RCB Victory Celebrations Turn Tragic: 11 Dead ಆರ್,ಸಿ,ಬಿ ತಂಡ ಐ,ಪಿ,ಎಲ್ ಗೆಲುವಿನ ಸಂಭ್ರಮಾಚರಣೆ ವೇಳೆ೧೧ ಕ್ಕೂ ಹೆಚ್ಚು ಜನರ ಸಾವು – ಪ್ರಚಾರದ ಹಿಂದೆ ಬಿದ್ದ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ ಮತ್ತು ಅವ್ಯವಸ್ಥೆಯೆ ಕಾರಣ, ೧೮ ವರ್ಷದ ಬಳಿಕ ರಾಯಲ್ ಚಾಲೆಂಜರ್ಸ ಬೆಂಗಳೂರು ತಂಡವು ಪ್ರಥಮ ಬಾರಿಗೆ ಗೆಲವು ಸಾಧಿಸಿರುವುದು ಇಡೀ ಕನ್ನಡ ನಾಡು ಸಂಬ್ರಮ ಪಡುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಕಾರ್ಯಕ್ರಮದಲ್ಲಿ ಸರ್ಕಾರದ ಅವ್ಯವಸ್ಥೆಯಿಂದಾಗಿ ಕಾಲ್ತುಳಿಯತದಲ್ಲಿ ಸುಮಾರು ೧೧ ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವು ಹಾಗೂ ಸುಮಾರು ೩೦ ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿರುವುದು ನಿಜಕ್ಕೂ ದುರಂತದ ವಿಷಯ. ಸೂಕ್ತ ವ್ಯವಸ್ಥೆಗಳು ಯೋಜನೆ ಮತ್ತು ಜನಸಂದಣಿಯ ನಿರ್ವಹಣೆ ಮಾಡದ ಇಂತಹ ಹೃದಯವಿದ್ರಾವಕ ಘಟನೆ.
ಕರ್ನಾಟಕ ರಾಜ್ಯ ಸರ್ಕಾರವು ತನ್ನ ಜವಾಬ್ದಾರಿಯನ್ನು ನಿಭಾಯಿಸುದರಲ್ಲಿ ವಿಫಲವಾಗಿದೆ ಸಂಭ್ರಮಾಚರಣೆಗಳು ನಡೆಯುತ್ತದೆ, RCB Victory Celebrations Turn Tragic: 11 Dead ಆದರೆ ರಾಜ್ಯ ಸರ್ಕಾರವು ಸರಿಯಾದ ರೂಪರೇಷ ಹಾಗೂ ತಯಾರಿ ಮಾಡಿಕೊಳ್ಳದೇ ಇರುವುದು ಇಂತಹ ದುರಂತಕ್ಕ ಕಾರಣವಾಗಿದೆ. ತುರ್ತು ಸೇವೆಗಳನ್ನು ನಿಯೋಜಿಸದೆ ಇರುವುದು ಅತ್ಯಂತ ಬೇಜವಾಬ್ದಾರಿ ಈ ಕೆಟ್ಟ ಘಟನೆಯನ್ನು ತಪ್ಪಿಸಬಹುದಿತ್ತು. ಆದರೆ ಸರ್ಕಾರದ ವೈಫಲ್ಯವೇ ಇದಕ್ಕೆ ಕಾರಣ ಮತ್ತು ಹೊಣೆಗಾರಿಕೆಯನ್ನು ಸರ್ಕಾರವೇ ತೆಗೆದುಕೊಳ್ಳಬೇಕಿದೆ, ಸಾವಿಗೀಡಾದ ವ್ಯಕ್ತಿಗಳ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಆಸ್ಪತ್ರೆಯಲ್ಲಿ ದಾಖಲಾದ ವ್ಯಕ್ತಿಗಳ ಆರೋಗ್ಯದ ಕುರಿತು ಸೂಕ್ತ ಚಿಕಿತ್ಸೆಯನ್ನು ಸರ್ಕಾರ ಕೊಡಿಸಬೇಕು ದುರಂತಕ್ಕೆ ಕಾರಣ ಪತ್ತೆಹಚ್ಚಲು ನ್ಯಾಯಂಗ ತನಿಖೆಗೆ ಒಪ್ಪಿಸಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್ ಸಂಚಾಲಕ ಅಭಿಲಾಷ್ ಎನ್ ಹುರುಳಿಕೊಪ್ಪ ಅಗ್ರಹ.
RCB Victory Celebrations Turn Tragic: 11 Dead ಆರ್ ಸಿ ಬಿ ಗೆಲುವು. ಸಂಭ್ರಮಾಚರಣೆ ದುರಂತ. ಸರ್ಕಾರದಿಂದ ಪೂರ್ವ ತಯಾರಿ ವೈಫಲ್ಯ
Date:
