Monday, May 25, 2026
Monday, May 25, 2026

B.Y. Vijayendra ದಾವಣಗೆರೆ ಚುನಾವಣೆ: ಬಿಜೆಪಿ ಅಭ್ಯರ್ಥಿಗೇ ಗೆಲುವು- ಬಿ.ವೈ.ವಿಜಯೇಂದ್ರ.

Date:

B.Y. Vijayendra  ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರು.

ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ನಡೀತಿದೆ.
ಏಪ್ರಿಲ್ 9 ಕ್ಕೆ ಮತದಾನ ನಡೆಯಲಿದೆ.
ಕಳೆದ ಒಂದು ವಾರದಿಂದ ಬಾಗಲಕೋಟೆ ನಗರ ಗ್ರಾಮಾಂತರ ಭಾಗದಲ್ಲಿ ಪ್ರವಾಸ ಮಾಡಿದ್ದೇನೆ ಎಂದರು.

ಎಲ್ಲಾ ಮುಖಂಡರ ಜೊತೆ ಪ್ರವಾಸ ಮಾಡಿದ್ದೇನೆ. ನಮ್ಮ ಅಭ್ಯರ್ಥಿ ವೀರಣ್ಣ ಚರಂತಿಮಠ ಗೆಲ್ತಾರೆ.
ನೂರಕ್ಕೆ ನೂರು ವಿಶ್ವಾಸವಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರವೂ ಬಿಜೆಪಿಯ ಐತಿಹಾಸಿಕ ಗೆಲುವು ಸಾಕ್ಷಿಯಾಗುತ್ತೆ ಎಂದು ಹೇಳಿದರು.

ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಮೋಸ ಮಾಡಿರೋದು ಮನವರಿಕೆ ಅಗಿದೆ.
ಬೇರೆ ಬೇರೆ ಕಾರಣಕ್ಕೆ ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ತಾರೆ. ಸಿದ್ದರಾಮಯ್ಯ ಅವರ ಹತಾಶೆಯಲ್ಲೇ ಗೊತ್ತಾಗುತ್ತೆ.
ವಿಜಯೇಂದ್ರ ಸಫಲರಾಗಲ್ಲ ಎಂದು ಸಿಎಂ ಹೇಳಿದ್ದಾರೆ ಎಂದು ತಿಳಿಸಿದರು.

B.Y. Vijayendra ನಾನು ಸಫಲ ಅನ್ನೋದಕ್ಕಿಂತ ಕಾರ್ಯಕರ್ತರು- ಮುಖಂಡರ ಶ್ರಮ ಇದೆ. ಸಿಎಂ ಸಿದ್ದರಾಮಯ್ಯ ಕೂಡ ಭಯಭೀತರಾಗಿದ್ದಾರೆ.
ಗ್ಯಾರಂಟಿಗಳ ಬಗ್ಗೆ ಸಿಎಂ ಗೆ ಭರವಸೆ ಹೋಗಿದೆ.ಬಾಗಲಕೋಟೆಯಲ್ಲೂ 15 ಕ್ಕೂ ಹೆಚ್ಚು ಸಚಿವರು ಸೂಟ್ ಕೇಸ್ ಸಹಿತ ಬಂದಿದ್ದಾರೆ. ದಾವಣಗೆರೆಯಲ್ಲೂ ಬಂದು ಹೋಗಿ ಆಗಿದೆ. ಇದು ಯಾವುದೇ ಕಾರಣಕ್ಕೂ ಮತದಾರರ ಮೇಲೆ ಪರಿಣಾಮ ಬೀರಲ್ಲ. ಎರಡು ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲುತ್ತೇ.
ಬಾಗಲಕೋಟೆಯಲ್ಲಿ ಬಿಜೆಪಿ ಗೆದ್ದಾಗಿದೆ. ನಮ್ಮ ಅಭ್ಯರ್ಥಿ ಅಂತರ ಹೆಚ್ಚಾಗುತ್ತೇ ಅಂದ್ರೇ ಆಗಲಿ ಬಿಡಿ.
ಕಾಂಗ್ರೆಸ್ ನವರು ಸಹಾಯ ಮಾಡ್ತಿದ್ದಾರೆ. ಯಾರು ಬಂದ್ರೂ ಸ್ವಾಗತ ಮಾಡ್ತೇನೆ ಎಂದು ತಿಳಿಸಿದರು.

ಹೊರಗಡೆ ಮೈಕ್, ಸಾರ್ವಜನಿಕ ಸಭೆಯಲ್ಲಿ ಏನು ಬೇಕಾದ್ರೂ ಹೇಳಬಹುದು. ಸದನದಲ್ಲಿ ಹೇಳುವ ಎದೆಗಾರಿಕೆ ಇಲ್ಲ. ಬಿಜೆಪಿ ಎಷ್ಟು ಕೇಳಿದ್ರೂ ಸದನದಲ್ಲಿ ಹೇಳಲಿಲ್ಲ.
ಸಿಎಂ ಇರ್ತಾರಾ, ಬದಲಾಗ್ತಾರ ಗೊತ್ತಿಲ್ಲ. ಸಿಎಂ ಇದ್ದರೂ, ಬದಲಾದರೂ ರಾಜ್ಯದ ಆರ್ಥಿಕ ಸ್ಥಿತಿ ಬದಲಾಗಲ್ಲ. ಚುನಾವಣೆ ಫಲಿತಾಂಶ ಸರ್ಕಾರಕ್ಕೆ ಪರಿಣಾಮ ವಿಚಾರ.
ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲೋದು ಶತಸಿದ್ಧ.ಸರ್ಕಾರಕ್ಕೆ ಯಾವ ರೀತಿ ಪರಿಣಾಮ ಬರುತ್ತೇ ಅಂತ ನಾನು ಹೇಳಲ್ಲ ಎಂದು ಹೇಳಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Dinesh Gundu Rao ಎಬೊಲಾ ಸೋಂಕು ಬಾರದಂತೆ ಆರೋಗ್ಯ ಇಲಾಖೆ ಅಗತ್ಯ ಕ್ರಮ.- ದಿನೇಶ್ ಗುಂಡೂರಾವ್

Dinesh Gundu Rao ಎಬೋಲಾ ಸೋಂಕು ಬಾರದಂತೆ ತಡೆಯಲು ಆರೋಗ್ಯ ಇಲಾಖೆಯಿಂದ...

Madhu Bangarappa ಶಿವಮೊಗ್ಗಕ್ಕೆ ಜೂನ್ 1 ರಂದು ಸೀಎಮನ ಭೇಟಿ: ಮಧು ಬಂಗಾರಪ್ಪ ಅವರಿಂದ ಪೂರ್ವಸಿದ್ಧತೆ ಪರಿಶೀಲನೆ

Madhu Bangarappa ಜೂನ್ 01 ರಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ನೆರವೇರಿಸಲಿರುವ...

Madhu Bangarappa ಜಿಲ್ಲಾ ಪ್ರಗತಿ ಪರಿಶಿಲನಾ ಸಭೆ. ವಿವಿಧ ಸಮಸ್ಯೆಗಳ ಬಗ್ಗೆ ಪಕ್ಷಾತೀತ ನಿರ್ಣಯ- ಮಧು ಬಂಗಾರಪ್ಪ.

Madhu Bangarappa ಇಂದು ಶಿವಮೊಗ್ಗದ ಜಿಲ್ಲಾ ಪಂಚಾಯತ್‌ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ...

CM Siddharamaiah ಸಮಗ್ರ ಅಭಿವೃದ್ಧಿಗೆ ನಾವು ಮುಂದಡಿ ಇಟ್ಟಿದ್ದೇವೆ- ಸಿದ್ಧರಾಮಯ್ಯ

CM Siddharamaiah ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವ ಮೂಲಕ ಕ್ರೀಡೆ,...