CM Siddharamaiah ದಾವಣಗೆರೆ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ನಡೆಯುತ್ತಿರುವ ಉಪಚುನಾವಣೆಗಳ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯೋಗವು (ECI) ನಮ್ಮ ಸರ್ಕಾರಕ್ಕೆ ರಾಜ್ಯದ ಗ್ಯಾರಂಟಿ ಯೋಜನೆಗಳಡಿ ಬಿಡುಗಡೆಯಾದ ನಿಧಿಗಳ ವಿವರಗಳನ್ನು ಕೇಳಿರುವುದು ಚುನಾವಣಾ ಆಯೋಗದ ಪಕ್ಷಪಾತಿತನವನ್ನು ತೋರಿಸುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
CM Siddharamaiah ಮಹಾರಾಷ್ಟ್ರ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಚುನಾವಣೆಗೂ ಮುನ್ನ ಅಲ್ಲಿನ ಬಿಜೆಪಿ ಸರ್ಕಾರ ನಗದು ವರ್ಗಾವಣೆ ಯೋಜನೆಗಳ ಜಾರಿಮಾಡಿದಾಗ ಕಣ್ಮುಚ್ಚಿ ಕೂತಿದ್ದ ಚುನಾವಣಾ ಆಯೋಗ, ಕಳೆದ ಎರಡೂ ಮುಕ್ಕಾಲು ವರ್ಷದಿಂದ ಜಾರಿಯಿರುವ ಗ್ಯಾರಂಟಿ ಯೋಜನೆಗಳ ಲೆಕ್ಕಕೇಳಿ ನಮ್ಮನ್ನು ಬೆದರಿಸಲು ಹೊರಟಿದೆ. ಇಂಥ ಗೊಡ್ಡು ಬೆದರಿಕೆ ಬಗ್ಗುವವರು ನಾವಲ್ಲ.
ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಖಡಕ್ ಆಗಿ ತಮ್ಮ ಅನಿಸಿಕೆಯನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
