Sri Kala Skill Development Centre ಶಿವಮೊಗ್ಗ ನಗರದಲ್ಲಿ ಪತ್ರಕರ್ತರಾಗಿ, ಸಮಾಜಮುಖಿ ದನಿಯಾಗಿ ಅವರ ೯೬ ವರ್ಷದ ಪ್ರಾಯದವರಿಗೂ ದಣಿವರಿಯದ ಸೇವೆ ಸಲ್ಲಿಸಿ ಮಲೆನಾಡಿನ ಹೋರಾಟದ ಈ ನೆಲೆಯಲ್ಲಿ ಶಾಸನವಾದ ಹಿರಿಯ ಪತ್ರಕರ್ತರಾದ ಕಾಮ್ರೆಡ್ ಎಂ ಲಿಂಗಪ್ಪ ಅವರ ಹೆಸರಿನಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಐವರಿಗೆ ಏ.9ರಂದು ಆರ್.ಟಿ.ಓ ರಸ್ತೆಯ ಶ್ರೀ ಕಲಾ ಕೌಶಲ್ಯ ಅಭಿವೃದ್ಧಿ ಕೇಂದ್ರದ ಆವರಣದಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ ಸಂಸ್ಥೆಯು ತಿಳಿಸಿದೆ.
ಈ ಪ್ರಶಸ್ತಿಯು ಮಾದರಿಯಾಗಿದ್ದು ಅಲ್ಲದೆ, ಪ್ರಶಸ್ತಿಗೆ ಭಾಜನರಾದವರಿಗೆ ಸ್ಪೂರ್ತಿ ಹಾಗೂ ಜವಾಬ್ದಾರಿಯು ಆಗಿದೆ ಎಂದು ಹೇಳಿದೆ, ನಿಷ್ಟೆಯ ಸೇವೆ, ಹೋರಾಟಗಳ ಮುಖೇನ ತಮ್ಮನ್ನು ತಾವು ಗುರುತಿಸಿಕೊಂಡಿದ್ದ ಪತ್ರಕರ್ತರಾದ ಕಾಮ್ರೆಡ್ ಎಂ ಲಿಂಗಪ್ಪನವರು ನಾಡು ಕಂಡ ಮೊದಲ ಆಗ್ರಮಾನ್ಯರು ಅಲ್ಲದೆ ಚಿರಪರಿಚಿತರಾಗಿದ್ದು, ಅವರ ಧರಿಸುತ್ತಿದ್ದ ವಸ್ತ್ರಗಳು, ಹೋರಾಟಕ್ಕೆ ಬಳಸುತ್ತಿದ್ದ ಜಾಗಟೆಗಳಿಂದ ಸಾಮಾಜಿಕ ನ್ಯಾಯ ದಕ್ಕಿಸಿಕೊಳ್ಳುವಲ್ಲಿ ಮುಖ್ಯ ಪಾತ್ರವಾಗಿತ್ತು, ಇಂತಹ ಮುತ್ಸದ್ಧಿತನದ ಹೆಸರಿನಲ್ಲಿ ಈ ವರುಷದಿಂದ ಕಾಮ್ರೆಡ್ ಎಂ ಲಿಂಗಪ್ಪ ಪ್ರಶಸ್ತಿ ನೀಡುವ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು ಅವರೊಂದಿಗೆ ಒಡನಾಟವಿದ್ದವರು, ಸ್ನೇಹಿತರು, ಹಿತೈಷಿಗಳು ಕಾರ್ಯಕ್ರಮಕ್ಕೆ ಮುಕ್ತವಾಗಿ ಬರುವಂತೆ ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ ಸಂಸ್ಥೆಯು ಈ ಮೂಲಕ ವಿನಂತಿಸಿದೆ.
ಪ್ರಶಸ್ತಿಗೆ ಭಾಜನರಾದವರು : ಸಿನಿಮಾ ರಂಗದಿಂದ ಸನ್ಮಾನ್ಯ ಶ್ರೀ ರಘುರಾಜ್ ಮಲ್ನಾಡ್, ಪತ್ರಕರ್ತ ವಲಯದಿಂದ ಸನ್ಮಾನ್ಯ ಶ್ರೀ ರೇಣುಕೇಶ್,
ಲೇಖಕರ ವಲಯದಿಂದ ಸನ್ಮಾನ್ಯ ಶ್ರೀ ಖಲಂದರ್ ರಜ್ವಿ ಬೆಜ್ಜವಳ್ಳಿ, ಕನ್ನಡ ಸೇವಾ ವಲಯದಿಂದ ಕೆ. ಪ್ರಸನ್ನ ಗೌಡ ವಕೀಲರ ವಲಯದಿಂದ ರೇಖೇಶ್ ಮಾನೆ ಇಂತಿವರುಗಳಾಗಿರುತ್ತಾರೆ,
Sri Kala Skill Development Centre ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ : ಡಿ.ರವಿಕುಮಾರ್, ಸಂಸ್ಥಾಪಕರು, ಅಕ್ಷರ ಎಜ್ಯುಕೇಷನ್ ಟ್ರಸ್ಟ್. ಜಿ.ಗೋಪಾಲಕೃಷ್ಣ, ಮಾಜಿ ಪಾಲಿಕೆ ಸದಸ್ಯರು. ಶಿವಮೊಗ್ಗ. ಕಲೀಮ್ ಪಾಷಾ, ಅಧ್ಯಕ್ಷರು ದಕ್ಷಿಣ ಬ್ಲಾಕ್ ಕಾಂಗ್ರೆಸ್, ಶಿವಮೊಗ್ಗ. ಗೀತಾ ಮಾನೆ, ವಕೀಲರು, ಶಿವಮೊಗ್ಗ.
ನಟರಾಜ್ ಆರ್.ಟಿ, ಸಂಚಾಲಕ, ಹಿಂದೂಳಿದ ಜನಜಾಗೃತಿ ಸಮಿತಿ. ಕುಮರೇಶ್.ಎನ್, ಉದ್ಯಮಿಗಳು, ಶಿವಮೊಗ್ಗ ಅವರುಗಳು ಆಗಮಿಸಲಿದ್ದಾರೆ ಎಂದು ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ ಸಂಸ್ಥೆಯು ತಿಳಿಸಿದೆ.
