Wednesday, March 12, 2025
Wednesday, March 12, 2025

Tarunodaya Shivamogga ನಿಸರ್ಗದಾನಂದ ಸವಿಯ ಬೇಕೆಂದರೆ ಚಾರಣ ಹೋಗಲೇ ಬೇಕು- ಜಿ.ವಿಜಯ ಕುಮಾರ್

Date:

Tarunodaya Shivamogga ಜರಿ, ತೊರೆ, ಹಕ್ಕಿ ಪಕ್ಷಿಗಳ ಕಲರವ, ಪ್ರಕೃತಿ ಮಾತೆಯ ಸುಂದರ ನೋಟ ಸವಿಯ ಬೇಕಾದವರು ಚಾರಣಕ್ಕೆ ಹೋಗಲೇಬೇಕು ಎಂದು
ತರುಣೋದಯ ಮಾಜಿ ರಾಜ್ಯ ಘಟಕದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಹೇಳಿದರು.

ತರುಣೋದಯ ಘಟಕ ಆಯೋಜಿಸಿದ ಮತ್ತಿಘಟ್ಟ ಫಾಲ್ಸ್ ಚಾರಣಕ್ಕೆ ಹೊರಟ ಚಾರಣಿಗರಿಗೆ ಶುಭ ಹಾರೈಸಿ ಮಾತನಾಡಿದ ಅವರು, ಈ ರೀತಿ ಚಾರಣಕ್ಕೆ ಮನೆ ಮಂದಿಯೆಲ್ಲ ಹೋದಾಗ ಒಂದು ರೀತಿ ಸಂತೋಷ ಸಿಗುತ್ತದೆ. ಹೊಸ ಸದಸ್ಯರೊಂದಿಗೆ ಸ್ನೇಹ ಬೆಳೆಸಲು ಇಂತಹ ಚಾರಣ ಸಹಕಾರಿ. ದಿನವಿಡೀ ಜೊತೆಗೆ ಇದ್ದು, ಊಟ, ತಿಂಡಿ, ಚಾರಣದ ಸಮಯದಲ್ಲಿ ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಂಡು, ತಮಾಷೆಯಾಗಿ ಸಮಯ ಕಳೆಯುವುದನ್ನು ವರ್ಣಿಸಲು ಸಾಧ್ಯವಿಲ್ಲ ಎಂದರು.

ಛೇರ್ಮನ್ ವಾಗೇಶ್ ಮಾತನಾಡಿ, ನಾವು ಸಂತೋಷ ಪಡಲು ಪ್ರವಾಸ ಹೋಗುವುದು ಸಾಮಾನ್ಯ, ಆದರೆ ಇತರರ ಸಂತೋಷಕ್ಕೆ ಚಾರಣ ಕಳೆದುಕೊಂಡು ಹೋಗುವುದು ಸಾಹಸದ ಕೆಲಸವೆ ಸರಿ. ಬಂದವರನ್ನು ಎಲ್ಲಾ ರೀತಿಯಲ್ಲಿ ಸಮಾಧಾನ ಪಡಿಸುವುದು ಕಷ್ಟಾಸಾಧ್ಯ ಎಂದರು.

Tarunodaya Shivamogga ಕಾರ್ಯದರ್ಶಿ ಸುರೇಶ್ ಕುಮಾರ್ ಮಾತನಾಡಿ, ಹೊಸ ಹೊಸ ಪ್ರದೇಶಗಳನ್ನು ಗುರುತಿಸಿ, ಅಲ್ಲಿಯ ವ್ಯವಸ್ಥೆಗಳನ್ನು ನೋಡಿಕೊಂಡು ಚಾರಣ ಮಾಡುತ್ತೇವೆ. ಚಾರಣಿಗರಿಗೆ ಉತ್ತಮ ಆಹಾರ ಒದಗಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಹಾಗೂ ಎಲ್ಲಾ ರೀತಿಯ ಮುನ್ನೆಚ್ಚರಿಕೆ ತೆಗೆದು ಕೊಳ್ಳುತ್ತೇವೆ. ಇಂದು ಹಲವು ಹೊಸ ಸದಸ್ಯರು ಆಗಮಿಸಿದ್ದು ಚಾರಣದ ನಂತರ ತಮ್ಮ ಅನಿಸಿಹಂಚಿಕೊಳ್ಳಬೇಕಾಗಿ ಕೋರಿದರು.

ಈ ವೇಳೆ ಉಪಾಧ್ಯಕ್ಷೆ ಡಾ. ಪ್ರಕೃತಿ, ನಿರ್ದೇಶಕರಾದ ನಾಗರಾಜ್, ಭಾರತಿ, ಗಿರೀಶ್, ಹರೀಶ್, ರಜನಿ, ಬಸವಪ್ಪ, ವೀರಭದ್ರಪ್ಪ ಸೇರಿದಂತೆ ಎಪ್ಪತ್ತೇಳರಿಂದ ಐದು ವರ್ಷದ ಮಗುವರೆಗೂ ಒಟ್ಟು ಐವತ್ತು ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

State Film Awards 2020 ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಘೋಷಣೆ

State Film Awards 2020ನೇ ಸಾಲಿನ ಆಯ್ಕೆ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ...

Klive Special ಹೆತ್ತವಳಿಗೊಂದು ಕವನ-ನಮನ

Klive Special ದೇವರ ಸ್ವರೂಪ ಗರ್ಭದಲ್ಲಿ ಹೊತ್ತುನವಮಾಸಕ್ಕೆ ಹೆತ್ತುಮೌಲ್ಯಗಳನ್ನೇ ಬಿತ್ತುಸಲಹಿದೆ ನೀಡಿ ಕೈತುತ್ತು ಅಮ್ಮ...

Guarantee Scheme ಸತ್ಯ & ಶುದ್ಧ ಮಾರ್ಗದಿಂದ ರಾಷ್ಟ್ರ ಕಟ್ಟಲು ಸಾಧ್ಯ- ಸಿ.ಎಸ್.ಚಂದ್ರಭೂಪಾಲ್

Guarantee Scheme ಅಂತರಂಗ ಮತ್ತು ಬಹಿರಂಗ ಶುದ್ದಿಯಿಂದ ಹಾಗೂ ಸತ್ಯದ ಮಾರ್ಗದಲ್ಲಿ...