ಹೊಸನಗರ ವಿಧಾನಸಭಾ ಕ್ಷೇತ್ರ ಮರು ಸ್ಥಾಪನೆಗೆ ಆಗ್ರಹಿಸಿ ಹೊಸನಗರದಿಂದ ರಿಪ್ಪನ್ ಪೇಟೆವರೆಗೆ 45 ಕಿ.ಮೀ. ಬೃಹತ್ಪಾದಯಾತ್ರೆ ಆರಂಭಗೊಂಡಿದೆ.
ಹೊಸನಗರದ ಮೂಲ ಗದ್ದೆ ಮಠದ ಅಭಿನವ ಶ್ರೀ ಚನ್ನಬಸವ ಸ್ವಾಮೀಜಿ, ಶಾಸಕ ಬಿ ಸ್ವಾಮಿ ರಾವ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಅವರ ನೇತೃತ್ವದಲ್ಲಿ ಪಾದಯಾತ್ರೆ ಆರಂಭಗೊಂಡಿದೆ.
ಹೊಸನಗರ ತಾಲೂಕು ಅಭಿವೃದ್ಧಿಗಾಗಿ ಕ್ಷೇತ್ರ ಮರು ಸ್ಥಾಪನೆಗೆ ಒತ್ತಾಯಿಸಲಾಯಿತು. ಜನಪ್ರತಿನಿಧಿಗಳು ಸೇರಿದಂತೆ ಸಾವಿರಾರು ಜನರು ಪಾದಯಾತ್ರೆಯಲ್ಲಿ ಪಕ್ಷತೀತವಾಗಿ ಭಾಗಿಯಾಗಿದ್ದಾರೆ.
ಬಹಿರಂಗ ಸಮಾವೇಶದ ಬಳಿಕ ರಿಪ್ಪನ್ ಪೇಟೆಯಲ್ಲಿ ಪಾದಯಾತ್ರೆ ಕೊನೆಗೊಳ್ಳಲಿದೆ.
