Monday, February 2, 2026
Monday, February 2, 2026

Karnataka Rajyotsava ಕನ್ನಡಿಗರ ಹೆಮ್ಮೆ ಮತ್ತು ಭಾಷಾ ಪ್ರೇಮ ಉಳಿಸುವಲ್ಲಿ ಹೋರಾಟ ಮಾಡಿದ್ದೇವೆ- ತಾಯ್ನಾಡು ರಾಘವೇಂದ್ರ.

Date:

Karnataka Rajyotsava ಕನ್ನಡ ನಾಡು, ನುಡಿ, ಗಡಿ ವಿಷಯದಲ್ಲಿ ತೊಂದರೆಗಳು ಎದುರಾದಾಗ ಪ್ರತಿಯೊಬ್ಬ ಕನ್ನಡಿಗರು ಜಾತಿ,ಮತಗಳ ತೊರೆದು ಒಗ್ಗಟ್ಟಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆಯ ಸಂಸ್ಥಾಪಕ ಅಧ್ಯಕ್ಷ ತಾಯ್ನಾಡು ರಾಘವೇಂದ್ರ ಕರೆ ನೀಡಿದರು.

ಸೊರಬ ತಾಲೂಕಿನ ಬಾಡದ ಬೈಲು ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನ್ನಡ ರಾಜ್ಯೋತ್ಸವವನ್ನು ನವೆಂಬರ್ 1ರಂದು ಆಚರಿಸಲಾಗುತ್ತದೆ, ಇದು ರಾಜ್ಯದ ಸ್ಥಾಪನೆಯ ದಿನವಾಗಿದೆ, 1956ರಲ್ಲಿ ಭಾಷಾವಾರು ಪ್ರಾಂತ್ಯಗಳ ಪುನರ್‌ವಿಂಗಡಣೆಯ ನಂತರ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ರಾಜ್ಯವನ್ನು ರಚಿಸಲಾಗಿದ್ದು ಆದರೆ ಶಾಶ್ವತ ಕನ್ನಡ ಹೃದಯದಲ್ಲಿರಲು ವರ್ಷಪೂರ್ತಿ ಕನ್ನಡ ರಾಜ್ಯೋತ್ಸವ ಆಚರಿಸುವಂತಾಗಬೇಕು ಎಂದರು.

ನಮ್ಮ ಕರವೇ ಗಜ ಸೇನೆ ಸಂಘಟನೆಯು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ರಾಜ್ಯದ ಏಕೀಕರಣ ಮತ್ತು ಅಭಿವೃದ್ಧಿಗೆ ಅನೇಕ ಹೋರಾಟಗಳನ್ನು ಮಾಡಿದೆ. ಕನ್ನಡಿಗರ ಹೆಮ್ಮೆ ಮತ್ತು ಭಾಷಾ ಪ್ರೇಮವನ್ನು ಉಳಿಸುವಲ್ಲಿ ಹೋರಾಟವನ್ನು ಮಾಡಿದ್ದೇವೆ ಎಂದರು.

Karnataka Rajyotsava ರಾಜ್ಯದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳು ನಡೆಸಿದ್ದೇವೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯ ಬಳಕೆಯನ್ನು ಪ್ರೋತ್ಸಾಹಿಸುವ ಹೋರಾಟ ಮಾಡಿದ್ದೇವೆ. ನಮ್ಮ ಕರವೇ ಗಜ ಸೇನೆ ಸಂಘಟನೆ ವತಿಯಿಂದ ಕೋವಿಡ್ ಅಂತ ಸಮಯದಲ್ಲಿ ಉಚಿತ 20 ಅಂಬುಲೆನ್ಸ್ ಸೇವೆಗಳನ್ನು ನೀಡಿದ್ದೇವೆ. ರಾಜ್ಯದಲ್ಲಿ 3000 ಸಾವಿರ ವಿವಿಧ ಕಂಪನಿಗಳ ಒಡಂಬಡಿಕೆಯೊಂದಿಗೆ ಕಿದ್ವಾಯಿ, ನಿಮಾನ್ಸ್ ಸೇರಿದಂತೆ ಕೆಲವು ಆಸ್ಪತ್ರೆಗಳಿಗೂ ಸಹ ಉಚಿತ ಸೇವೆಯನ್ನು ನೀಡುತ್ತಿದ್ದೇವೆ. ಇತ್ತೀಚಿಗೆ ಬೆಂಗಳೂರಿನಲ್ಲಿ ನಮ್ಮ ಕರವೇ ಗಜ ಸೇನೆ ವತಿಯಿಂದ ಸಂತೋಷ್ ಗುರೂಜೀ ರವರ ಮಾರ್ಗದರ್ಶನದಲ್ಲಿ ನಡೆದ ಡಿಂಡಿಮ ಉತ್ಸವದಲ್ಲಿ 96 ನಿಮಿಷದಲ್ಲಿ 3000 ಜನರೊಂದಿಗೆ ಬಾರಿಸು ಕನ್ನಡ ಡಿಂಡಿಮ ಹಾಡಿಗೆ ಗಿನ್ನಿಸ್ ದಾಖಲೆ ನೋಬೆಲ್ ಪ್ರಶಸ್ತಿಯು ಸಹ ಬಂದಿದೆ. ನೊಂದವರ ನೆರವಿಗೆ ಬಂದಿದ್ದೇವೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದೇವೆ. ಕನ್ನಡಿಗರ ಮೇಲೆ ಅನ್ಯ ಅನ್ಯ ಬಾಷಿಕ ರಿಂದ ಆಗುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿದ್ದೇವೆ. ಹೀಗೆ ಕನ್ನಡ ನಾಡಿನಲ್ಲಿ ಕನ್ನಡಿಗರ ಸೇವೆಗೆ ಹಗಲಿರುಳು ನಮ್ಮ ಸಂಘಟನೆ ಸೆಮಿಸುತ್ತಿದೆ ಎಂದರು.‌

ಈ ಸಂದರ್ಭದಲ್ಲಿ ಕರವೇ ಗಜ ಸೇನೆ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್, ಉಚಿತ ಪೆನ್ಸಿಲ್ ಪೆನ್ನುಗಳನ್ನು ನೀಡಲಾಯಿತು ಹಾಗೂ ಊರಿನ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸಮಾಜ ಸೇವಕ ಡಾ. ಎಚ್.ವಿ. ಜ್ಞಾನೇಶ್ ನೆರವೇರಿಸಿದರು. ನಿವೃತ್ತ ಐಎಎಸ್ ಅಧಿಕಾರಿ ಶಿವಪ್ಪ, ರಾಜ್ಯ ಕರವೇ ಕರವೇ ಗಜ ಸೇನೆ ಕಾರ್ಮಿಕ ಘಟಕದ ಅಧ್ಯಕ್ಷ ಕೇಶವ ಮೂರ್ತಿ ಪೆಟ್ಕರ್, ಕಾನೂನು ಘಟಕದ ಅಧ್ಯಕ್ಷ, ಜಗದೀಶ್ ಗೌಡ, ರಾಜ್ಯ ಕರವೇ ಗಜ ಸೇನೆ ಕಾರ್ಯದರ್ಶಿ ಎಚ್. ಆರ್. ತೀರ್ಥೇಶ್, ಜಿಲ್ಲಾ ಕಾರ್ಯದರ್ಶಿ ಗುರುಪ್ರಸಾದ್, ಗ್ರಾಮ ಪಂಚಾಯಿತಿ ಸದಸ್ಯ ತಿರುಪತಿ, ತಾಲೂಕು ಗಜ ಸೇನೆ ಅಧ್ಯಕ್ಷ ಅಂಕಿತ್ ಗೌಡ, ಡಾ. ಪ್ರಭು ಕೆ. ಸಾಹುಕಾರ್, ಡಾ. ವಾಜಿದ್, ಕರವೇ ಗಜ ಸೇನೆ ಬಾಡದ ಬೈಲು ಅಧ್ಯಕ್ಷ. ಎಂ. ಲೋಕೇಶ್ ಸೇರಿದಂತೆ ಪ್ರಮುಖರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...