ ಎಸ್, ಪ್ರೊ. ಮಂಜುಳಾ ಎ ಎನ್ ಪರಿಚಯ ಭಾಷಣ ಮಾಡಿದರೆ ಪ್ರೊ. ನಾಗರಾಜ್ ಎಮ್ ಎಸ್, ಪ್ರೊ. ಪ್ರಜ್ವಲ್ ಎ ಆರ್ ಪದವೀಧರರ ನಾಮ ಘೋಷಣೆ ಮಾಡಿದರು.

Bapuji Institute of Hi-Tech Education ಪ್ರೊ.ಜ್ಞಾನೇಶ್ವರ್ ಆರ್ ಎಸ್ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರೊ.ಮಂಜುನಾಥ್ ಬಿ ಬಿ ವಂದನೆ ಸಲ್ಲಿಸಿದರು. ರಾಂಕ್ ವಿಜೇತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಗಾಯಕ ಮಲ್ಲಿಕಾರ್ಜುನ ಶಾನುಭೋಗ ಭಾವಸಂಗಮ ನಡೆಸಿಕೊಟ್ಟರು.

-ಚಿತ್ರ ಹಾಗೂ ವರದಿ: ಡಾ. ಎಚ್.ಬಿ.ಮಂಜುನಾಥ,
ಹಿರಿಯ ಪತ್ರಕರ್ತರು-

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Mining Geology ಅಕ್ರಮ ಮರಳುಗಾರಿಕೆ ದಂಧೆ: ಜಿಲ್ಲೆಯ ವಿವಿಧೆಡೆ ಲೋಕಾಯುಕ್ತ ದಾಳಿ.

Department of Mining Geology ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ವಿರುದ್ಧ ಲೋಕಾಯುಕ್ತ...

Breaking News ಬೇಲಿ ಜಗಳ: ದಂಪತಿಗಳ ಮೇಲೆ ಮಾರಣಾಂತಿಕ ಹಲ್ಲೆ.

Breaking News ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕರಡಿಗ ಗ್ರಾಮದಲ್ಲಿ ರಸ್ತೆ...