Friday, March 13, 2026
Friday, March 13, 2026

S.N.Chennabasappa ವ್ಯಕ್ತಿತ್ವ ರೂಪಿಸಿಕೊಳ್ಳಲು ನಿಜಶರಣರ ವಚನ ಅಳವಡಿಸಿಕೊಳ್ಳಬೇಕು –ಎಸ್.ಎನ್. ಚನ್ನಬಸಪ್ಪ

Date:

S.N.Chennabasappa ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಲು ನಿಜಶರಣರ ವಚನಗಳನ್ನು ಅಳವಡಿಸಿಕೊಂಡು ಉತ್ತಮ ಭವಿಷ್ಯ ಕಟ್ಟಿಕೊಳ್ಳಬಹುದು. ನಿಜಶರಣರು ಅವರಿಗೋಸ್ಕರ ಅಲ್ಲದೆ ಸಮಾಜಮುಖಿ ಕಾರ್ಯಗಳಿಂದ ಗುರುತಿಸಿಕೊಂಡವರು ಎಂದು ಶಾಸಕರು ಎಸ್ ಎನ್ ಚನ್ನಬಸಪ್ಪ ಹೇಳಿದರು.
ಅವರು ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ನವರ ಜಯಂತೋತ್ಸವ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು.
ಅಂಬಿಗರ ಚೌಡಯ್ಯರ ಸಮಾಜಸೇವೆ ಮಾಡುವ ಸಹಜ ಕ್ರಿಯೆಯಿಂದ ನಿಜಶರಣ ಎಂಬ ಹೆಸರು ಬಂದಿದೆ. ನಿಜಶರಣರು ನಮಗೆ ಸಂಸ್ಕೃತಿ, ಸಂಸ್ಕಾರ ಭಾವನೆಯ ಅರಿವನ್ನು ಮೂಡಿಸಿದ್ದಾರೆ. ಎಲ್ಲ ವಚನ ಸಾಹಿತ್ಯ ಒಂದೆಡೆ ಸೇರಿಸುವ ಪ್ರಯತ್ನ ಕರ್ನಾಟಕ ಸರ್ಕಾರ ನಡೆಸುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಾಹಿತಿಗಳು ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಎಸ್. ಬಿ. ವಾಸುದೇವ ರವರು ವಿಶೇಷ ಉಪನ್ಯಾಸ ನೀಡಿ ಭಕ್ತಿ ತೋರಿಕೆಯಾಗಿರದೇ ಅಂತರಾತ್ಮದಿಂದ ಅದನ್ನು ಸ್ಪರ್ಶಿಸಬೇಕು. 12 ನೇ ಶತಮಾನದಲ್ಲಿ ಕ್ರಾಂತಿಯ ರೂಪದಲ್ಲಿ ಹುಟ್ಟಿಕೊಂಡವರೇ ಅಂಬಿಗರ ಚೌಡಯ್ಯ. ಮಾನವನಿಗೆ ಬೇಕಾಗಿರುವುದು ಅಗತ್ಯ ಜ್ಞಾನ ಎಂದು ತಿಳಿಸಿದರು.
ಮನುಷ್ಯನ ವ್ಯಕ್ತಿತ್ವಕ್ಕೆ ಅಂಬಿಗರ ಚೌಡಯ್ಯನವರ ವಚನಗಳು ನಾಟುತ್ತವೆ. ಅದಕ್ಕನುಗುಣವಾಗಿ ಮೇಲು-ಕೀಳು ಎಂಬ ಭಾವನೆ ತೊಡೆದು ಹಾಕಬೇಕು.
S.N.Chennabasappa ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಮೇಶ್ ಹೆಚ್ ರವರು ಗಣ್ಯರಿಗೆ ಸ್ವಾಗತಿಸಿದರು.
ವೇದಿಕೆಯ ಮೇಲೆ ಜಿಲ್ಲಾ ಗಂಗಾಮತ ಸಂಘ ಅಧ್ಯಕ್ಷರಾದ ಡಿ ಬಿ ಕೆಂಚಪ್ಪ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಮಾರ್ಚ್ 12 ವಿಶ್ವ ಕಿಡ್ನಿ ದಿನ

Klive Special Article ಇವತ್ತು ಮಾರ್ಚ್ ಹನ್ನೆರಡು,ವಿಶ್ವ ಮೂತ್ರಪಿಂಡಗಳ ದಿನ, ಹುಟ್ಟು...

Law University ಸೌತ್ – ವೆಸ್ಟ್ ಇಂಟರ್ ಯೂನಿವರ್ಸಿಟಿ ಮಹಿಳಾ ಕರಾಟೆ ಪಂದ್ಯಾವಳಿಗೆ ಆಯ್ಕೆಯಾದ ದೀಕ್ಷಾ

Law University ಮಾರ್ಚ್ 10 ರಂದು ಧಾರವಾಡ ಕಾನೂನು ವಿಶ್ವವಿದ್ಯಾನಿಲಯದಲ್ಲಿ ಇಂಟರ್...