DC Shivamogga ಸಾರ್ವಜನಿಕ ಆಟೋ ಪ್ರಯಾಣಿಕರಿಗೆ ಆಗುತ್ತಿರುವ ಕಿರಿಕಿರಿಯಿಂದ ಮುಕ್ತಿಗೊಳಿಸಿ, ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಹತ್ವದ ನಿರ್ಣಯ ಕೈಗೊಂಡಿದ್ದು, ಸೆಪ್ಟಂಬರ್ 01ರಿಂದಲೇ ಅನ್ವಯವಾಗುವಂತೆ ಆರಂಭದ ಹಂತವಾಗಿ ನಗರದ ರೈಲ್ವೇ ನಿಲ್ದಾಣದಿಂದ ಪ್ರೀಪೇಯ್ಡ್ಆಟೋ ಕೌಂಟರ್ಗಳನ್ನು ಪ್ರಾಯೋಗಿಕವಾಗಿ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತಹೆಗಡೆ ಅವರು ಹೇಳಿದರು.
ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಪ್ರೀಪೇಯ್ಡ್ಆಟೋ ಕೌಂಟರ್ಗಳನ್ನು ಆರಂಭಿಸುವ ಕುರಿತಂತೆ ಏರ್ಪಡಿಸಲಾಗಿದ್ದ ಸಂಬಂಧಿತ ಇಲಾಖಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪೊಲೀಸ್, ಸಾರಿಗೆ, ಮಹಾನಗರಪಾಲಿಕೆ ಇವರುಗಳ ಸಹಯೋಗದೊಂದಿಗೆ ಪ್ರೀಪೇಯ್ಡ್ವ್ಯವಸ್ಥೆಯನ್ನು ಅನುಷ್ಟಾನಕ್ಕೆ ತರಲಾಗುವುದು. ಅದಕ್ಕೂ ಮುನ್ನ ಆಟೋ ಚಾಲಕರು ಮತ್ತು ಮಾಲೀಕರ ಅಭಿಪ್ರಾಯವನ್ನೂ ಪಡೆದು, ಸಾರ್ವಜನಿಕರು ಹಾಗೂ ಆಟೋ ಚಾಲಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದವರು ನುಡಿದರು. ಆರಂಭಿಕ ಹಂತದಲ್ಲಿ ರೈಲ್ವೇ ನಿಲ್ದಾಣದಲ್ಲಿ ಆಯ್ದ ಮೂರು ಸ್ಥಳಗಳಲ್ಲಿ ಪ್ರೀಪೇಯ್ಡ್ಆಟೋ ಕೌಂಟರ್ಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಅದಕ್ಕಾಗಿ ನಗರ ಸ್ಥಳೀಯ ಸ್ವಯಂಸೇವಾ ಸಂಸ್ಥೆ ಚೈತನ್ಯ ರೂರಲ್ಡೆವಲಪ್ಮೆಂಟ್ಸೊಸೈಟಿಯ ವ್ಯವಸ್ಥಾಪಕರು ಆಸಕ್ತಿ ವಹಿಸಿದ್ದು, ಈಗಾಗಲೇ ಅದರ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದ ಅವರು, ಸ್ಥಳೀಯ ಜನಪ್ರತಿನಿಧಿಗಳ ಅಭಿಪ್ರಾಯ ಹಾಗೂ ಸಹಕಾರವನ್ನು ಪಡೆದು ಕ್ರಮ ವಹಿಸಲಾಗುವುದು ಎಂದವರು ನುಡಿದರು.
ಈ ಪ್ರೀಪೇಯ್ಡ್ಆಟೋ ಕೌಂಟರ್ಗಳ ಆರಂಭದಿಂದ ನಗರದಲ್ಲಿನ ಸಾರ್ವಜನಿಕರು ಹಾಗೂ ನೆರೆಯ ಜಿಲ್ಲೆ, ತಾಲೂಕುಗಳಿಂದ ನಗರಕ್ಕೆ ವಿವಿಧ ಉದ್ದೇಶಗಳಿಗಾಗಿ ಆಗಮಿಸುವವರಿಗೆ ಅನುಕೂಲವಾಗಲಿದೆ ಎಂದ ಅವರು ಸುಗಮ ಸಂಚಾರ ವ್ಯವಸ್ಥೆಯಿಂದಾಗಿ ಶಿಸ್ತು ಮೂಡಲಿದೆ.
ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿರುವ ಈ ವ್ಯವಸ್ಥೆ ಯಶಸ್ವಿಯಾದಲ್ಲಿ ನಗರದ ಎಲ್ಲಾ ಪ್ರಮುಖ ವರ್ತುಲಗಳು, ಜನನಿಬಿಡ ಸ್ಥಳಗಳಿಗೆ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಈ ಕೌಂಟರ್ಗಳ ಆರಂಭದಿಂದಾಗಿ ನಗರದಲ್ಲಿನ ಆಟೋ ಚಾಲಕರಲ್ಲಿ ಸ್ಪರ್ಧೆ ಅಥವಾ ಚರ್ಚೆಗೆ ಅವಕಾಶಗೊಳ್ಳದಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಸಮಾಲೋಚನೆ ನಡೆಸಬೇಕು. ಅದಕ್ಕೆ ಚಾಲಕರು ಸಹಕಾರ ನೀಡಬೇಕು. ಚಾಲಕರು ನಿಯಮಾನುಸಾರ ಸದರಿ ಸಾಲಿನಲ್ಲಿ ನಿಂತು ಸಾರ್ವಜನಿಕ ಸೇವೆಗೆ ಸಿದ್ಧರಾಗಬೇಕು. ಪ್ರೀಪೇಯ್ಡ್ಸೇವೆ ನೀಡುವ ಪ್ರತಿ ಆಟೋಗಳ ಚಾಲಕರು ನಿಯಮಾನುಸಾರ ವಾಹನ ಚಾಲನ ಪರವಾನಿಗಿ, ನೋಂದಣಿ ಪ್ರಮಾಣಪತ್ರ ಹೊಂದಿರಬೇಕು. ದಿನನಿತ್ಯ ರೈಲ್ವೇ ಸ್ಟೇಷನ್ನ ಸ್ಟ್ಯಾಂಡ್ನಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಮೊದಲ ಆದ್ಯತೆಯಾಗಿ ಪರಿಗಣಿಸುವ ಬಗ್ಗೆಯೂ ಚರ್ಚಿಸಲಾಗಿದೆ ಎಂದವರು ನುಡಿದರು.
DC Shivamogga ಈಗಿರುವ ಕನಿಷ್ಟ ದರವನ್ನೇ ನಿಗಧಿಪಡಿಸಿಕೊಂಡು ಯಾವುದೇ ಬದಲಾವಣೆಗಳಿಲ್ಲದೆ ಆಟೋ ನಡೆಸಲು ಚಾಲಕರು ಸಹಕರಿಸಬೇಕು. ಉಳಿದಂತೆ ಆಟೋ ಚಾಲಕರ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಆದ್ಯತೆಯ ಮೇಲೆ ಗಮನಹರಿಸಲಾಗುವುದು ಎಂದವರು ತಿಳಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಮಾತನಾಡಿ, ಹೊಸದಾಗಿ ಪ್ರವೇಶಿಸುತ್ತಿರುವ ಆಟೋಗಳಿಗೆ ನೀಡಲಾಗುತ್ತಿರುವ ಪರವಾನಿಗೆಯನ್ನು ತಾತ್ಕಾಲಿಕ ಅವಧಿಗೆ ಸ್ಥಗಿತಗೊಳಿಸಬೇಕು. ಮಹಾವೀರ್ಸರ್ಕಲ್ಸೇರಿದಂತೆ ನಗರದ ಪ್ರಮುಖ ವರ್ತುಗಳಲ್ಲಿ ಬಿಕ್ಷೆ ಯಾಚಿಸುವವರು, ವಸ್ತುಗಳ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಆಕಸ್ಮಿಕ ಅಪಘಾತಗಳು ಸಂಭವಿಸುತ್ತಿವೆ. ಅದರ ನಿಯಂತ್ರಣಕ್ಕೆ ಜಿಲ್ಲಾಡಳಿತ ಗಮನಹರಿಸಬೇಕು ಎಂದರು.
ಸಭೆಯಲ್ಲಿ ಪ್ರೊಬೇ಼ಷನರ್ಐಎಎಸ್.ಅಧಿಕಾರಿ ನಾಗೇಂದ್ರ ಬಾಬು, ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಶಿರೋಳಕರ್, ಅಧೀಕ್ಷಕ ಶಶಿಧರ್, ಮಲ್ಲೇಶಪ್ಪ, ಕೆ.ಎಸ್.ಆರ್.ಟಿ.ಸಿ. ನಿಯಂತ್ರಣಾಧಿಕಾರಿ ದಿನೇಶ್ಕುಮಾರ್, ರೈಲ್ವೇ ಇಲಾಖೆಯ ಅಧಿಕಾರಿ ಬಿಶ್ವಾಸ್, ಮಂಜುನಾಥ್ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
