Monday, December 15, 2025
Monday, December 15, 2025

Sri Ranganatha Temple ವೇದಾವತಿ ವಲಯ ಸುರಭಿ ಶಾಖೆಯಿಂದ ಪ್ರಾರಂಭವಾದ ಉಚಿತ ಯೋಗ ತರಗತಿ ಆರಂಭ

Date:

Sri Ranganatha Temple ಸಂಸ್ಕಾರ ಸಂಘಟನೆ ಸೇವೆ ಎಂಬ ಧ್ಯೇಯೋದ್ಧೇಶಗಳೊಂದಿಗೆ ಪುಟ್ಟ ಸಸಿಯಾಗಿ ಜನ್ಮ ತಳೆದ ಪತಂಜಲಿ ಯೋಗ ಶಿಕ್ಷಣ ಸಮಿತಿಯು ಇಂದು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬೃಹತ್ ವೃಕ್ಷವಾಗಿ ಹರಡಿ ಇಂದು 800 ಕ್ಕಿಂತ ಹೆಚ್ಚು ಶಾಖೆಗಳನ್ನು ಹೊಂದಿದೆ ಹಾಗು ಪ್ರತಿನಿತ್ಯ ಉಚಿತ ಯೋಗ ತರಬೇತಿಯ ಶಿಕ್ಷಣವನ್ನು ನೀಡುತ್ತಿದೆ ಎಂದು ಸಮೀತಿಯ ರಾಮಚಂದ್ರ ತಿಳಿಸಿದರು.

ಸೊರಬ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಶ್ರೀ ರಂಗ ಕಸ್ವೇಷನ್ ಹಾಲ್‌ನಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ವೇದಾವತಿ ವಲಯ ಸುರಭಿ ಶಾಖೆಯಿಂದ ಪ್ರಾರಂಭವಾದ ಉಚಿತ ಯೋಗ ತರಗತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.

ಲಕ್ಷಾಂತರ ಯೋಗ ಬಂಧುಗಳ ಮಹಾನ್ ಪರಿವಾರ ಇದಾಗಿದ್ದು, ಪ್ರತಿದಿನ ಉಚಿತವಾಗಿ ಸಾವಿರಾರು ಶಿಬಿರಗಳನ್ನು ಆಯೋಜಿಸುತ್ತಾ ಜನರಿಗೆ ಧನಾತ್ಮಕ ಚಿಂತನೆ ಕ್ರಿಯಾಶಿಲ ವ್ಯಕ್ತಿತ್ವ ಹಾಗೂ ಆದರ್ಶ ಕುಟುಂಬದ ತರಬೇತಿಯನ್ನು ನೀಡುತ್ತಾ ಸಮಾಜದಲ್ಲಿ ಉತ್ತಮವದ ಪರಿವರ್ತನೆಗೆ ಕಾರಣೀಭೂತವಾಗಿದೆ ಎಂದರು.

ಸಮಿತಿಯು ಯೋಗ ವಿದ್ಯೇಯ ಮುಖಾಂತರ ಸಮಾಜನ ಅವಶ್ಯಕತೆಗಳಾದ ಆರೋಗ್ಯ, ಮಕ್ಕಳಿಗೆ ದೈಹಿಕ ಶಿಕ್ಷಣ, ಯುವಕರಿಗೆ ಮಾರ್ಗದರ್ಶನ, ಗೃಹಸ್ಥಾಶ್ರಮ ಧರ್ಮ, ಸ್ವಚ್ಛತೆ, ಸೌಂದರ್ಯ, ಒತ್ತಡ ರಹಿತ ವ್ಯವಸ್ಥಿತ ಜೀವನ ವೃತ್ತಿಯಲ್ಲಿ ನಾವಿನ್ಯತೆ ಮತ್ತು ಆದ್ಯಾತ್ಮಿಕ ಮಾರ್ಗದರ್ಶನವನ್ನು ನೀಡುತ್ತಿದೆ.

ನಮ್ಮ ಸಮಿತಿಯಲ್ಲಿ ಸಂಸ್ಕಾರ ಸಂಘಟನೆಗಳಿಗೆ ಪೂರಕವಾಗಿ ಕುಟುಂಬ ಪ್ರವಾಸ, ಮಾತೃಪೂಜನಾ ಮಾತೃಭೋಜನಾ, ಸತ್ಸಂಗ, ಸ್ನೇಹಮಿಲನ, ರಾಷ್ಟ್ರೀಯ ಭಾವನೆಗಳ ಉದ್ಧೀಪನೆಗಾಗಿ ಭಾರತಮಾತಾ ಪೂಜೆ, ಯುಗಾದಿ, ಗುರುಪೂರ್ಣಿಮಾ, ಸಂಕ್ರಾಂತಿ, ರಕ್ಷಬಂಧನ, ರಥಸಪ್ತಮಿ ದಿನದಂದು 108 ಸಾಮೂಹಿಕ ಸೂರ್ಯನಮಸ್ಕಾರ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದರು.

Sri Ranganatha Temple ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗರಾಜ ವಹಿಸಿದ್ದರು. ದೀಪ ಬೆಳಗುವ ಮೂಲಕ ಕಾರ್ಯಮವನ್ನು ಮಹೇಶ ಗೋಖಲೆ ಉದ್ಘಾಟಿಸಿ ಮಾತನಾಡಿದರು. ಪೃಥ್ವಿ ಪ್ರಾರ್ಥಿಸಿದರು. ಅಶ್ವಿನಿ ಸ್ವಾಗತಿಸಿದರು. ಗಣಪತಿ ವಂದಿಸಿದರು. ಪತಂಜಲಿ ಯೋಗ ಶಿಕ್ಷಣ ಸಮಿತಿಯ ವೇದಾವತಿ ವಲಯ ಸುರಭಿ ಶಾಖೆಯ ಮುಖ್ಯ ಶಿಕ್ಷಕಿ ವಕೀಲೆ ಮಂಜುಳ ಕಾರ್ಯಕ್ರಮವನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...