Shivamogga – Bhadravati Urban Development Authority ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯ ಶ್ರೀ ವಜ್ರೇಶ್ವರಿ ವಿನಾಯಕ ದೇವಾಲಯದಲ್ಲಿ ” ಶ್ರೀ ಮಹಾಗಣಪತಿ ಸ್ಥಿರಮೂರ್ತಿ ಪ್ರತಿಷ್ಠಾಪನೆಯ 22ನೇ ವರ್ಷದ ವಾರ್ಷಿಕೋತ್ಸವ” ಅಂಗವಾಗಿ ಗಣ ಹೋಮ ಕುಂಭಾಭಿಷೇಕ ಪೂಜಾ ಕಾರ್ಯಕ್ರಮಗಳು ಹಾಗೂ ವಾಸನ್ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಆಯೋಜನೆ ಮಾಡಿದ್ದ ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಚ್ಎಸ್ ಸುಂದರೇಶ್ ಅವರು ಚಾಲನೆ ನೀಡಿದರು.
Shivamogga – Bhadravati Urban Development Authority ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್, ವಜ್ರೇಶ್ವರಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ದೇವರಾಜ್ , ಸಿಟಿ ಕೋ ಆಪರೇಟಿನ ಬ್ಯಾಂಕಿನ ಅಧ್ಯಕ್ಷರಾದ ಕೆ.ರಂಗನಾಥ್, ದುರ್ಗಿಗುಡಿ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ನರಸಿಂಹ ಗಂಧದ ಮನೆ, ಪ್ರಮುಖರಾದ ಸಿ ರವಿ, ಕೆಆರ್ ಸುರೇಶ್, ಕೇಶವಮೂರ್ತಿ ,ಶಿವು ಎಸ್.ಸೋಮೇಶ್, ಪುರುಷೋತ್ತಮ್ ,ದಾನೇಶ್ ,ಕೇಶವಮೂರ್ತಿ, ಕಾತಿ ರಘು, ಮಾರುತಿ ಸಿ, ರಾಜೇಶ್ ಮಂದಾರ, ವಿನಯ್, ಬಸವರಾಜ್,ಸಂದೀಪ್ ದೇವಸ್ಥಾನದ ಪ್ರಧಾನ ಅರ್ಚಕರಾದ ಯೋಗೀಶ್ ಉಡುಪ ಹಾಗೂ ಸಮಿತಿಯ ಸದಸ್ಯರುಗಳು ಹೊಸಮನೆ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.
