S.N. Channabasappa ಇಂದು ಪವಿತ್ರ ತುಂಗಭದ್ರಾ ಸಂಗಮ ಸ್ಥಳವಾದ ಕೂಡಲಿ ಪುಣ್ಯಕ್ಷೇತ್ರದಲ್ಲಿ, ‘ನಿರ್ಮಲಾ ತುಂಗಾ ಅಭಿಯಾನ’ದ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ “ವಿಷಮುಕ್ತ ತುಂಗಭದ್ರಾ, ರೈತರ ಫಸಲು ಸುಭದ್ರ” ಜಾಗೃತಿ ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರದ ಶಾಸಕ ಎಸ್.ಎನ್.ಚನ್ನಬಸಪ್ಪ ಭಾಗವಹಿಸಿದ್ದರು.
ನಮ್ಮ ಜೀವನದಿಯಾಗಿರುವ ತುಂಗಭದ್ರೆಯನ್ನು ಮಾಲಿನ್ಯಮುಕ್ತವಾಗಿಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ.
ಬನ್ನಿ, ನಮ್ಮ ನದಿಗಳನ್ನು ವಿಷಮುಕ್ತವಾಗಿಸೋಣ, ಮುಂದಿನ ಪೀಳಿಗೆಗೆ ಶುದ್ಧ ಜಲವನ್ನು ಉಳಿಸೋಣ.
ಈ ನಿಟ್ಟಿನಲ್ಲಿ, ಪುಣ್ಯಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ, ನದಿಯಲ್ಲಿ ಸ್ನಾನ ಮಾಡುವಾಗ ಸೋಪು, ಶ್ಯಾಂಪು ಹಾಗೂ ಇತರೆ ರಾಸಾಯನಿಕಯುಕ್ತ ವಸ್ತುಗಳನ್ನು ಬಳಸುವ ಬದಲಿಗೆ, ನೈಸರ್ಗಿಕವಾದ ಕಡ್ಲೆಹಿಟ್ಟನ್ನು ಬಳಸುವಂತೆ ಯಾತ್ರಿಗಳಿಗೆ ವಿನಂತಿಸಿದರು.
S.N. Channabasappa ನದಿಯ ಪಾವಿತ್ರ್ಯತೆ ಮತ್ತು ಪರಿಸರ ಸಮತೋಲನವನ್ನು ಕಾಪಾಡುವ ಉದ್ದೇಶದಿಂದ ಭಕ್ತಾದಿಗಳಿಗೆ ಕಡ್ಲೆಹಿಟ್ಟನ್ನು ವಿತರಿಸುವ ಮೂಲಕ ಈ ವಿಶೇಷ ಅಭಿಯಾನಕ್ಕೆ ಸಾಥ್ ನೀಡಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಶ್ರೀ ಗಿರೀಶ್ ಪಟೇಲ್, ಪ್ರಮುಖರಾದ ಶ್ರೀ ಪ್ರಭಾಕರ್, ಅಭಿಯಾನದ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
