ಅಂಚೆ ಇಲಾಖೆಯ ಪೋಸ್ಟ್ ಮ್ಯಾನ್ ಮತ್ತು ಎಂ ಟಿ ಎಸ್ ವರ್ಗದವರಿಗೆ ವಿಶೇಷ ಸನ್ಮಾನ
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ನವಲೆ ಇವರ ವತಿಯಿಂದ ಗುಡ್ಡಗಾಡುಗಳಲ್ಲಿ ಹಾಗೂ ಮಳೆ ಚಳಿ ಎಲ್ಲಾ ಸಮಯದಲ್ಲೂ ಪ್ರತಿಯೊಂದು ಮೂಲೆ ಮೂಲೆಗಳಿಗೆ ಹೋಗಿ ಯಾವ ಪಲಾಪೇಕ್ಷೆ ಇಲ್ಲದೆ ಸರಿಯಾದ ಸಮಯಕ್ಕೆ ಅಂಚೆ ಸೇವೆ ಸಲ್ಲಿಸುತ್ತಿರುವ ಸೈಲೆಂಟ್ ವರ್ಕರ್ಸ್ ಸೇವಾ ನಿರತ ಅಂಚೆ ಇಲಾಖೆಯ 70 ಜನ ಪೋಸ್ಟ್ ಮ್ಯಾನ್ ಮತ್ತು ಎಂಟಿಎಸ್ ವರ್ಗದವರಿಗೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಸಂಸ್ಥೆ ವತಿಯಿಂದ ಎಲ್ಲರ ಸೇವೆಯನ್ನು ಗುರುತಿಸಿ ಸನ್ಮಾನಿಸಿ ನೆನಪಿನ ಕಾಣಿಕೆಗಳು ಜೊತೆಗೆ ಶಾಲು ಹಾರ ಹಾಗೂ ಸಿಹಿ ಬಾಕ್ಸ್ಗಳನ್ನು ನೀಡಿ ತಿಲಕ ಇಟ್ಟು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ರಾಜಯೋಗ ಶಿಕ್ಷಕಿ ಬ್ರಹ್ಮಕುಮಾರಿ ಸ್ವಾತಿ ಮತ್ತು ಶಾಸಕರಾದ ಚನ್ನಬಸಪ್ಪ. ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ. ಶಿವಮೊಗ್ಗ ಭದ್ರಾವತಿ ಪ್ರಾಧಿಕಾರದ ಅಧ್ಯಕ್ಷರಾದ ಸುಂದರೇಶ್. ರೋಟರಿ ಜಿ ವಿಜಯಕುಮಾರ್. ಮನೋಹರ್ ಆರ್ . ಪಿ ರುದ್ರೇಶ್. ಡಾ ತಿಪ್ಪೇಶ್. ಮಲ್ಲೇಶಪ್ಪ. ಡಾಕ್ಟರ್ ಆಕಾಶ್ ಹೊಸ್ತೋಟ. ರಾಜಣ್ಣ. ಬಿಕೆ ವಿಜಯಲಕ್ಷ್ಮಿ ರಾಘು. ಹಾಗೂ ಈಶ್ವರಿ ವಿಶ್ವವಿದ್ಯಾಲಯದ ಅಣ್ಣಂದಿರು ಅಕ್ಕಂದಿರು ಅಂಚೆ ಕಚೇರಿಯ ಅಧಿಕರಾದ ಎಂ ಕುಮಾರಸ್ವಾಮಿ. ಡಾಕ್ಟರ್ ಪ್ರಸನ್ನ ಬಸವರಾಜಪ್ಪ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸನ್ಮಾನಿತರು ಭಾವ ಪರವಶರಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಅಂಚೆ ಇಲಾಖೆಯ “ಮೌನ ಸಿಬ್ಬಂದಿ”ಯ ಸಾರ್ಥಕ ಸೇವೆಗೆ ಸನ್ಮಾನ
Date:
