ನ್ಯಾಯಾಧೀಶರಾಗಿ ಶಿವಮೊಗ್ಗದ ವಕೀಲರಾದ ಕುಮಾರಿ ಸಮ್ಯಕ್ತ ಎಸ್,ಮುಪ್ಪಾನೆಯವರು ಆಯ್ಕೆಯಾಗಿದ್ದಾರೆ.
ಕೇವಲ 24 ವರ್ಷವಯಸ್ಸಿನಲ್ಲೇ ಈ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಇವರು ಶಿವಮೊಗ್ಗದ ಹಿರಿಯ ವಕೀಲರಾದ ಅನಂತದತ್ತ ಮತ್ತು ವಿನಾಯಕ.ಸಿ.ಆರ್. ಇವರ ಮಾರ್ಗದರ್ಶನದಲ್ಲಿ ವಕೀಲರಾಗಿ ಪ್ರಾಕ್ಟೀಸ್ ಮಾಡಿದ್ದಾರೆ.
ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಪ್ರಕಟಿಸಿದ ನ್ಯಾಯಾಧೀಶರಾಗಿ ಆಯ್ಕೆಯಾದ ೮೩ ಜನ ಅಭ್ಯರ್ಥಿಗಳ ಪಟ್ಟಿಯಲ್ಲಿ ಇವರ ಹೆಸರು ಸೇರ್ಪಡೆಗೊಂಡಿದೆ.
ಸಿವಿಲ್ ಜಡ್ಜ್ ನೇಮಕಾತಿ ಪ್ರಕ್ರಿಯೆಯನ್ನು ಅಂತಿಮಗೊಳಿಸಿದ ಹೈಕೋರ್ಟ್ ಡಿಸೆಂಬರ್ನಲ್ಲಿ ನಡೆದ ಅಂತಿಮ ಪರೀಕ್ಷೆಮತ್ತು ಜನವರಿಯಲ್ಲಿ ನಡೆದ ಮುಖತ: ಪರೀಕ್ಷೆಯ ಬಳಿಕ ಈ ಪಟ್ಟಿಯನ್ನು ಬಿಡುಗಡೆಗೋಳಿಸಲಾಗಿತ್ತು.
