Wednesday, September 9, 2026
Wednesday, September 9, 2026

Shakahaari Film ಕನ್ನಡ ಚಿತ್ರ “ಶಾಖಾಹಾರಿ” ಗೆ ಫಿಲ್ಮ್ ಫೇರ್ ಅವಾರ್ಡ್

Date:

Shakahaari Film ಶಿವಮೊಗ್ಗದ ಕೀಳಂಬಿ ಮೀಡಿಯ (ಪ್ರೈ) ಲಿಮಿಟೆಡ್‌ ಕಂಪನಿ ನಿರ್ಮಾಣದ ” ಶಾಖಾಹಾರಿ” ಸಿನಿಮಾ ಮತ್ತೆ ಸುದ್ದಿ ಮಾಡಿದೆ. ಈ ಬಾರಿಯ ಪ್ರತಿಷ್ಢಿತ ಫಿಲ್ಮ್ ಫೇರ್ ಅವಾರ್ಡ್ ತನ್ನ ಮಡಿಲಿಗೆ ಬಾಚಿಕೊಂಡಿದೆ.
“ಉತ್ತಮ ಚಿತ್ರ” ವಾಗಿ ಪ್ರಶಸ್ತಿ‌ಗೆ ಭಾಜನವಾಗಿದೆ. ಕನ್ನಡ ಸಿನಿಮಾರಂಗಕ್ಕೆ ಹೆಮ್ಮೆ ಮತ್ತು ಕೀರ್ತಿ‌ ತಂದಿದೆ.
ನಿರ್ಮಾಪಕ. ರಾಜೇಶ್ ಕೀಳಂಬಿ ಮತ್ತು ನಿರ್ದೇಶಕ ಸಂದೀಪ್ ಸುಂಕದ್ ‌ ಸುಂದರ ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸಿದರು.

Shakahaari Film 70ನೇ ಫಿಲ್ಮ್‌ಫೇರ್ ಪ್ರಶಸ್ತಿಗಳ ದಕ್ಷಿಣ ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರವರಿ 22 ರಂದು ಕೊಚ್ಚಿಯ ಆಡ್ಲಕ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು. ಈ ಸಮಾರಂಭದಲ್ಲಿ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸಿನಿಮಾ ಸೇರಿದಂತೆ ಪ್ರಾದೇಶಿಕ ಉದ್ಯಮಗಳ ಚಲನಚಿತ್ರಗಳು ಮತ್ತು ಪ್ರತಿಭೆಗಳನ್ನು ಗೌರವಿಸಲಾಯಿತು. ಅಲ್ಲು ಅರ್ಜುನ್ ಅವರ ಪುಷ್ಪ 2: ದಿ ರೂಲ್ ತೆಲುಗು ವಿಭಾಗದಲ್ಲಿ ಪ್ರಾಬಲ್ಯ ಸಾಧಿಸಿದರೆ ಮತ್ತು ಅಮರನ್ ತಮಿಳು ಸಿನಿಮಾದಲ್ಲಿ ಪ್ರಮುಖ ವಿಜೇತರಾಗಿ ಹೊರಹೊಮ್ಮಿದರೆ, ಗರಿಷ್ಠ ಮಲಯಾಳಂ ಗೌರವಗಳು ಪೃಥ್ವಿರಾಜ್ ಅವರ ಆಡುಜೀವಿತಮ್‌ಗೆ ದಕ್ಕಿದವು. ಕನ್ನಡ ವಿಭಾಗದಲ್ಲಿ, “ಶಾಖಾಹಾರಿ” ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದರೆ, ನಟನಾ ಪ್ರಶಸ್ತಿಗಳನ್ನು ಬಘೀರಾ ಚಿತ್ರಕ್ಕಾಗಿ ಶ್ರೀ ಮುರಳಿ ಮತ್ತು ಕೋಲಿ ಎಸ್ರು ಚಿತ್ರಕ್ಕಾಗಿ ಅಕ್ಷತಾ ಪಾಂಡವಪುರ ಅವರಿಗೆ ನೀಡಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಸರ್ಕಾರದ ಸೇವೆಗಳನ್ನ ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ “ಪ್ರಜಾಸೇವೆ “ಜಾರಿಗೆ: ಮಧು ಬಂಗಾರಪ್ಪ

Madhu Bangarappa ಜನಸಾಮಾನ್ಯರ ದಿನನಿತ್ಯದ ಸಮಸ್ಯೆ-ಸವಾಲುಗಳಿಗೆ, ದುಃಖ ದುಮ್ಮಾನಗಳಿಗೆ ತ್ವರಿತವಾಗಿ ಸ್ಪಂದಿಸಿ,...

S.N. Channabasappa ಸಮಾಜಮುಖಿಯಾಗಿ ಕ್ರಿಯಾಶೀಲವಾಗಿರುವ ಆರ್ಯವೈಶ್ಯ ಶ್ರೀರಾಮಸಹಕಾರ ಸಂಘದ ಕಾರ್ಯ ಶ್ಲಾಘನೀಯ : ಎಸ್.ಎನ್.ಚನ್ನಬಸಪ್ಪ

S.N. Channabasappa "ಸಮಾಜದ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ...

B.Y. Raghavendra ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅಸಮಾಧಾನ

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ...