Thursday, March 19, 2026
Thursday, March 19, 2026

World Yoga Day ಯೋಗ ಬದುಕಿನ ಹಾದಿಯ ಕೈದೀವಿಗೆ : ರೊ. ಕೆ. ಬಿ. ರವಿಶಂಕರ್

Date:

World Yoga Day ವಿಶ್ವ ಯೋಗ ದಿನಾಚರಾಣೆಯನ್ನು ರೊಟರಿ ಪೂರ್ವ ಆಂಗ್ಲ ಮಾದ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗಾಸನ ಮಾಡುವುದ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ರೊಟರಿ ಪೂರ್ವ ಎಜುಕೇಶನಲ್ ಮತ್ತು ಛಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾದ ರೊ. ಕೆ ಬಿ ರವಿಶಂಕರ್ ಮಾತನಡುತ್ತಾ ಯೋಗ ಎಂಬುದು ಬದುಕಿನ ಹಾದಿಯ ಕೈದೀವಿಗೆ ಎಂದು ಸಹಜ ಶುದ್ದ ಬದುಕನ್ನು ಸಾಧ್ಯಮಾಡಿಕೊಳ್ಳುವುದು ಹೇಗೆ ಎಂಬುದಕ್ಕೆ ಯೋಗದಲ್ಲಿ ಉತ್ತರವಿದೆ ಎಂದು, ಪ್ರತಿನಿತ್ಯವೂ ಯೋಗಾಭ್ಯಾಸ ಮಾಡುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಡವಾಗಬಹುದೆಂದು ವಿದ್ಯಾರ್ಥಿಗಳೆಲ್ಲರೂ ಈ ಯೋಗಾಭ್ಯಾಸವನ್ನು ರೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಇದೆ ಸಂದರ್ಭದಲ್ಲಿ ರೊಟರಿ ಪೂರ್ವ ಎಜುಕೇಶನ್ ಮತ್ತು ಛಾರಿಟಬಲ್ ಟ್ರಸ್ಟ್ ನ ಕಾರ್ಯದರ್ಶಿ ರೊ. ಎಸ್ ಸಿ ರಾಮಚಂದ್ರ ರವರು ಮಾತನಾಡುತ್ತಾ ನೂರಾರು ಯೋಗ ಸೂತ್ರಗಳಿದ್ದರೂ ಅವುಗಳೆಲ್ಲವನ್ನು ಕ್ರೂಢೀಕರಿಸಿ ಯೋಗವನ್ನು ಒಂದು ಸೂತ್ರಗಳ ರೂಪದಲ್ಲಿ ಜಗತ್ತಿಗೆ ಪ್ರಚುರ ಪಡಿಸಿದವರು. ಮಹರ್ಷಿ ಪತಂಜಲಿಯವರೆಂದು ಬಹಳ ಮುಖ್ಯವಾಗಿ ಯೊಗದಲ್ಲಿ ಅಷ್ಟಾಂಗಯೊಗ, ಪ್ರಾಣಯಾಮ, ಸೂರ್ಯನಮಸ್ಕಾರ ಮುಂತಾದ ಆಸನಗಳನ್ನು ಜೀವನದಲ್ಲಿ ರೂಢಿಸಿಕೊಂಡರೆ ಈ ಆಸನಗಳು ದೈಹಿಕ ಮತ್ತು ಮಾನಸಿಕ ಕಾಯಿಲೆಯಳಿಗೆ ದಿವ್ಯ ಔಷಧವೆಂದು ತಿಳಿಸಿದರು.
ಯೋಗವೆಂದರೆ ಆಸನ ಪ್ರಾಣಯಾಮಗಳಷ್ಟೇ ಅಲ್ಲದೆ ನಮ್ಮ ರಾಷ್ಟವು ಸಾಕ್ಷತ್‌ಕರಿಸಿಕೊಂಡ ಒಂದು ಜೀವನ ದೃಷ್ಟಿ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಟ್ರಸ್ಟಿ ಜಂಟಿ ಕಾರ್ಯದರ್ಶಿ(ಆಡಳಿತ) ರೊ ಜಿ ವಿಜಯಕುಮಾರ್ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಈ ದಿನ ಪ್ರಪಂಚಾದ್ಯಂತ 215 ರಾಷ್ಟಗಳಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಪಾಶ್ಚತ್ಯರಿಗೂ ಕೂಡ ಯೋಗದ ಮಹತ್ವದ ಅರಿವಾಗಿದೆ ಎಂದು ಈ ಕಾರಣಕ್ಕಾಗಿಯೇ ಪ್ರಾಚೀನ ಭಾರತದ ಚಿಂತನೆಗಳು ವಿಶ್ವಾದ್ಯಂತ ಹರಡಲು ಯೋಗದ ಮತ್ವವೇ ಕಾರಣವಾಗಿರುತ್ತದೆಂದು ತಿಳಿಸಿದರು.

ಲಿಂಗ ಭೇದವಿಲ್ಲದೇ ಪ್ರತಿಯೋಬ್ಬರು ಯೋಗಾಭ್ಯಾಸಗಳನ್ನು ಮಾಡುವುದರ ಮೂಲಕ ಸದೃಡ ಜೀವನವನ್ನು ಕಟ್ಟಿಕೊಳ್ಳಬೇಕೆಂದು ಕರೆನೀಡಿದರು.

ಇದೇ ಸಂದರ್ಭದಲ್ಲಿ ಟ್ರಸ್ಟಿನ ಉಪಾದ್ಯಕ್ಷರಾದ ರೋ ನಾಗವೇಣಿಯವರು ಮಾತನಾಡುತ್ತಾ ಪ್ರಾಚೀನ ಭಾರತದಮೇಲೆ ಬೌತಿಕ ಮತ್ತು ಸಾಂಸೃತಿ ದಾಳಿಗಳು ನಿರಂತರವಾಗಿ ನಡೇದರೂ ಇಂದಿಗೂ ಯೋಗದಂತಹ ಚಿಂತನೆಗಳು ಉಳಿದುಕೊಂಡಿವೆೆ ಎಂದರೆ ಯೋಗದ ಮಹತ್ವದ ಅರಿವು ಸಾಕ್ಷತ್ಕಾರವಾಗುತ್ತದೆಂದು ಈ ಕಾರಣಕ್ಕಾಗಿ ವಿದ್ಯಾರ್ಥಿಗಳಷ್ಟೇ ಅಲ್ಲದೇ ಶಿಕ್ಷಕರು/ಶಿಕ್ಷಕಿಯರು ಕ್ರಮಬದ್ದ ಜೀವನವನ್ನು ರೂಢಿಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಬೇಕೆಂದು ಕರೆ ನೀಡಿದರು.

World Yoga Day ಈ ವಿಶ್ವಯೋಗ ದಿನಾಚರಣೆ ಸಂದರ್ಭದಲ್ಲಿ ಶಿವಗಂಗ ಯೋಗ ಕೇಂದ್ರದ ಶ್ರೀಮತಿ ಪ್ರೇಮಪೂರ್ಣಚಂದ್ರ ಮತ್ತು ಚಿತ್ರಮಂಜುನಾಥ ರವರು ವಿದ್ಯಾರ್ಥಿಗಳಿಗೆ ಯೋಗಾಸನಗಳ ಪ್ರಾತ್ಯಕ್ಷಿಕೆ ಗಳ ಮೂಲಕ ವಿದ್ಯಾರ್ಥಿಗಳಿಗೆ ಯೋಗಾಸನಗಳ ಪರಿಚಯಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಪ್ರಿನ್ಸಪಾಲರಾದ ಸೂರ್ಯನಾರಾಯಣ್ ಮತ್ತು ಮಾಜಿ ಕಾರ್ಪೂಟರ್ ಶ್ರೀಮತಿ ರೊ. ಅನಿತಾ ರವಿಶಂಕರ್ ಶಾಲೆಯ ಶಿಕ್ಷಕ/ಶಕ್ಷಕಿಯರು ಮತ್ತು ಸಿಬ್ವಂದಿವರ್ಗದವರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...