Rotary Shimoga ಅತ್ಯುತ್ತಮ ಜೀವನಕ್ಕೆ, ಸಮಾಜಿಕ ಸೇವೆ, ಆತ್ಮೀಯರೊಂದಿಗೆ ಬೆರೆಯುವುದು, ಉತ್ತಮ ಜೀವನ ಶೈಲಿ, ಆಹಾರ, ನಿದ್ದೆ, ಸಂತೃಪ್ತಿ ಮಾನಸಿಕ ಅರೋಗ್ಯ, ವ್ಯಾಯಾಮ ದಿಂದ ಆರೋಗ್ಯಕರ ಜೀವನ ಗಳಿಸಲು ಸಾದ್ಯ ಎಂದು ರೋಟರಿ ಶಿವಮೊಗ್ಗ ಜ್ಯೂಬಿಲಿ ಕ್ಲಬ್ ವಾರದ ಸಭೆಯ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಂತರಾಷ್ಟ್ರೀಯ ವಿಪ್ಪತ್ತು ನಿರ್ವಣೆ ತರಬೇತುದಾರರಾದ ಶ್ರೀ ಡಾ.ವಿ.ಎಲ್.ಎಸ್.ಕುಮಾರ್ ಮಾತನಾಡುತ್ತಿದ್ದರು.
ಹಿರಿಯರು ಅತ್ಯುತ್ತಮ ಜೀವನ ಸಾಗಿಸುತ್ತಿದ್ದಾರೆ, ಆದರೆ ಯುವಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿಯೆ ಇಲ್ಲ. ಮೊಬೈಲ್, ಕಂಪ್ಯೂಟರ್, ಹವನಿಯಂತ್ರಿತ ಕೊಠಡಿ, ಲಿಪ್ಟ್, ದುಷ್ಟಚಟಗಳ ದಾಸರಾಗಿ ತಮ್ಮ ಆರೋಗ್ಯ ಹಾಳುಮಾಡಿಕೊಂಡು ಚಿಕ್ಕ ವಯಸಿನಲ್ಲಿಯೆ, ಪಾಲಕರ ಮುಂದೆಯೆ ಜೀವ ಕಳೆದುಕೊಳ್ಳುತ್ತಿದ್ದಾರೆ.
ಪ್ರಕೃತಿ ವಿಕೋಪ ವಾರದ ಮುಂಚೆಯೆ ತಿಳಿಯುತ್ತೆ, ಇದರಿಂದ ಜೀವ ಹಾನಿ ಕಡಿಮೆಯಾಗಿದೆ. ಪ್ರವಾಹದಿಂದ ಮುನ್ನೂರು, ಭೂಕುಸಿತ ದಿಂದ ಐವತ್ತು, ಸಿಡಲಿನಿಂದ ಹತ್ತು, ಅಫಘಾತದಿಂದ ಒಂದುಲಕ್ಷ ಎಂಬತ್ತು ಸಾವಿರ, ಹೃದಯಾಘತದಿಂದ ನಾಲ್ಕು ಲಕ್ಷ ಜನ ಪ್ರತಿ ವರ್ಷ ಭಾರತದಲ್ಲಿ ಸಾಯುತ್ತಾರೆ.
Rotary Shimoga ಅತ್ಯುತ್ತಮ ರಕ್ಷಣೆಯ ವಾಹನಗಳು ಇದ್ದರೂ, ವೇಗದ ಮಿತಿಯಿಲ್ಲದೆ ಅಫಘಾತ ಆಗುತ್ತವೆ. ನಿಮ್ಮನ್ನು ಹಿಂದಿಕ್ಕಲು ಬಂದವರಿಗೆ ಅವಕಾಶ ಮಾಡಿಕೊಡಿ, ಅವರನ್ನು ಮೀರಿಸುವ ದುಸ್ಸಾಹಸ ಮಾಡಬೇಡಿ. ಅಪಘಾತವಾದಾಗ ಸಹಾಯ ದೊರೆಯದೆ ಹೆಚ್ಚು ಜನ ಜೀವಕಳೆದು ಕೊಳ್ಳುತ್ತಾರೆ. ಕನಿಷ್ಟ ತಕ್ಷಣ ಆ್ಯಂಬುಲೆನ್ಸ್ ಕರೆದು ಆಸ್ವತ್ರೆಗೆ ಸೇರಿಸಿ. ನೀವೆ ಜೀವ ಹೊಗಿರಬಹುದು ಎಂದು ನಿರ್ಲಕ್ಷ ಮಾಡಬೇಡಿ. ರಸ್ತೆಯ ಬಲ ಬದಿಯಲ್ಲಿ ವಾಯುಸಂಚಾರ ಮಾಡಿ, ಸಂಗೀತ ಹಾಕಿ ಕೊಂಡು ನಡೆಯಬೇಡಿ.
ಎರಡು ದಿನ ಮುಂಚಿತವಾಗಿ ಹೃದಯಘಾತದ ಮುನ್ಸೂಚನೆ ದೊರಕುತ್ತದೆ. ಗ್ಯಾಸ್ಟಿಕ್ ಎಂದು ಸ್ವ-ಔಷದ ಉಪಚಾರ ಮಾಡಿಕೊಂಡು, ಅಪಾಯ ತಂದು ಕೊಳ್ಳುತ್ತಾರೆ. ಪ್ರಥಮ ಚಿಕಿತ್ಸೆ ಎಂದು ತಕ್ಷಣ ನೀರು ಕುಡಿಸುತ್ತಾರೆ, ಇದು ತಪ್ಪು. ಮಲಗಿಸದೆ, ಕಾಲುಚಾಚಿ ಕುಳ್ಳರಿಸಿ ಹೆಚ್ಚು ಗಾಳಿ ಬರಲು ಅವಕಾಶ ಇರಲಿ, ಮೆದಳಿಗೆ ರಕ್ತಚಲನೆ ಇಲ್ಲದೆ ಇದ್ದಾಗ ಜೀವ ಹೋಗುತ್ತದೆ
ಹೃದಯದಿಂದ ಮೆದುಳಿಗೆ ರಕ್ತಚಲನೆ ಆಗುತ್ತದೆ. ಅದರಲ್ಲಿ ವ್ಯತ್ಯಾಸವಾದಾಗ ಉಸಿರಾಟದ ತ್ತೊಂದರೆ ಯಾಗುತ್ತದೆ. ದೀರ್ಘ ಉಸಿರಾಡಲು ಹೇಳಿ. ಕೆಮ್ಮಲು ಹೇಳಬೇಡಿ, ಇದರಿಂದು ಅಮ್ಲುಜನಕ ಸಿಗುವುದಿಲ್ಲ.
ಇತ್ತೀಚೆಗೆ ನರರೋಗ ತಜ್ಞರಿಗೆ ಹೆಚ್ಚು ರೋಗಿಗಳು ಬರುತ್ತಿದ್ದಾರೆ. ರಕ್ತಹೆಪ್ಪು ಗಟ್ಟುವಿಕೆಯಿಂದ ಸ್ಟ್ರೋಕ್ ಆಗುತ್ತಿದೆ, ಉತ್ತಮ ಆಹಾರದ ಸೇವನೆ, ವ್ಯಾಯಾಮ, ದಿನದ ಎಂಟುಗಂಟೆ ಕೆಲಸ, ನಿದ್ರೆ, ಕುಟುಂಬ ದವರೊಂದಿಗೆ ಬೆರೆಯುವುದರಿಂದ ಉತ್ತಮ ಆರೋಗ್ಯ ಹೊಂದಲು ಸಾದ್ಯ ಎಂದರು.
ರೊ.ಬಿ.ಎಸ್.ಅಶ್ವಥ್ ಅಧ್ಯಕ್ಷತೆ ವಹಿಸಿದ್ದರು, ರೊ.ಉಮಾದೇವಿ ಸ್ವಾಗತಿಸಿದರು, ಕಾರ್ಯದರ್ಶಿ ರೊ.ರೇವಣಸಿದ್ದಪ್ಪ ವಂದಿಸಿದರು. ಭಾರದ್ವಾಜ್, ಪ್ರವೀಣ್ ಜವಳಿ, ಉಮೇಶ್, ವಾಗೇಶ್, ಗಂಗಾಧರಸ್ವಾಮಿ, ನವೀನ್ ಹೇಮಾಶೇಖರ್, ರಾಜಶೇಖರ್ ಮುಂತಾದವರಿದ್ದರು
Rotary Shimoga ಸಂತೃಪ್ತಿ ಜೀವನಕ್ಕೆ ಆರೋಗ್ಯವೇ ಮೂಲ ಕಾರಣ:ಡಾ.ವಿಎಲ್ ಎಸ್ ಕುಮಾರ್
Date:
