ವಿದ್ಯಾನಗರ 3ನೇ ಕ್ರಾಸ್, ಪುಷ್ಪ ಲೇಔಟ್ ವಾಸಿ ಪೀತಮ್ ಎಂಬುವವರ ತಮ್ಮ ಚಿನ್ನಬೆಳ್ಳಿ ವ್ಯಾಪಾರಿ ಗೌತಮ್ ಎಂಬ ಎಂಬ 33 ವರ್ಷದ ವ್ಯಕ್ತಿ ಜ.29 ರಂದು ಬೆಳಗ್ಗೆ ಮನೆಯಿಂದ ಉಪ್ಪಾರಕೇರಿಯ ಅಂಗಡಿಗೆ ಎಂದು ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5.5 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು, ತೆಳುವಾದ ಗಡ್ಡಮೀಸೆ ಬಿಟ್ಟಿರುತ್ತಾರೆ. ಎಡಗೈ ಮೇಲೆ SRG ಎಂಬ ಹಚ್ಚೆ ಗುರುತು ಇರುತ್ತದೆ. ಮನೆಯಿಂದ ಹೋಗುವಾಗ ನೀಲಿ ಶರ್ಟ್ ಹಾಗೂ ನೀಲಿ ಜೀನ್ ಪ್ಯಾಂಟ್ ಧರಿಸಿರುತ್ತಾರೆ.
ಈ ವ್ಯಕ್ತಿಯ ಕುರಿತು ಸುಳಿವು ದೊರೆತಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 9480803345/ 9844470744 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ತಿಳಿಸಿದೆ.
ಶಿವಮೊಗ್ಗ ವಿದ್ಯಾನಗರದಿಂದ ವ್ಯಕ್ತಿ ನಾಪತ್ತೆ. ಪೊಲೀಸ್ ಪ್ರಕಟಣೆ
Date:
