Saturday, May 30, 2026
Saturday, May 30, 2026

Shivaganga Yoga Center ನಗರದ ಅತಿದೊಡ್ಡ ಬಡಾವಣೆಗಳಿಗೆ ₹140 ಕೋಟಿ ಅನುದಾನದಿಂದ ಅಭಿವೃದ್ಧಿ- ವಿಶ್ವಾಸ್

Date:

Shivaganga Yoga Center ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಪ್ರಥಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಸ್.ರುದ್ರೇಗೌಡ ರವರು ಸನ್ಮಾನ ಸ್ವೀಕರಿಸಿದರು.

ಈ ವೇಳೆ ಮಾಜಿ ಕಾರ್ಪೋರೇಟರ್ ಈ.ವಿಶ್ವಾಸ್ ಮಾತನಾಡಿ, ನಗರದಲ್ಲಿ ಅತಿದೊಡ್ಡ ಬಡಾವಣೆ ಸುಮಾರು 140 ಕೋಟಿಗಳ ಅನುದಾನದಿಂದ ಅಭಿವೃಧ್ಧಿ ಕಾರ್ಯಗಳನ್ನು ಮಾಡಿ ಶಿವಮೊಗ್ಗದಲ್ಲಿ ಮಾದರಿ ಬಡಾವಣೆಗಳನ್ನಾಗಿಸಿದ್ದೇವೆ. ಇದಕ್ಕೆ ರುದ್ರೇಗೌಡರು, ಕೆ.ಎಸ್.ಈಶ್ವರಪ್ಪ, ಡಿ.ಎಸ್.ಅರುಣ್, ಶಾಸಕರು ಹಾಗೂ ವಿಧಾನ ಸಭಾ ಸದಸ್ಯರು ಸಹಕಾರ ನೀಡಿದ್ದಾರೆ. ಹಾಗೂ ನಮ್ಮ ಈ ಎಲ್ಲಾ ಅಭಿವೃಧ್ಧಿ ಕಾರ್ಯಗಳಿಗೆ ಸಾರ್ವಜನಿಕರು ಬಹಳ ಉತ್ತಮವಾಗಿ ಸ್ಪಂದಿಸಿದ್ದಾರೆ. ಸಾರ್ವಜನಿಕರ ಸಹಕಾರದಿಂದ ಅಭಿವೃಧ್ಧಿ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರುದ್ರೇಗೌಡ ರವರನ್ನು ಅಭಿನಂದಿಸಲಾಯಿತು.

Shivaganga Yoga Center ಜೆಸಿಐ ವಿವೇಕ ಸದಸ್ಯ, ಯೋಗ ಶಿಕ್ಷಕ ಕಾಟನ್ ಜಗದೀಶ್ ಮಾತನಾಡಿ, ನಮ್ಮ ಸ್ವಾಮಿ ವಿವೇಕಾನಂದ ಪಾರ್ಕ್ ಒಂದು ಆರೋಗ್ಯಧಾಮವಾಗಿದೆ. ಶಿವಶಕ್ತಿ ಯೋಗ ಮಂದಿರದಲ್ಲಿ ಪ್ರತಿನಿತ್ಯ ಯೋಗ, ಪ್ರಾಣಯಾಮ, ಧ್ಯಾನದ ಶಿಬಿರಗಳು ನಡೆಯುತ್ತಲಿವೆ. ಬಡಾವಣೆಯ ಜನರು ಆರೋಗ್ಯವಂತರಾಗಿದ್ದಾರೆ ಹಾಗೂ ನೂರಾರು ಜಾತಿಯ ಸಸ್ಯಗಳು ಇಲ್ಲಿ ಇರುವುದರಿಂದ ಉತ್ತಮವಾದ ಗಾಳಿ ದೊರಕುತ್ತದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಯೋಗಾಚಾರ್ಯ ಸಿ. ವಿ.ರುದ್ರಾರಾಧ್ಯರು, ಜೂಸೆಫ್ ಬಾಲರಾಜ್, ರೋಟರಿ ಜಿ.ವಿಜಯ್ ಕುಮಾರ್, ಚಂದ್ರಶೇಖರಯ್ಯ, ಮೇಘನಾ, ಜೆಸಿಐ ವಿವೇಕ ಅಧ್ಯಕ್ಷರಾದ ಮಂಜುಳಾ ಕೇಶವ್, ನಾಗರಾಜ್, ಪರಿಸರ ನಾಗರಾಜ್, ಪಾರ್ಕ್ ಜೆಸಿ ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಶೈವ ಭಕ್ತಿ ಪರಂಪರೆಯ ಶಿಲ್ಪ: ಯಲವಳ್ಳಿ ಸನಿಹ ಪಾಳು ಶಿವ ದೇಗುಲ ಪತ್ತೆ- ದಿಲೀಪ್ ನಾಡಿಗ್

Klive Special Article ಲಿಂಗ ರೂಪಿ ಮಹಾಶಿವ.(ಯಲವಳ್ಳಿ) ಕೋಹಳ್ಳಿ,‌ಆಯನೂರಿನಲ್ಲಿ ದೊರೆತಿರುವ ಲಿಂಗವು...

B.Y. Raghavendra ಸಿದ್ದಾಪುರ ಏತ ನೀರಾವರಿ ಯೋಜನೆ: ರೈತರ ಹಿತವೇ ನಮಗೆ ಮುಖ್ಯ! : ಬಿ.ವೈ.ರಾಘವೇಂದ್ರ

B.Y. Raghavendra ಸಿದ್ದಾಪುರ ಏತ ನೀರಾವರಿ ಯೋಜನೆಯ ಪ್ರದೇಶಕ್ಕೆ ಖುದ್ದಾಗಿ ಭೇಟಿ...