Thursday, May 14, 2026
Thursday, May 14, 2026

Klive Special Article ಬದಲಾಗುವುದೆಂದರೆ… ಮ್ಯಾಜಿಕ್ ಅಲ್ಲ

Date:

ಲೇ; ಎಸ್.ಪಿ.ಶ್ವೇತಾ.
ಶೃಂಗೇರಿ.

Klive Special Article ಬದಲಾವಣೆ ಜಗತ್ತಿನ ನಿಯಮ.
ಹುಟ್ಟಿದ ಕ್ಷಣದಿಂದ ಕೊನೆಯ ಉಸಿರಿನವರೆಗೂ ಜೀವನದ ಪ್ರತಿಯೊಂದು ಹಂತವೂ ಬದಲಾವಣೆಯಲ್ಲೇ ಸಾಗುತ್ತದೆ. ಮನುಷ್ಯನು ಮಗು ಆಗಿ ಹುಟ್ಟಿ, ಬಾಲ್ಯ–ಯೌವನ–ಮುಪ್ಪು–ವೃದ್ಧಾಪ್ಯ ಎಂಬ ಹಂತಗಳನ್ನು ದಾಟುತ್ತಾ ದೈಹಿಕವಾಗಿಯೂ, ಮಾನಸಿಕವಾಗಿಯೂ ನಿರಂತರವಾಗಿ ಬದಲಾಗುತ್ತಾನೆ. ಬೆಳವಣಿಗೆಯೊಂದಿಗೆ ಆಹಾರಶೈಲಿ, ಇಷ್ಟ–ಅನಿಷ್ಟಗಳು, ಅಭಿರುಚಿಗಳು ಎಲ್ಲವೂ ಬದಲಾಗುತ್ತವೆ. ಬಾಲ್ಯದಲ್ಲಿ ಇಷ್ಟವಿರದ ಆಹಾರವೂ, ದೊಡ್ಡವನಾದಾಗ ಇಷ್ಟವಾಗುವುದು ಸಹಜ, ಬಾಲ್ಯದಲ್ಲಿ ಇಷ್ಟ ಪಡುತ್ತಿದ್ದ ಭೋಜನಗಳು ಕೂಡಾ ದೇಹಕ್ಕೆ ಅಹಿತ ಅನ್ನಿಸುವುದು ಕೂಡಾ ಸಹಜ

ಮಣ್ಣಿನಲ್ಲಿ ಬಿತ್ತಿದ ಬೀಜ ಮೊದಲು ಸಸಿಯಾಗಿ, ನಂತರ ಗಿಡವಾಗಿ, ಕೊನೆಗೆ ಮರವಾಗಿ ಹಣ್ಣು–ಹೂವುಗಳನ್ನು ಕೊಡುತ್ತದೆ. ಹಕ್ಕಿಗಳಿಗೆ ಆಶ್ರಯ ನೀಡುತ್ತದೆ. ಋತುಬದಲಾವಣೆಗೆ ತಕ್ಕಂತೆ ಎಲೆಗಳನ್ನು ಉದುರಿಸಿ, ಮತ್ತೆ ಹೊಸ ಚಿಗುರುಗಳನ್ನು ಸೃಷ್ಟಿಸುತ್ತದೆ. ಉದುರಿದ ಎಲೆಗಳಿಗೂ ಲೆಕ್ಕವಿಲ್ಲ, ಹೊಸ ಎಲೆಗಳಿಗೂ ಲೆಕ್ಕವಿಲ್ಲ. ಮರವು ಉದುರಿದ ಎಲೆಗಳಿಗಾಗಿ ಅಳುವುದಿಲ್ಲ; ವಸಂತದ ಚಿಗುರುಗಳು ಹಳೆಯದನ್ನು ಮರೆಮಾಡುತ್ತವೆ. ಬದಲಾವಣೆ ಸಹಜ.
ಬದಲಾವಣೆಯ ಎರಡು ಮುಖಗಳು

  • ನೈಸರ್ಗಿಕವಾಗಿ ಆಗುವ ಬದಲಾವಣೆ
  • ಕೃತಕವಾಗಿ ಆಗುವ ಬದಲಾವಣೆ
    ಮಗು ಅಳುವುದರಿಂದ ಆರಂಸಿ, ಅಂಬೆಗಾಲು ಹಾಕುವುದು, ನಿಲ್ಲುವುದು, ಓಡುವುದು, ಮಾತನಾಡುವುದು, ನಗುವುದು, ಹಾಡುವುದು—ಇವೆಲ್ಲವೂ ಸಕಾರಾತ್ಮಕ ಬದಲಾವಣೆಗಳು. ಇವು ಹೆತ್ತವರ ಮನಸ್ಸಿಗೆ ಸಂತೋಷ ತರುತ್ತವೆ. ಆದರೆ ಬೆಳೆದ ಮಗು, ಕೆಲವೊಮ್ಮೆ ಅಪ್ಪ–ಅಮ್ಮನಿಗೆ ನೋವು ಕೊಡಲು ಕಲಿಯುತ್ತದೆ—ಇದು ನಕಾರಾತ್ಮಕ ಬದಲಾವಣೆ. ದೈಹಿಕ ಬದಲಾವಣೆಗಳು ಸಹಜವಾದರೂ, ಮಾನಸಿಕ ಬದಲಾವಣೆಗಳು ಹೆತ್ತವರ ಮನಸ್ಸಿಗೆ ನೋವು ತರಬಹುದು.
    ಮಗು ಬೆಳೆದಂತೆ ಗೆಳೆಯರ ಬಳಗ ಬದಲಾಗುತ್ತದೆ. ಕೊನೆಗೆ ಬಾಲ್ಯದ ಗೆಳೆಯರನ್ನೇ ಮರೆತುಬಿಡುವಷ್ಟು ಬದಲಾವಣೆ ಸಂಭವಿಸುತ್ತದೆ. ಹೊಸ ನೀರು ಬಂದು ಹಳೆಯ ನೀರನ್ನು ಕೊಚ್ಚಿ ಹೋಗುವಂತೆ, ಹಳೆಯ ಸ್ನೇಹಿತರ ಜೊತೆಗೆ ಕಳೆದ ಕ್ಷಣಗಳನ್ನೇ ವ್ಯವಹಾರಿಕ ರೀತಿಯಲ್ಲಿ ಮರೆತುಬಿಡುತ್ತದೆ, ಆದರೆ ಒಂದು ಪ್ರಶ್ನೆ—ಇಂತಹ ಬದಲಾವಣೆಗಳು ಜೀವನಕ್ಕೆ ಅಗತ್ಯವೇ?
    ಶಾಲೆ, ಕಾಲೇಜು, ಉದ್ಯೋಗ, ವಿವಾಹ, ವೃದ್ಧಾಪ್ಯ—ಪ್ರತಿ ಹಂತದಲ್ಲೂ ಹೊಸ ಗೆಳೆಯರು ಸಿಗುತ್ತಾರೆ. ಪ್ರತಿಯೊಬ್ಬರೂ ಜೀವನಕ್ಕೆ ಒಂದೊಂದು ಪಾಠ. ಆದರೆ “ಬದಲಾವಣೆ ಜಗದ ನಿಯಮ” ಎಂದು ಹೇಳಿ ಗಂಡ–ಹೆಂಡತಿ, ಮಕ್ಕಳು, ಗೆಳೆಯರನ್ನು ಬದಲಾಯಿಸುವುದು ಸಾಧ್ಯವಿಲ್ಲ. ಸಕಾರಾತ್ಮಕ ಬದಲಾವಣೆ ಮಾತ್ರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
    ಬದಲಾವಣೆಯ ಮಿತಿಗಳು
    “ಹೊಸತನ ತರ್ತೀನಿ” ಎಂದು ಎಲ್ಲವನ್ನೂ ಬದಲಾಯಿಸುವುದು ಮೂರ್ಖತನ. ಹಳೆಯವರನ್ನು ಮನೆಯಿಂದ ಹೊರಹಾಕಿ ಹೊಸತನವನ್ನು ಕಟ್ಟಲಾಗುವುದಿಲ್ಲ. ಬಡವನು ಶ್ರೀಮಂತನಾಗಬಹುದು; ಶ್ರೀಮಂತನು ಬಡವನಾಗಬಹುದು. ಸಿರಿತನ–ಬಡತನ ಎರಡೂ ಜೀವನದ ಪಾಠ.
    ಸಂಬಂಧಗಳು ಬದಲಾವಣೆಯ ಹೊಡೆತಕ್ಕೆ ಒಳಗಾಗಬಹುದು. ಸಿರಿತನ ಬಂದಾಗ ಕೆಲವರು ಹತ್ತಿರವಾಗಬಹುದು; ಕಷ್ಟ ಬಂದಾಗ ಕೆಲವರು ದೂರವಾಗಬಹುದು. ಸಿರಿತನದ ಅಹಂಕಾರದಲ್ಲಿ ಬೇರೆಯವರನ್ನು ನಿಕೃಷ್ಟವಾಗಿ ನೋಡಬಾರದು, ಸಂಬಂಧಗಳನ್ನು ಹೇಗೆ ನಿಭಾಯಿಸುತ್ತೇವೆ ಎಂಬುದೇ ನಿಜವಾದ ವ್ಯಕ್ತಿತ್ವ.
    ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ, ಸಂಬಂಧಗಳನ್ನು ಸಮತೋಲನದಿಂದ ನಿಭಾಯಿಸುವವನೇ ಮಾದರಿ ವ್ಯಕ್ತಿ.
    ಬದಲಾವಣೆ ಯಾಕಾಗಿ?
    Klive Special Article ಬದಲಾವಣೆ ಸಹಜವಾಗಿರಬೇಕು; ನಾವು ಬದಲಾವಣೆಯ ಹಿಂದೆ ಓಡಬಾರದು. ಮನಸ್ಸಿಗೆ ನೋವು ಬಂದಾಗ ತನ್ನಿಂದ ತಾನೇ ಮನಸು ಶಕ್ತಿ ತಳೆದು ಗಟ್ಟಿಯಾಗುತ್ತದೆ, ಕ್ರೂರಿಯೂ ಮನಸ್ಸು ಮಾಡಿದರೆ ಒಳ್ಳೆಯವನಾಗಬಹುದು; ಒಳ್ಳೆಯವನು ಕೆಟ್ಟ ಸಂಗದಿಂದ ಕ್ರೂರಿಯಾಗಬಹುದು.
    ಆದರೆ ಬದಲಾವಣೆ ಯಾಕಾಗಿ ಮಾಡುತ್ತಿದ್ದೇವೆ ಎಂಬ ಪ್ರಶ್ನೆ ಮೊದಲು ಮನಸ್ಸಿನಲ್ಲಿ ಮೂಡಬೇಕು.
    ನಮ್ಮಲ್ಲಿ ಆಗುವ ಬದಲಾವಣೆ ಜಗದ ಹಿತಕ್ಕಾಗಿ ಇದೆಯೇ ಎನ್ನುವ ಪ್ರಶ್ನೆ ನಮ್ಮಲ್ಲಿ ಮೂಡಬೇಕು,
    ನಮ್ಮ ಬದಲಾವಣೆಯಿಂದ ಇತರರಿಗೆ ಒಳಿತಾಗಬೇಕು; ದುಃಖ ತರಬಾರದು.

ಹಿಂದಿನ ಕಾಲದಲ್ಲಿ ಒಂದು ರೀತಿಯ ಜೀವನವಿತ್ತು; ಇಂದಿನ ಕಾಲದಲ್ಲಿ ಬೇರೆ. ಶಿಕ್ಷಣ, ಹಣದ ಮೌಲ್ಯ, ವೇಷಭೂಷಣ, ಆಹಾರ—ಎಲ್ಲವೂ ಬದಲಾಗಿದೆ. ತುಂಬಿದ ಕುಟುಂಬಗಳು ಕಡಿಮೆಯಾಗಿವೆ; ಹೊಂದಾಣಿಕೆ ಕಷ್ಟವಾಗಿದೆ. ಹೆಣ್ಣು–ಗಂಡು ಇಬ್ಬರೂ ಸಮಾನರು; ಇಬ್ಬರೂ ದುಡಿಯುವ ಕಾಲ ಬಂದಿದೆ. ಹೆಣ್ಣಿನ ಶೋಷಣೆ ಕಡಿಮೆಯಾಗುತ್ತಿದೆ. ವಿಶ್ಲೇಷಣೆ ಮಾಡುತ್ತ ಹೋದರೆ ಸಕಾರಾತ್ಮಕ ಮತ್ತು ನಕಾರಾತ್ಮಕ ಬದಲಾವಣೆ ಎರಡೂ ಕಣ್ಣಿಗೆ ಕಾಣುತ್ತವೆ. ಆದರೆ “ಹೊಸತನ” ಎಂಬ ಹೆಸರಿನಲ್ಲಿ ಪ್ರತಿಯೊಂದನ್ನೂ ಬದಲಾಯಿಸುವ ಹುಚ್ಚು ಬರಬಾರದು.
ನಗು -ನಗುತ್ತಾ ಬದಲಾವಣೆಯನ್ನು ಸ್ವೀಕರಿಸಿ,
ಸಕಾರಾತ್ಮಕ ಬೆಳವಣಿಗೆಯೊಂದಿಗೆ ಜೀವನವನ್ನು ಸುಂದರವಾಗಿ ಸಾಗಿಸೋಣ .

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ಕುವೆಂಪು ವಿವಿಯಲ್ಲಿ ನಾಳೆಯಿಂದ ‘ಮಾನವ-ವನ್ಯಜೀವಿ ಸಂಘರ್ಷ’ ಕುರಿತು ರಾಷ್ಟ್ರೀಯ ಸಮ್ಮೇಳನ

Kuvempu University ಕುವೆಂಪು ವಿಶ್ವವಿದ್ಯಾಲಯದ ವನ್ಯಜೀವಿ ಮತ್ತು ನಿರ್ವಹಣಾ ಸ್ನಾತಕೋತ್ತರ ಅಧ್ಯಯನ...

Karnataka Sanga ಕರ್ನಾಟಕ ಸಂಘದಲ್ಲಿ ಇಬ್ಬರು ಹಿರಿಯ ಮಹನೀಯರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

Karnataka Sanga ಶಿವಮೊಗ್ಗ ಕರ್ನಾಟಕ ಸಂಘದಲ್ಲಿ ದಿನಾಂಕ 15 ಮೇ 2026ರ...

ಬೆಂಗಳೂರು ಉಪನಗರ ರೈಲು ಯೋಜನೆ: 𝟭𝟱𝟯 𝗠𝗲𝘁𝗿𝗼 𝗖𝗼𝗮𝗰𝗵 ಗಳ ಖರೀದಿಗೆ 𝗜𝗖𝗙 ಜೊತೆ ಒಪ್ಪಂದ, ₹𝟭,𝟱𝟭𝟯.𝟳𝟱 ಕೋಟಿ ಮೊತ್ತದ ಕಾರ್ಯಾದೇಶ

ಬೆಂಗಳೂರು ನಗರದ ಸಂಚಾರ ದಟ್ಟಣೆಗೆ ಮುಕ್ತಿ ನೀಡಲಿರುವ ಬಹುನಿರೀಕ್ಷಿತ ಬೆಂಗಳೂರು ಉಪನಗರ...