Friday, March 20, 2026
Friday, March 20, 2026

Shivaganga Yoga Center ಯೋಗ ಪ್ರಾಣಾಯಾಮ ಧ್ಯಾನ ಆರೋಗ್ಯ‌ ರಕ್ಷಣೆಯಲ್ಲಿ ಅತ್ಯಂತ ಪರಿಣಾಮಕಾರಿ- ಡಾ.ಸಿ.ವಿ. ರುದ್ರಾರಾಧ್ಯ

Date:

Shivaganga Yoga Center ನಮ್ಮ ಒತ್ತಡದ ಬದುಕಿನಲ್ಲಿ ನಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಲು ಉತ್ತಮ ಜೀವನ ಶೈಲಿ ಆರೋಗ್ಯ ಪದ್ಧತಿ ಜೊತೆಗೆ ಯೋಗ ಪ್ರಾಣಾಯಾಮ ಧ್ಯಾನ ಅತ್ಯಂತ ಪರಿಣಾಮಕಾರಿಯಾಗಿ ನಮ್ಮ ಆರೋಗ್ಯವನ್ನು ಸಂರಕ್ಷಿಸುತ್ತದೆ ಎಂದು ಶಿವಗಂಗಾ ಯೋಗ ಕೇಂದ್ರದ ಯೋಗಾಚಾರ್ಯ ಡಾ. ಸಿ. ವಿ. ರುದ್ರಾರಾಧ್ಯ ರವರು ಅಭಿಮತ ವ್ಯಕ್ತಪಡಿಸಿದರು.

ಅವರು ಶಿವಗಂಗಾ ಯೋಗ ಕೇಂದ್ರದ ರಾಘವ ಶಾಖೆಗೆ ಭೇಟಿ ನೀಡಿ ಶಿಬಿರಾರ್ಥಿಗಳನ್ನ ಕುರಿತು ಮಾತನಾಡಿದರು ಯೋಗ ಹಾಗೂ ಪ್ರಾಣಾಯಾಮ ಧ್ಯಾನದಿಂದ ಮನುಷ್ಯನಿಗೆ ದೈಹಿಕ ಮಾನಸಿಕ ಹಾಗೂ ಆಧ್ಯಾತ್ಮಿಕ ಮತ್ತು ಬೌದ್ಧಿಕ ಜೊತೆಗೆ ಮನಃಶಾಂತಿ ಲಭಿಸುತ್ತದೆ ಎಂದು ನುಡಿದರು.

ಪ್ರತಿನಿತ್ಯ ಒಂದು ಗಂಟೆಗಳ ಕಾಲ ನಾವು ಯೋಗವನ್ನು ಮಾಡುವುದರಿಂದ ನೂರಾರು ಲಾಭಗಳಿವೆ. ನಮ್ಮ ದೈಹಿಕ ಚಟುವಟಿಕೆಗಳಲ್ಲಿ ಸದಾ ಉತ್ಸಾಹ ಲವಲವಿಕೆ ಹಾಗೂ ಮುಖದಲ್ಲಿ ಕಾಂತಿ ಹೆಚ್ಚಿಸುತ್ತದೆ. ಪ್ರತಿಯೊಬ್ಬರು ಯೋಗವನ್ನು ಮಾಡುವುದರ ಮುಖಾಂತರ ರೋಗವನ್ನು ಮುಂದೂಡಬಹುದು. ಶಿವಮೊಗ್ಗ ನಗರದಲ್ಲಿ 34 ಕಡೆ ಉಚಿತವಾಗಿ ಯೋಗ ಪ್ರಾಣಯಾಮ ಧ್ಯಾನದ ತರಗತಿಗಳು ನಡೆಯುತ್ತಲಿದ್ದು ವಿಶೇಷವಾಗಿ ಈ ಬೇಸಿಗೆಯಲ್ಲಿ 21 ದಿನಗಳ ಶಿಬಿರಗಳನ್ನು ಸಹ ಆಯೋಜನೆ ಮಾಡುತ್ತಿದ್ದೇವೆ. ಇದರ ಸದುಪಯೋಗವನ್ನು ಸಾರ್ವಜನಿಕರು ಹಾಗೂ ನಮ್ಮ ಶಿಬಿರಾರ್ಥಿಗಳು ಪಡೆದುಕೊಳ್ಳಬೇಕು ಎಂದು ನುಡಿದರು.

ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗಕ್ಕೆ ವಿಶೇಷವಾದ ಸ್ಥಾನಮಾನವಿದೆ ಔಷಧಿಯಿಂದ ಗುಣಪಡಿಸಲಾಗದ ಕಾಯಿಲೆಗಳಿಗೆ ಯೋಗದಿಂದ ಪರಿಹಾರವನ್ನು ಕಂಡುಕೊಳ್ಳಬಹುದು. ಬ್ರಾಹ್ಮಿ ಮುಹೂರ್ತದಲ್ಲಿ ಮಾಡುವ ಈ ಯೋಗ ನಮ್ಮಲ್ಲಿ ಸಕಾರಾತ್ಮಕ ಭಾವನೆಯನ್ನು ಮೂಡಿಸುತ್ತದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಟ್ರಸ್ಟಿಗಳಾದ ಹೆಚ್. ಎಂ. ಚಂದ್ರಶೇಖರಯ್ಯನವರು ಮಾತನಾಡುತ್ತಾ ಯೋಗ ಮಾಡುವುದರಿಂದ ದೇಹದಲ್ಲಿ ರಕ್ತ ಸಂಚಲನೆ ಚೆನ್ನಾಗಿ ಆಗುವುದರಿಂದ ಹೃದಯಘಾತದ ಪ್ರಮಾಣ ಕಡಿಮೆ ಇದರಿಂದ ಖಿನ್ನತೆ ಹಾಗೂ ಬೇಸರ ದೂರವಾಗುತ್ತದೆ ಆದ್ದರಿಂದ ಯೋಗವನ್ನು ಮನೆ ಮನೆಗೆ ಎಲ್ಲಾ ಮನಸ್ಸುಗಳಿಗೆ ತಲುಪಿಸುವಂತಹ ಕೆಲಸ ನಮ್ಮಿಂದ ಆಗಬೇಕು ಎಂದು ಕರೆ ನೀಡಿದರು.

ರಾಘವ ಶಾಖೆಯ ಯೋಗ ಶಿಕ್ಷಕರಾದ ಜಿ.ಎಸ್. ಓಂಕಾರ್ ವರು ಮಾತನಾಡುತ್ತಾ. ನಗರದಲ್ಲಿ ಉಚಿತವಾಗಿ ನಡೆಸುತ್ತಿರುವ ತರಗತಿಗಳಲ್ಲಿ ಯೋಗ ಪ್ರಾಣಯಾಮ ಸಾವಿರಾರು ಜನರು ಪ್ರತಿನಿತ್ಯ ಅಭ್ಯಾಸ ಮಾಡುತ್ತಿರುವುದು ನಮ್ಮ ಸಂಸ್ಥೆಗೆ ಒಂದು ಹೆಮ್ಮೆ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾಗ ವಿಜಯ ಕೃಷ್ಣ, ಸುಜಾತಾ ಮಧುಕೇಶ್ವರ್, ಹರೀಶ್, ಆನಂದ್ ಗಾಯತ್ರಿ ಅಶೋಕ್, ವಿಜಯಕುಮಾರ್, ಜಿ ನರಸೋಜಿ ರಾವ್, ಶಂಕರ್, ಶ್ರೀನಿವಾಸ್, ಸತೀಶ್ ಸುಬ್ರಮಣಿ,ಮಹೇಶ್, ಮುಂತಾದ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Ugadi ನಮ್ಮೂರಿನ ಯುಗಾದಿ.ಒಂದು ನೆನಪು…ಲೇ: ಎನ್.ಎಸ್.ಕುಮಾರ್.ನಿವೃತ್ತ ನಿರ್ದೇಶಕರು.( ಶಿಕ್ಷಣ ಇಲಾಖೆ).ಶಿವಮೊಗ್ಗ

Ugadi ಹಬ್ಬ ಎಂದರೆ ಎಲ್ಲರಿಗೂ ಸಡಗರ ಸಂಭ್ರಮ ಅದರಲ್ಲೂ ನಮ್ಮೂರಿನ ಹಬ್ಬದ...

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...