Sarva Samriddhi Sadhana Center ಹೊಸನಗರದ ರಿಪ್ಪನ್ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ ಕೇಂದ್ರದ ಆವರಣದಲ್ಲಿ ಮೇ 10ರ ಶನಿವಾರ ಮಧ್ಯಾಹ್ನ 4 ಗಂಟೆಗೆ ಮೇ 16ರ ಭಾನುವಾರ ಮಧ್ಯಾಹ್ನ 2ಗಂಟೆವರೆಗೆ ಮಕ್ಕಳಿಗಿಗಾಗಿ ವಿಶೇಷ ಸಂಸ್ಕಾರ ಶಿಬಿರ ಆಯೋಜಿಸಲಾಗಿದೆ.
09 ರಿಂದ 13 ವರ್ಷದೊಳಗಿನ ಮಕ್ಕಳು ಶಿಬಿರದಲ್ಲಿ ಭಾಗವಹಿಸ ಬಹುದಾಗಿದ್ದು, ಇದರಲ್ಲಿ ಧ್ಯಾನ, ಪ್ರಾಣಾಯಾಮ, ಯೋಗಾಸನ, ಯೋಗನಿದ್ರೆ, ಸೂರ್ಯ ನಮಸ್ಕಾರದ ಜೊತೆಗೆ ಉತ್ತಮ ಜೀವನ ಕಟ್ಟಿಕೊಳ್ಳಲು ಬೇಕಾದ ಆತ್ಮ ವಿಶ್ವಾಸ ವೃದ್ಧಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳು ಮತ್ತು ವ್ಯಕ್ತಿತ್ವವನ್ನು ಅರಿತು ಅದನ್ನು ಹೇಗೆ ಹೊರತರಬೇಕು ಎಂಬುದರ ಬಗ್ಗೆ ಶಿಬಿರದಲ್ಲಿ ತರಬೇತಿ ನಡೆಯಲಿದೆ.
Sarva Samriddhi Sadhana Center ಮಕ್ಕಳು ಶಿಬಿರದಲ್ಲಿ ತಂದೆ, ತಾಯಿ, ಗುರು-ಹಿರಿಯರ ಮಹತ್ವ ಶಾಲೆ, ಸ್ನೇಹಿತರು ಮತ್ತು ಸಮಾಜ ದಲ್ಲಿ ಉತ್ತಮ ವ್ಯಕ್ತಿತ್ವ ರೂಡಿಸಿ ಕೊಳ್ಳುವ ಜವಾಬ್ದಾರಿಯುತ ವಿಷಯ ಗಳು ಮತ್ತು ಉತ್ತಮ ಆರೋಗ್ಯ, ದೈಹಿಕವಾಗಿ ಸಧೃಡವಾಗಿರಲು ಈ ಶಿಬಿರ ಸಹಕಾರಿಯಾಗಿದೆ. ಶಿಬಿರದ ಮಧ್ಯ ಪೋಷಕರ ಆಶ್ರಮಕ್ಕೆ ಬರುವಾಗಿಲ್ಲ, ಕೊನೆಯ ದಿನ ಬೆಳಿಗ್ಗೆ 10ಗಂಟೆಗೆ ಪೋಷಕರು ಆಶ್ರಮಕ್ಕೆ ಬರಬೇಕು. ಶಿಬಿರದಲ್ಲಿ ಭಾಗವಹಿಸು ವವರು, ಬಟ್ಟೆ, ಸ್ನಾನದ ವಸ್ತುಗಳು, ಹಾಸುವ, ಹೊದಿಕೆ, 100ಪುಟದ ಲಾಂಗ್ ಅನ್ರೋಲ್ಡ್ ನೋಟ್ ಬುಕ್, 1ಡ್ರಾಯಿಂಗ್ ಪುಸ್ತಕ, ಸ್ಕೆಚ್ಪೆನ್ನುಗಳನ್ನು ತರಬೇಕು.
ಮಕ್ಕಳು ಮೊಬೈಲ್ ತರುವ ಆಗಿಲ್ಲ ಮೊದಲು ಬಂದ 40 ಮಕ್ಕಳಿಗೆ ಮಾತ್ರ ಅವಕಾಶವಿದ್ದು, ಹಣ ಸಂದಾಯಿ ಸಲು ವ್ಯಾಟ್ಸಾಪ್ ಮೊ. 9986052851ರಲ್ಲಿ ಮಾಹಿತಿ ಹಾಗೂ ಹೆಸರು ನೊಂದಾಯಿಸಲು 9449803397ರಲ್ಲಿ ಸಂಪರ್ಕಿಸಿ.
Sarva Samriddhi Sadhana Center ರಿಪ್ಪನ್ ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ ಕೇಂದ್ರದಲ್ಲಿ ಮಕ್ಕಳಿಗಾಗಿ ಸಂಸ್ಕಾರ ಶಿಬಿರ
Date: