ಶಿವಮೊಗ್ಗ ನಗರದ 35 ವಾರ್ಡ್ ಗಳ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಜಕಾಲುವೆ ಮತ್ತು ಚರಂಡಿಗಳ ಹೂಳು ತೆಗೆಯದ ಕಾರಣ ಮೊನ್ನೆ ರಾತ್ರಿ ಬಂದ ಮಳೆಗೆ ಮನೆಗಳಿಗೆ ನೀರು ನುಗ್ಗಿ ಎಲ್ಲ ವಾರ್ಡ್ಗಳಲ್ಲಿ ರಸ್ತೆ ಮೇಲೆ ಹರಿಯುತ್ತಿದ್ದು ಹಲವಾರು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಆಹಾರ ವಸ್ತುಗಳು ಹಾಗೂ ಲಕ್ಷಾಂತರ ಮೌಲ್ಯದ ಗೃಹ ಉಪಯೋಗಿ ವಸ್ತುಗಳು ನೀರಿನಲ್ಲಿ ಮುಳುಗಿ ಜನ ಸಂಕಷ್ಟ ಎದುರಿಸಿದ್ದಾರೆ, ಇದರಿಂದ ಜನ ಮಹಾನಗರ ಪಾಲಿಕೆಗೆ ಆಡಳಿತ ವರ್ಗಕ್ಕೆ ಇಡಿ ಶಾಪವನ್ನು ಹಾಕುತ್ತಿದ್ದು. ಒಂದು ಮಳೆಗೆ ಹೀಗಾದರೆ ಮುಂಬರುವ ಮಳೆಗಾಲದಲ್ಲಿ ಯಾವ ಸ್ಥಿತಿಯೆಂದು ಯೋಚಿಸುತ್ತಿದ್ದಾರೆ.
ಈಗಾಗಲೇ ಜನಪ್ರತಿನಿಧಿಗಳು ನೀರು ನುಗ್ಗಿದ ಮನೆಗಳಿಗೆ ಆಗಮಿಸಿ ಪರಿಹಾರದ ಭರವಸೆಯನ್ನು ನೀಡಿದ್ದಾರೆ ಆದರೆ ಪರಿಹಾರ ಭರವಸೆಯಾಗಿ ಉಳಿಯದೆ, ಕೂಡಲೆ ತಾಲೂಕು ಆಡಳಿತ,ಮಹಾನಗರ ಪಾಲಿಕೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ನೀರು ನುಗ್ಗಿದ ಮನೆಗಳ ಸರ್ವೆ ನಡೆಸಿ ಸೂಕ್ತ ಪರಿಹಾರ ನೀಡಬೇಕು, ರಾಜ ಕಾಲುವೆಯ ಹೂಳು ತೆಗೆಸಿ ಜೊತೆಗೆ ನಗರದಲ್ಲಿ ಹಲವು ವಾರ್ಡ್ ಗಳಲ್ಲಿ ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲಿ ಚರಂಡಿಗಳು ನಿರ್ಮಾಣವಾದ ದಿನದಿಂದ ಹೂಳು ತೆಗೆಯದೆ ಸಣ್ಣ ಮಳೆಯಲ್ಲೂ ಅವಾಂತರ ಸೃಷ್ಟಿಸುತ್ತಿದ್ದು. ಹಾಗೂ ಸ್ಮಾರ್ಟ್ ಸಿಟಿ ವ್ಯಾಪ್ತಿಗೆ ಒಳಪಡದ ಹಲವು ವಾರ್ಡುಗಳಲ್ಲಿ ಚರಂಡಿಗಳು, ಡೆಕ್ ಸ್ಲಾಬ್ ಗಳು ಶಿಥಿಲಗೊಂಡಿದ್ದು. ಇಂತಹ ಶಿಥಿಲಗೊಂಡ ಚರಂಡಿಗಳನ್ನು ಮರು ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಯುವ ಕಾಂಗ್ರೆಸ್ ಮುಖಂಡ ಹೆಚ್.ಪಿ. ಗಿರೀಶ್ ಆಗ್ರಹಿಸಿದ್ದಾರೆ.
