ಮಲೆನಾಡಿನಲ್ಲಿಯೂ ಕೂಡ ಇರಾನ್ ಇಸ್ರೇಲ್ ಹಾಗೂ ಅಮೇರಿಕ ಯುದ್ಧದ ಬಿಸಿ ತಟ್ಟಿದೆ. ಶಿವಮೊಗ್ಗದ ಹಳೆಯ ಹಾಗೂ ಪ್ರಸಿದ್ಧ ಪಲ್ಲವಿ ಹೋಟೆಲ್ ನಲ್ಲೂ ದೋಸೆಗಾಗಿ ತಿಂಡಿ ಪ್ರಿಯರು ಪರದಾಡುವಂತಾಗಿದೆ.
ಕಳೆದ 28 ವರ್ಷಗಳಿಂದ ಶಿವಮೊಗ್ಗದ ಪಲ್ಲವಿ ಹೋಟೆಲ್ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಸಿಗುವ ದೋಸೆ ಹಾಗೂ ಪೂರಿಗೆ ತಿಂಡಿ ಪ್ರಿಯರಿದ್ದಾರೆ. ಈಗ ಗ್ಯಾಸ್ ಸಿಗದ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಸೌದೆ ಒಲೆಗೆ ಮೊರೆ ಹೋಗಿದ್ದಾರೆ. ಆದ್ದರಿಂದ ಇಡ್ಲಿ ಹಾಗೂ ಊಟ ಟೀ ಮಾತ್ರ ಸಿಗುತ್ತಿದೆ. ಗ್ಯಾಸ್ ಸಿಗದಿದ್ದಕ್ಕೆ ಮೆನುವಿನಲ್ಲಿ ಹಲವು ತಿಂಡಿಗಳನ್ನು ಕಟ್ ಮಾಡಲಾಗಿದೆ.
