Friday, July 24, 2026
Friday, July 24, 2026

ಭಜನೆಯಿಂದ ಚಿತ್ತಶುದ್ಧಿ.ಅರಿಷಡ್ವರ್ಗ ಕರಗುತ್ತವೆ- ಶಬರೀಶ್ ಕಣ್ಣನ್

Date:

ಭಗವಂತನ ನಾಮವನ್ನು ಶ್ರದ್ಧೆಯಿಂದ ಉಚ್ಚರಿಸುವಾಗ ಮನಸ್ಸು ಕ್ರಮೇಣ ಶುದ್ಧವಾಗುತ್ತದೆ ಎಂದು ಭಜನಾ ಪರಿಷತ್ ಶಿವಮೊಗ್ಗ ಕಾರ್ಯದರ್ಶಿ ಶಬರೀಶ್ ಕಣ್ಣನ್ ಹೇಳಿದರು.

ಮಹಾಶಿವರಾತ್ರಿ ಪ್ರಯುಕ್ತ ಫ್ರೆಂಡ್ಸ್ ಸೆಂಟರ್ ವತಿಯಿಂದ ಆಯೋಜಿಸಿದ್ದ ಭಜನಾ ಕಾರ್ಯಕ್ರಮದಲ್ಲಿ ಮಾತನಾಡಿ, ಚಿತ್ತಶುದ್ಧಿಯೇ ಆಧ್ಯಾತ್ಮಿಕ ಜೀವನದ ಮೊದಲ ಹೆಜ್ಜೆ. ಭಜನೆಯ ಮೂಲಕ ಮನಸ್ಸಿನಲ್ಲಿ ನೆಲೆಯೂರಿರುವ ಅಹಂಕಾರ, ಅಸೂಯೆ, ಕ್ರೋಧ ಮತ್ತು ಲೋಭದಂತಹ ದುರ್ಗುಣಗಳು ನಿಧಾನವಾಗಿ ಕರಗುತ್ತವೆ. ಅವುಗಳ ಸ್ಥಾನದಲ್ಲಿ ಪ್ರೀತಿ, ಶಾಂತಿ, ಸಹನೆ ಮತ್ತು ಕ್ಷಮೆಯಂತಹ ಸದ್ಗುಣಗಳು ಬೆಳೆಸಿಕೊಳ್ಳುತ್ತವೆ ಎಂದು ತಿಳಿಸಿದರು.

ಭಜನೆ ಪ್ರೀತಿಯನ್ನು ಜಾಗೃತಗೊಳಿಸುವ ಪ್ರಕ್ರಿಯೆ. ನಿಷ್ಕಾಮ ಭಾವದಿಂದ ಭಗವಂತನ ನಾಮಸ್ಮರಣೆ ಮಾಡುವುದು ಮತ್ತು ಅವನ ಲೀಲೆಗಳನ್ನು ಚಿಂತಿಸುವುದು ಜೀವನದ ಶ್ರೇಯಸ್ಸಿನ ಅತ್ಯುತ್ತಮ ಉಪಾಯವಾಗಿದೆ. ಫಲಾಪೇಕ್ಷೆ ಇಲ್ಲದೆ ಮಾಡುವ ಭಜನೆ ಮನಸ್ಸನ್ನು ಲಘುವಾಗಿಸಿ, ಜೀವನದ ಸಂಕಷ್ಟಗಳನ್ನು ಸಮಾಧಾನದಿಂದ ಎದುರಿಸುವ ಶಕ್ತಿಯನ್ನು ನೀಡುತ್ತದೆ ಎಂದರು.

ಭಜನೆಯ ಮತ್ತೊಂದು ಪ್ರಮುಖ ಅಂಶ ಸಮಾಜದ ಮೇಲೆ ಅದರ ಪರಿಣಾಮ. ಭಜನಾ ಮಂಡಳಿಗಳ ಮೂಲಕ ಸಮಾಜದಲ್ಲಿ ಸಾಮರಸ್ಯ ಮತ್ತು ಸಂಘಟನೆ ಸಾಧ್ಯವಾಗುತ್ತದೆ. ವಿಭಿನ್ನ ವರ್ಗ, ವಯಸ್ಸು ಮತ್ತು ಹಿನ್ನೆಲೆಯ ಜನರು ಒಂದೇ ಸ್ಥಳದಲ್ಲಿ ಸೇರಿ ಭಗವಂತನ ನಾಮವನ್ನು ಹಾಡುವಾಗ ಭೇದಭಾವ ಕರಗುತ್ತದೆ. ಪರಸ್ಪರ ಗೌರವ, ಸಹಕಾರ ಮತ್ತು ಸಹೋದರತ್ವ ಬೆಳೆಯುತ್ತದೆ. ಈ ದೃಷ್ಟಿಯಿಂದ ಭಜನೆ ಕೇವಲ ವೈಯಕ್ತಿಕ ಸಾಧನೆಯಲ್ಲ; ಅದು ಸಾಮಾಜಿಕ ಪರಿವರ್ತನೆಯ ಶಕ್ತಿಯೂ ಹೌದು ಎಂದು ತಿಳಿಸಿದರು.

ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಬಿ.ಜಿ.ಧನರಾಜ್, ಮಹಿಳಾ ವಿಭಾಗದ ಅಧ್ಯಕ್ಷೆ ಸ್ವಪ್ನಾ ಬದ್ರಿನಾಥ್, ಮಾಜಿ ಅಧ್ಯಕ್ಷ ಜಿ.ವಿಜಯಕುಮಾರ್, ರಮೇಶ್, ರವೀಂದ್ರನಾಥ್ ಐತಾಳ್, ವಿ.ನಾಗರಾಜ್, ಬಿಂದು ವಿಜಯಕುಮಾರ್, ಸ್ಮಿತಾ ಜವಳಿ, ವೆಂಕಟೇಶ್, ಟಿ.ಎಸ್.ಅಶ್ವತ್ಥ್ ನಾರಾಯಣಶೆಟ್ಟಿ, ಮಹೇಶ್ವರಪ್ಪ, ಲೋಕೇಶ್, ಮೋಹನ್, ಸತ್ಯನಾರಾಯಣ, ದತ್ತಾತ್ರಿ, ಶ್ರೀರಂಜಿನಿ ದತ್ತಾತ್ರಿ, ಮಾಜಿ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು, ಮಹಿಳಾ ವಿಭಾಗದ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು. ಶಾರದಾ ಮಹಿಳಾ ಕೂಟದ ಶುಭ ರಾಘವೇಂದ್ರ ಹಾಗೂ ತಂಡದವರು ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ನೀಟ್ ಗೊಂದಲ, ಪ್ರತಿಭಟನೆ : ರಾಷ್ಟ್ರವಿರೋಧಿ ಶಕ್ತಿಗಳ ಕರಾಳ ತಂತ್ರ- ಎಸ್.ಎನ್.ಚನ್ನಬಸಪ್ಪ

S.N. Channabasappa ದೆಹಲಿಯಲ್ಲಿ ಜಿರಳೆ ಪಕ್ಷದ ಹೆಸರಿನಲ್ಲಿ ನಡೆದದ್ದು ವಿದ್ಯಾರ್ಥಿಗಳ ಹೋರಾಟ...

K. J.George ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯ ಹೋಟೆಲ್ ಗಳು, ಆತಿಥ್ಯ ಕೇಂದ್ರಗಳು ಹಂತಹಂತವಾಗಿ ಉನ್ನತೀಕರಣ : ಸಚಿವ ಕೆ.ಜೆ.ಜಾರ್ಜ್

K.J. George ರಾಜ್ಯದ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಜಾಗತಿಕ ಗುಣಮಟ್ಟಕ್ಕೆ ಏರಿಸುವ ಉದ್ದೇಶದಿಂದ,...

Kuvempu University ಕುವೆಂಪು ವಿವಿಯ ಸ್ನಾತಕೋತ್ತರ ಡಿಪ್ಲೊಮಾ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Kuvempu University ಕುವೆಂಪು ವಿಶ್ವವಿದ್ಯಾಲಯವು 2026-27ನೇ ಸಾಲಿನ ವಿವಿಧ ಸ್ನಾತಕೋತ್ತರ ಪದವಿ,...