Monday, May 4, 2026
Monday, May 4, 2026

Shivaganga Yoga Center ಮಾನವ ಸಂಬಂಧಗಳನ್ನ ಮಕರ ಸಂಕ್ರಾಂತಿ ಘಟ್ಟಿಗೊಳಿಸುತ್ತದೆ: ಎಸ್.ಎಸ್.ಜ್ಯೋತಿಪ್ರಕಾಶ್

Date:

Shivaganga Yoga Center ಶ್ರೀ ಶಿವಗಂಗಾ ಯೋಗ ಕೇಂದ್ರದ ವಿಶ್ವಸ್ಥ ಮಂಡಳಿ ಸದಸ್ಯರು, ಅಧ್ಯಕ್ಷರು ಬಸವೇಶ್ವರ ವೀರಶೈವ ಲಿಂಗಾಯಿತ ಸಮಾಜ ಸೇವಾ ಸಂಘ, ಶಾಖೆಯ ಯೋಗ ಅಭ್ಯಾಸಿಯವರಾದ ಶ್ರೀಯುತರು ಯೋಗ ಶಿಕ್ಷಣಾರ್ಥಿಗಳಿಗೆ ಶುಭ ಹಾರೈಸುತ್ತಾ ಮಾನವ ಸಂಬಂಧಗಳನ್ನು ಗಟ್ಟಿಗೊಳಿಸುವ ಸಂಕ್ರಾಂತಿ ಹೊಸ ವರ್ಷದ ಪ್ರಥಮ ಹಬ್ಬವಾಗಿದೆ, ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡೋಣ ಹಾಗೆ ನಮ್ಮ ನಡೆನುಡಿಯಲ್ಲೂ ಸಹ ಶುದ್ಧವಾಗಿರಲು ಪ್ರಯತ್ನಿಸೋಣ ಎಂದು ನುಡಿದರು.

ಅವರು ಶಿವಗಂಗಾ ಯೋಗ ಕೇಂದ್ರದ ರಾಘವ ಶಾಖೆಯಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು ಹಬ್ಬಗಳು ನಮಗೆ ಜೀವನೋತ್ಸಾಹವನ್ನು ಮೂಡಿಸುತ್ತದೆ ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪ್ರವೇಶ ಮಾಡುವುದರ ಜೊತೆಗೆ ಹೆಚ್ಚು ಬೆಳಕನ್ನ ನೀಡುತ್ತದೆ ಎಂದ ಅವರು ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತೀಕ ಹಾಗೆ ಸ್ತ್ರೀಯರಿಗೆ. ರೈತರಿಗೆ ಸಂಭ್ರಮದ ಹಬ್ಬವಾಗಿದೆ.

Shivaganga Yoga Center ಇದೇ ಸಂದರ್ಭದಲ್ಲಿ ಯೋಗ ಶಿಕ್ಷಕರಾದ ಜಿ.ಎಸ್.ಓಂಕಾರ್ ಅವರು ಮಾತನಾಡುತ್ತಾ ಸೂರ್ಯದೇವನು ಉತ್ತರಾಯಣಕ್ಕೆ ಪ್ರವೇಶ ನೀಡುವ ಶುಭದಿನ ನಮ್ಮ ಆಲೋಚನೆಗಳು ಒಳ್ಳೆಯ ದಿಕ್ಕಿನತ್ತ ತಿರುಗಲಿ ಬದುಕು ಎಳ್ಳು ಬೆಲ್ಲದಂತೆ ಮಿಶ್ರವಾಗಿರುವಂತೆ ನಮ್ಮ ನಡೆ-ನುಡಿಗಳು ಮಧುರ ಬಾಂಧವ್ಯವನ್ನ ಮೂಡಿಸಲಿ ಈ ಹಬ್ಬಕ್ಕೆ ಸಾಕಷ್ಟು ಆಧ್ಯಾತ್ಮಿಕ ಹಿನ್ನೆಲೆ ಇದೆ ಈ ಸುಗ್ಗಿ ಹಬ್ಬ ಎಲ್ಲರಲ್ಲೂ ಚೈತನ್ಯವನ್ನು ಮೂಡಿಸುತ್ತದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಎಲ್ಲಾ ಶಿಬಿರಾರ್ಥಿಗಳಿಗೆ ಎಳ್ಳು ಬೆಲ್ಲ ಸಿಹಿ ಕಬ್ಬು ವಿತರಿಸಿ ಪರಸ್ಪರಲ್ಲಿ ಶುಭಾಶಯ ಕೋರಲಾಯಿತು. ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರ ವಿಜಯ ಕೃಷ್ಣ. ಹರೀಶ್ . ರೋಟರಿ ಜಿ ವಿಜಯಕುಮಾರ್. ಸುಬ್ರಮಣಿ. ಶ್ರೀನಿವಾಸ್. ನರಸೂಜಿ ರಾವ್. ಶಂಕರ್. ಸುಜಾತಾ. ಗಾಯಿತ್ರಿ. ಶೋಭಾ, ಗಾಯತ್ರಿ ರಮೇಶ್
ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...

B.Y. Raghavendra ಬಿಎಸ್ ವೈ ಅಭಿಮಾನೋತ್ಸವ ಕೇವಲ ಸಮಾರಂಭವಲ್ಲ.ನಮ್ಮನಾಯಕರಿಗೆ ಸಲ್ಲಿಸುವ ಗೌರವ- ಬಿ.ವೈ.ರಾಘವೇಂದ್ರ.

B.Y. Raghavendra ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ...