Bhimashankar Linga Shivacharya Bhagavatpada Swamiji ಶಿವಮೊಗ್ಗದಲ್ಲಿ ಕೇದಾರ ಶ್ರೀಗಳಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಶಿವಮೊಗ್ಗ ನಗರದಲ್ಲಿ ಆಯೋಜಿಸಿರುವ ಇಷ್ಠಲಿಂಗ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕಾಗಮಿಸಿದ ಉತ್ತರಾಖಂಡದ ಕೇದಾರ ಪೀಠದ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದ ಸ್ವಾಮೀಜಿಗಳಿಗೆ ಭಕ್ತರು ಅದ್ದೂರಿ ಸ್ವಾಗತ ಕೋರಿದರು.
Bhimashankar Linga Shivacharya Bhagavatpada Swamiji ನಗರದ ಪ್ರಮುಖ ರಸ್ತೆಗಳಲ್ಲಿ ಶ್ರೀಗಳ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಶಿವಶಕ್ತಿ ಸಮಾಜ, ಜಿಲ್ಲಾ ವೀರಶೈವ ಜಂಗಮ ಅಚರ್ಕರು ಹಾಗೂ ಪುರೋಹಿತರ ಕ್ಷೇಮಾಭಿವೃದ್ದಿ ಸಂಘದ ಪ್ರಮುಖರು ಸೇರಿದಂತೆ ವೀರಶೈವ ಸಮಾಜ ಬಾಂಧವರು ಉಪಸ್ಥಿತರಿದ್ದರು. ಈ ವೇಳೆ ಮೆರವಣಿಗೆಯಲ್ಲಿ ಸಾಂಸ್ಕೃತಿಕ ಕಲಾ ತಂಡಗಳು, ವಿವಿಧ ವೇಷಭೂಷಣ ತೊಟ್ಟ ಕಲಾವಿದರು ಗಮನ ಸೆಳೆದರು.
