Thursday, June 4, 2026
Thursday, June 4, 2026

ರೈತರೆ ಗಮನಿಸಿ! ಪರವಾನಗಿ ಇಲ್ಲದ ಪೀಡೆನಾಶಕ ವಿರುದ್ಧ ಕೃಷಿ ಇಲಾಖೆ ಕಠಿಣ ಕ್ರಮ

Date:

ದಿನಾಂಕ 17-02-2026 ರಂದು ಶ್ರೀಯುತ ರಾಮಕೃಷ್ಣ, ಮಾನ್ಯ ಜಂಟಿ ಕೃಷಿ ನಿರ್ದೇಶಕರು(ಜಾಗ್ರತ ಕೋಶ)
ಮೈಸೂರು, ರವರ ಮಾರ್ಗದರ್ಶನದಲ್ಲಿ ಶಿವಮೊಗ್ಗ ನಗರದ ಮೂರ್ತಿ ಪ್ಯಾರಡೈಸ್ 60 ಅಡಿ ರಸ್ತೆ ವಿನೋಬನಗರದಲ್ಲಿರುವ
ಅಲ್ಟಿಮ ಸರ್ಚ್ ರವರ ಮಳಿಗೆಯಲ್ಲಿ ಪೀಡೆನಾಶಕಗಳ ಪರಿಶೀಲನೆ ನಡೆಸಲಾಯಿತು. ಮಳಿಗೆಯಲ್ಲಿ ರಾಟಾಲ್ ಎಂಬ 1008 ಕೆ
ಜಿ ಅಲ್ಟಿಮ ಸರ್ಚ್ ವಾಪಿ ಗುಜರಾತ್ ಕಂಪನಿಯ ಸುಮಾರು ರೂ.17,28,000/-(ಹದಿನೇಳು ಲಕ್ಷದ ಇಪ್ಪತ್ತೆಂಟು ಸಾವಿರ)
ಪೀಡೆನಾಶಕವನ್ನು ದಾಸ್ತಾನು ಮಾಡಿದ್ದು, ಸದರಿ ಪೀಡೆನಾಶಕವು ಸಿ ಐ ಆರ್ ಸಂಖ್ಯೆ ಹಾಗೂ ತಯಾರಿಕ ಪರವಾನಿಗೆ ಸಂಖ್ಯೆ
ನಮೂದಿಸದೆ ದಾಸ್ತಾನು ಮತ್ತು ಮಾರಾಟ ಮಾಡುತ್ತಿರುವು ಕಂಡು ಬಂದಿದ್ದು ಕೀಟನಾಶಕ ಅಧಿನಿಯಮ 1968 ಹಾಗೂ ಕೀಟನಾಶಕ
ಕಾಯಿದೆ 1971 ಉಲ್ಲಂಘನೆಯಾಗಿರುತ್ತದೆ. ಈ ಸಂಭಂದ ಸದರಿ ದಾಸ್ತಾನನ್ನು ಪಂಚರ ಸಮಕ್ಷಮ ಮಹಜರ್ ಜರುಗಿಸಿ ಜಪ್ತಿ
ಮಾಡಿ ಕಾನೂನು ಕ್ರಮ ಕೈಗೊಳ್ಳಲಾಯಿತು. ಈ ಸಂಧರ್ಭದಲ್ಲಿ ಜಾಗೃತ ಕೋಶ ಮೈಸೂರಿನ ಸಹಾಯಕ ಕೃಷಿ
ನಿರ್ದೇಶಕರುಗಳಾದ ಶ್ರೀ ಜಗದೀಶ್ ಮತ್ತು ಶ್ರೀ ಯಾದವ ಬಾಬು, ಶ್ರೀ ಬಿಸಿ ಶಶಿಧರ ಸಹಾಯಕ ಕೃಷಿ ನಿರ್ದೇಶಕರು (ಜಾಗೃತ
ಕೋಶ ಶಿವಮೊಗ್ಗ), ಶ್ರೀ ಮತಿ ಗಿರಿಜಾ ಪಟ್ಟಣ ಶೆಟ್ಟಿ, ಸಹಾಯಕ ಕೃಷಿ ನಿರ್ದೇಶಕರು, ಶ್ರೀ ಚೇತನ್ ಸಿ ಜಿ ತಾಂತ್ರಿಕ ಅಧಿಕಾರಿ
ಹಾಗೂ ಶ್ರೀ ಸುನಿಲ್ ಕೃಷಿ ಅಧಿಕಾರಿ ಕೃಷಿ ಇಲಾಖೆ ಶಿವಮೊಗ್ಗ ರವರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

DK Shivakumar ಸರ್ಕಾರದ ಸುಗಮ ಆಡಳಿತಕ್ಕೆ ಅಧಿಕಾರಿಗಳೇ ಬೆನ್ನೆಲುಬು. ಜನಗಳ ಕಷ್ಟಗಳಿಗೆ ತಕ್ಷಣ ಸ್ಪಂದಿಸಿ- ಡಿ.ಕೆ.ಶಿವಕುಮಾರ್.

DK Shivakumar ಸರ್ಕಾರದ ಎಲ್ಲಾ ಅಪರ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಎಲ್ಲಾ...

Shivamogga News ತೆರಿಗೆ ಸಲಹೆಗಾರರೆ…ನಿಮಗಾಗಿ ಜೂನ್ 5 ರಂದು ವಿಶೇಷ ವಿಚಾರ ಸಂಕಿರಣ

Shivamogga News ಶಿವಮೊಗ್ಗ ಜಿಲ್ಲಾ ಟ್ಯಾಕ್ಸ್ ಬಾರ್ ವತಿಯಿಂದ ದಿನಾಂಕ 05-06-2026...

B.Y. Raghavendra ನಿಮ್ಮ ಆಡಳಿತ ಸಹಕಾರ,ಸಮನ್ವಯ , ಸಾರ್ಥಕತೆಯಿಂದ ಮುನ್ನಡೆಯಲಿ” – ಸಂಸದ ಬಿ.ವೈ.ರಾಘವೇಂದ್ರ ಹಾರೈಕೆ

B.Y. Raghavendra ಕರ್ನಾಟಕ ರಾಜ್ಯದ 24ನೇ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ...