Monday, August 24, 2026
Monday, August 24, 2026

Sri Kala Skill Development Centre ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಕಾ. ಎಂ.ಲಿಂಗಪ್ಪ ಸ್ಮಾರಕ ಪ್ರಶಸ್ತಿ ಘೋಷಣೆ

Date:

Sri Kala Skill Development Centre ಶಿವಮೊಗ್ಗ ನಗರದಲ್ಲಿ ಪತ್ರಕರ್ತರಾಗಿ, ಸಮಾಜಮುಖಿ ದನಿಯಾಗಿ ಅವರ ೯೬ ವರ್ಷದ ಪ್ರಾಯದವರಿಗೂ ದಣಿವರಿಯದ ಸೇವೆ ಸಲ್ಲಿಸಿ ಮಲೆನಾಡಿನ ಹೋರಾಟದ ಈ ನೆಲೆಯಲ್ಲಿ ಶಾಸನವಾದ ಹಿರಿಯ ಪತ್ರಕರ್ತರಾದ ಕಾಮ್ರೆಡ್ ಎಂ ಲಿಂಗಪ್ಪ ಅವರ ಹೆಸರಿನಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಐವರಿಗೆ ಏ.9ರಂದು ಆರ್.ಟಿ.ಓ ರಸ್ತೆಯ ಶ್ರೀ ಕಲಾ ಕೌಶಲ್ಯ ಅಭಿವೃದ್ಧಿ ಕೇಂದ್ರದ ಆವರಣದಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ ಸಂಸ್ಥೆಯು ತಿಳಿಸಿದೆ.

ಈ ಪ್ರಶಸ್ತಿಯು ಮಾದರಿಯಾಗಿದ್ದು ಅಲ್ಲದೆ, ಪ್ರಶಸ್ತಿಗೆ ಭಾಜನರಾದವರಿಗೆ ಸ್ಪೂರ್ತಿ ಹಾಗೂ ಜವಾಬ್ದಾರಿಯು ಆಗಿದೆ ಎಂದು ಹೇಳಿದೆ, ನಿಷ್ಟೆಯ ಸೇವೆ, ಹೋರಾಟಗಳ ಮುಖೇನ ತಮ್ಮನ್ನು ತಾವು ಗುರುತಿಸಿಕೊಂಡಿದ್ದ ಪತ್ರಕರ್ತರಾದ ಕಾಮ್ರೆಡ್ ಎಂ ಲಿಂಗಪ್ಪನವರು ನಾಡು ಕಂಡ ಮೊದಲ ಆಗ್ರಮಾನ್ಯರು ಅಲ್ಲದೆ ಚಿರಪರಿಚಿತರಾಗಿದ್ದು, ಅವರ ಧರಿಸುತ್ತಿದ್ದ ವಸ್ತ್ರಗಳು, ಹೋರಾಟಕ್ಕೆ ಬಳಸುತ್ತಿದ್ದ ಜಾಗಟೆಗಳಿಂದ ಸಾಮಾಜಿಕ ನ್ಯಾಯ ದಕ್ಕಿಸಿಕೊಳ್ಳುವಲ್ಲಿ ಮುಖ್ಯ ಪಾತ್ರವಾಗಿತ್ತು, ಇಂತಹ ಮುತ್ಸದ್ಧಿತನದ ಹೆಸರಿನಲ್ಲಿ ಈ ವರುಷದಿಂದ ಕಾಮ್ರೆಡ್ ಎಂ ಲಿಂಗಪ್ಪ ಪ್ರಶಸ್ತಿ ನೀಡುವ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು ಅವರೊಂದಿಗೆ ಒಡನಾಟವಿದ್ದವರು, ಸ್ನೇಹಿತರು, ಹಿತೈಷಿಗಳು ಕಾರ್ಯಕ್ರಮಕ್ಕೆ ಮುಕ್ತವಾಗಿ ಬರುವಂತೆ ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ ಸಂಸ್ಥೆಯು ಈ ಮೂಲಕ ವಿನಂತಿಸಿದೆ.

ಪ್ರಶಸ್ತಿಗೆ ಭಾಜನರಾದವರು : ಸಿನಿಮಾ ರಂಗದಿಂದ ಸನ್ಮಾನ್ಯ ಶ್ರೀ ರಘುರಾಜ್ ಮಲ್ನಾಡ್, ಪತ್ರಕರ್ತ ವಲಯದಿಂದ ಸನ್ಮಾನ್ಯ ಶ್ರೀ ರೇಣುಕೇಶ್,
ಲೇಖಕರ ವಲಯದಿಂದ ಸನ್ಮಾನ್ಯ ಶ್ರೀ ಖಲಂದರ್ ರಜ್ವಿ ಬೆಜ್ಜವಳ್ಳಿ, ಕನ್ನಡ ಸೇವಾ ವಲಯದಿಂದ ಕೆ. ಪ್ರಸನ್ನ ಗೌಡ ವಕೀಲರ ವಲಯದಿಂದ ರೇಖೇಶ್ ಮಾನೆ ಇಂತಿವರುಗಳಾಗಿರುತ್ತಾರೆ,

Sri Kala Skill Development Centre ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ : ಡಿ.ರವಿಕುಮಾರ್, ಸಂಸ್ಥಾಪಕರು, ಅಕ್ಷರ ಎಜ್ಯುಕೇಷನ್ ಟ್ರಸ್ಟ್. ಜಿ.ಗೋಪಾಲಕೃಷ್ಣ, ಮಾಜಿ ಪಾಲಿಕೆ ಸದಸ್ಯರು. ಶಿವಮೊಗ್ಗ. ಕಲೀಮ್ ಪಾಷಾ, ಅಧ್ಯಕ್ಷರು ದಕ್ಷಿಣ ಬ್ಲಾಕ್ ಕಾಂಗ್ರೆಸ್, ಶಿವಮೊಗ್ಗ. ಗೀತಾ ಮಾನೆ, ವಕೀಲರು, ಶಿವಮೊಗ್ಗ.
ನಟರಾಜ್ ಆರ್.ಟಿ, ಸಂಚಾಲಕ, ಹಿಂದೂಳಿದ ಜನಜಾಗೃತಿ ಸಮಿತಿ. ಕುಮರೇಶ್.ಎನ್, ಉದ್ಯಮಿಗಳು, ಶಿವಮೊಗ್ಗ ಅವರುಗಳು ಆಗಮಿಸಲಿದ್ದಾರೆ ಎಂದು ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ ಸಂಸ್ಥೆಯು ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.K. Shivakumar 500 ಕೆಪಿಎಸ್ ಶಾಲೆಗಳನ್ನ ಸಮಗ್ರ ಉನ್ನತೀಕರಿಸುವ “ಶಿಕ್ಷಣ ಕ್ರಾಂತಿ-2030″ಯೋಜನೆಗೆ ಹೆಜ್ಜೆಯಿಟ್ಟಿದ್ದೇವೆ,- ಡಿ.ಕೆ.ಶಿವಕುಮಾರ್.

D.K. Shivakumar ನಮ್ಮ ಹಳ್ಳಿಯ ಮಣ್ಣಿನ ಪ್ರತಿಭೆಗಳು ವಿಶ್ವದಂಗಳದಲ್ಲಿ ರಾರಾಜಿಸಬೇಕು, ಅವರಿಗೆ ಅತ್ಯುನ್ನತ...

B.Y. Raghavendra “ಸರ್ಕಾರಿ ಶಾಲೆಗೆ ನೀವು ಸಲ್ಲಿಸಿರುವ ಅಪಾರಸೇವೆಗೆ ದೊರೆತ ಅರ್ಹ ಗೌರವ”- ಬಿ.ವೈ.ರಾಘವೇಂದ್ರ.

B.Y. Raghavendra ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿರುವ...

Shivamogga News ಹರಕೆರೆ ರಿಂಗ್ ರಸ್ತೆಯಲ್ಲಿ ದರೋಡೆ ಮಾಡಿದ್ದ ಖದೀಮರು ಈಗ ‘ಅಂದರ್’.

Shivamogga News ಹರಕೆರೆ ರಿಂಗ್‌ರೋಡ್‌ನಲ್ಲಿ ಸಾರ್ವಜನಿಕರನ್ನು ಬೆದರಿಸಿ, ಹಲ್ಲೆ ನಡೆಸಿ ಹಣ...

D. Devaraj Arasu ದೇವರಾಜ ಅರಸು ಅವರಿಗೆ ನಮ್ಮರೈತರು ಚಿರ ಋಣಿಯಾಗಿರಬೇಕು – ಬಿ.ಆರ್.ಜಯಂತ್.

D. Devaraj Arasu  1974ರ ಭೂ ಸುಧಾರಣಾ ಕಾಯ್ದೆಗೆ ಐತಿಹಾಸಿಕ ಮಹತ್ವವಿದ್ದು,...