Thursday, September 10, 2026
Thursday, September 10, 2026

Shivalaya Temple ವಿನೋಬಾ ನಗರ ಶಿವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ಶಿವಲಿಂಗ ಸ್ಪರ್ಶ ಪೂಜಾ ಅವಕಾಶ

Date:

ಜಾತಿ ಮತ ಪಂಥಗಳನ್ನು ಮೀರಿದ ವಿನೋಬ ನಗರದ ಶ್ರೀ ಶಿವಾಲಯ ದೇವಸ್ಥಾನ ಸರ್ವರಿಗೂ ಶಿವಲಿಂಗವನ್ನು ಸ್ಪರ್ಶಿಸಿ ಪೂಜೆ ಸಲ್ಲಿಸಲು ಮುಕ್ತ ಅವಕಾಶವನ್ನು ನೀಡಿರುವ ಸರ್ವ ಸಮನ್ವಯ ಕೇಂದ್ರ ವಿನೋಬನಗದ ಶ್ರೀ ಶಿವಾಲಯ ದೇವಸ್ಥಾನ,ನಗರದ ಪ್ರಮುಖ ಧಾರ್ಮಿಕ ತಾಣಗಳ ಪೈಕಿ ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಶ್ರೀ ಶಿವಾಲಯ ದೇವಸ್ಥಾನ ಶಿವ ಭಕ್ತರ ಪಾಲಿಗೆ ಶ್ರದ್ಧೆಯ ತಾಣವಾಗಿದೆ.
ಕಳೆದ 31ವರ್ಷಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಭಕ್ತರನ್ನು ತನ್ನತ್ತ ಸೆಳೆಯುತ್ತಿರುವ ವಿನೋಬನಗರ ಶ್ರೀ ಶಿವಾಲಯದಲ್ಲಿ ಜತಿ ಮತ ಭೇದವಿಲ್ಲದೆ ಎಲ್ಲಾ ಜತಿ ಜನಾಂಗ ಭಕ್ತರು ಪ್ರತಿ ನಿತ್ಯ ದರ್ಶನವನ್ನು ಪಡೆಯುತ್ತಾರೆ, ಸೋಮವಾರ, ಹುಣ್ಣಿಮೆ, ಅಮಾವಾಸ್ಯೆ, ಹಬ್ಬದ ದಿನಗಳಲ್ಲಿ ಹಾಗೂ ಶ್ರಾವಣ, ಕಾರ್ತಿಕ ಮಾಸದಲ್ಲಿ ವಿಶೇಷ ಪೂಜ ಕಾರ್ಯ ಕ್ರಮಗಳು ಇಲ್ಲಿ ನಡೆಯುತ್ತವೆ.
ಈ ಎಲ್ಲಾ ದಿನಗಳಲ್ಲಿ ಶಿವನಿಗೆ ಮಾಡಲಾಗುವ ವಿಶೇಷ ಅಲಂಕಾರಗಳು ಶಿವಮೊಗ್ಗದ್ದ ಎಲ್ಲಾ ಭಕ್ತರ ಗಮನವನ್ನು ಸೆಳೆದಿದೆ, ಅಭಿಷೇಕ ಮಾಡಿಸಲು ಇಚ್ಚಿಸುವ ಎಲ್ಲಾ ಜಾತಿ ವರ್ಗದ ಭಕ್ತರಿಗೂ ಗರ್ಭಗುಡಿಯ ಶಿವಲಿಂಗ ಮೂರ್ತಿ ಯನ್ನು ಸ್ಪರ್ಶಿಸಿ ಪೂಜೆ ಸಲ್ಲಿಸಲು ಅವಕಾಶವಿದೆ, ಕಾಶಿಯಲ್ಲಿಯೂ ಇಂತಹ ಆಚರಣ ಪದ್ಧತಿ ಇದೆ, ಶಿವಲಿಂಗವನ್ನು ಸ್ಪರ್ಶಿಸುವುದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ, ಪಂಚೆ ತೊಟ್ಟು ಶರ್ಟು ತೆಗೆದು ಸಾಮಾನ್ಯರು ಕೂಡ ಶಿವಲಿಂಗವನ್ನು ಸ್ಪರ್ಶಿಸಿ ಪೂಜೆ ಸಲ್ಲಿಸಬಹುದು.
ಇಲ್ಲಿ ಪ್ರತಿ ಸೋಮವಾರ ಭಕ್ತರಿಗೆ ಪ್ರಸಾದ ವಿನಿಯೋಗ ಇರುತ್ತದೆ. ಸೋಮವಾರ ಭಕ್ತರು ಬೇಡಿ ನಿಂತು ಹೂ ಅಪ್ಪಣೆಯನ್ನು ಪಡೆಯುತ್ತಾರೆ, ವಿಶೇಷ ದಿನಗಳಲ್ಲಿ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಜನಾಂಗದವರು ಸಹ ಬಂಧು ಪೂಜೆ ಸಲ್ಲಿಸುವುದು ಹಾಗೂ ಶಿವರಾತ್ರಿ ದಿನ 15ರಿಂದ 20 ಸಾವಿರ ಶಿವಭಕ್ತರು ಆಗಮಿಸಿ ದೇವರ ದರ್ಶನವನ್ನು ಪಡೆಯುವುದು ವಿಶೇಷವಾಗಿದೆ. ಮಹಾ ಶಿವರಾತ್ರಿ ನಿಮಿತ್ತ ವಿಶೇಷ ಪೂಜಾ ಕಾರ್ಯ ಕ್ರಮಗಳು ಫೆ. 15ರ ಭಾನುವಾರ ಬೆಳಿಗ್ಗೆ 5ಗಂಟೆಗೆ ರುದ್ರಾಭಿಷೇಕ ದೊಂದಿಗೆ ಪ್ರಾರಂಭವಾಗುವ ಮೂಲಕ ಸಾರ್ವಜನಿಕರ ಧರ್ಶನಕ್ಕೆ ಅಂದು ರಾತ್ರಿ 12ರವರೆಗೆ ಅವಕಾಶವಿದ್ದು, ಪ್ರಸಾದ ವಿನಯೋಗ ಕೂಡ ನಡೆಯಲಿದೆ. ಫೆ. 16ರ ಸೋಮವಾರ ಸ್ವಾಮಿಗೆ ವಿಶೇಷ ರುದ್ರಾಭಿಷೇಕದೊಂದಿಗೆ ಶಿವರಾತ್ರಿಯನ್ನು ಸಂಪನ್ನಗೊಳಿಸಲಾಗುವುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಸರ್ಕಾರದ ಸೇವೆಗಳನ್ನ ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ “ಪ್ರಜಾಸೇವೆ “ಜಾರಿಗೆ: ಮಧು ಬಂಗಾರಪ್ಪ

Madhu Bangarappa ಜನಸಾಮಾನ್ಯರ ದಿನನಿತ್ಯದ ಸಮಸ್ಯೆ-ಸವಾಲುಗಳಿಗೆ, ದುಃಖ ದುಮ್ಮಾನಗಳಿಗೆ ತ್ವರಿತವಾಗಿ ಸ್ಪಂದಿಸಿ,...

S.N. Channabasappa ಸಮಾಜಮುಖಿಯಾಗಿ ಕ್ರಿಯಾಶೀಲವಾಗಿರುವ ಆರ್ಯವೈಶ್ಯ ಶ್ರೀರಾಮಸಹಕಾರ ಸಂಘದ ಕಾರ್ಯ ಶ್ಲಾಘನೀಯ : ಎಸ್.ಎನ್.ಚನ್ನಬಸಪ್ಪ

S.N. Channabasappa "ಸಮಾಜದ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ...

B.Y. Raghavendra ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅಸಮಾಧಾನ

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ...