Tuesday, October 1, 2024
Tuesday, October 1, 2024

ಗೆಲುವಿನ ಮೆಟ್ಟಿಲಲ್ಲಿ ಭಾರತ ತಂಡ

Date:

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟೆಸ್ಟ್ ಸರಣಿಯು ನಡೆಯುತ್ತಿದ್ದು ದಕ್ಷಿಣಾ ಆಫ್ರಿಕಾ ತಂಡಕ್ಕೆ ಭಾರತ ತಂಡವು ಎರೆಡನೇ ಇನ್ನಿಂಗ್ಸ್ ನಲ್ಲಿ 305 ರನ್ ಗಳ ಗುರಿ ನೀಡಿದೆ.
ಸೆಂಚುರಿಯನ್ ನಲ್ಲಿರುವ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ನಲ್ಲಿ 4 ನೇ ದಿನದಾಟ ಹೊತ್ತಿಗೆ 50.3 ಓವರ್ ಗಳಲ್ಲಿ ಆಲ್ ಔಟ್ ಆಗಿ 174 ರನ್ ಗಳಿಸಿತು.
ರಾಹುಲ್ 23 ಮತ್ತು ಮಧ್ಯಮ ಕ್ರಮಾಂಕದಲ್ಲಿ ರಿಷಬ್ ಪಂತ್ 34 ಎಸೆತಗಳಲ್ಲಿ 34 ರನ್ ಗಳಿಸಿ ಇವರಿಬ್ಬರೇ ಹೆಚ್ಚು ರನ್ ಗಳಿಸಿದ ಬ್ಯಾಟರ್ ಗಳಾದರು.ವಿರಾಟ್ ಬಳಗವು ಮೊದಲ ಇನ್ನಿಂಗ್ಸ್ ನಲ್ಲಿ 130 ರನ್ ಗಳ ಮುನ್ನಡೆ ಪಡೆದಿತ್ತು.ಆದ್ದರಿಂದ,300 ಕ್ಕು ಹೆಚ್ಚು ರನ್ ಗಳ ಗುರಿಯೊಡ್ಡಲು ಸಾಧ್ಯವಾಯಿತು.
ಆಫ್ರಿಕಾ ತಂಡದ ಬೌಲರ್ ಗಳ ವೇಗಿಗಳ ಸ್ವರ್ಗದಂತಿರುವ ಪಿಚ್ ನಲ್ಲಿ ಭಾರತದ ಬ್ಯಾಟರ್ ಗಳು ರನ್ ಗಳಿಸಲು ಮಾರ್ಕೊ ಜೀಸನ್ (55 ಕ್ಕೆ 4) ಅವರ ಮೊನಚಾದ ದಾಳಿಯ ಮುಂದೆ ಭಾರತದ ಬ್ಯಾಟರ್ ಗಳು ರನ್ ಗಳಿಸಲು ಬಹಳಷ್ಟು ಶ್ರಮಪಡಬೇಕಾಯಿತು.ಇದರಿಂದಾಗಿ,ತಂಡವು ಎರೆಡನೇ ಇನ್ನಿಂಗ್ಸ್ ನಲ್ಲಿ 50.3 ಓವರ್ ಗಳಲ್ಲಿ 174 ರನ್ ಗಳನ್ನು ಗಳಿಸಿತು.
ಆದರೆ,ಬೌಲರ್ ಗಳಿಗೆ ನೆರವು ನೀಡುತ್ತಿರುವ ಪಿಚ್ ನಲ್ಲಿ ಭಾರತ ತಂಡವು 6 ವಿಕೆಟ್ ಕಿತ್ತು ಬುಟ್ಟಿಗೆ ಹಾಕಿಕೊಂಡರೆ ವಿಜಯದ ಧ್ವಜ ಹಾರಿಸಬಹುದು.ಜಸ್ ಪ್ರೀತ್ ಬುಮ್ರಾ (22 ಕ್ಕೆ 2) , ಮೊಹಮ್ಮದ್ ಶಮಿ (29 ಕ್ಕೆ 1) ಮತ್ತು ಮೊಹಮ್ಮದ್ ಸಿರಾಜ್ (25 ಕ್ಕೆ 1) ಉತ್ತಮ ಬೌಲಿಂಗ್ ಮಾಡಿರುವುದರಿಂದ ಪ್ರವಾಸಿ ತಂಡದ ಆತ್ಮವಿಶ್ವಾಸ ಇಮ್ಮೆಟ್ಟಿಸಿದೆ.
ಪಂದ್ಯದ ಕೊನೆಯ ದಿನವಾದ ಗುರುವಾರ 305 ರನ್ ಗಳ ಗುರಿ ಬೆನ್ನತ್ತಿರುವ ಅತೀಥೆಯ ತಂಡವು 40.5 ಓವರ್ ಗಳಲ್ಲಿ 4 ವಿಕೆಟ್ ಗಳಿಗೆ 94 ರನ್ ಗಳಿಸಿದೆ.ಕ್ರೀಸ್ ನಲ್ಲಿರುವ ನಾಯಕ ಡೀನ್ ಎಲ್ಲರ್ 122 ಎಸೆತಗಳಲ್ಲಿ 52 ಹಾಗೂ ಬರಬೇಕಿರುವ ತೆಂಬಾ ಬವುಮಾ ಮತ್ತು ಕ್ವಿಂಟನ್ ಡಿ ಕಾಕ್ ಇವರ ಮೇಲೆ ಬ್ಯಾಟಿಂಗ್ ಶಕ್ತಿ ನಿಂತಿದೆ.
ಭಾರತದ ಬೌಲರ್ ಗಳ ಚಾಣಾಕ್ಷ ಬೌಲಿಂಗ್ ಮುಂದೆ ಒಂದು ಕಡೆ ವಿಕೆಟ್ ಗಳು ಪತನವಾಗುತ್ತಿದ್ದರೂ. ನಾಯಕ ಡೀನ್ ಎಲ್ಲರ್ ತಾಳ್ಮೆಯಿಂದ ಆಟವಾಡಿ ಅರ್ಧಶತಕ ಬಾರಿಸಿ ಕ್ರೀಸ್ ನಲ್ಲಿ ಉಳಿದರು.
ಡೀನ್ ಜೊತೆಗೆ ಉತ್ತಮ ಜೊತೆಯಾಟ ಕುದುರಿಸಿದ್ದ ‘ರಸಿ ವ್ಯಾನ್ ಡರ್ ಡಸೆ, 37 ನೇ ಓವರ್ ನಲ್ಲಿ ಬುಮ್ರಾ ಇನ್ ಸ್ಟಿಂಗರ್ ಎಸೆತವನ್ನು ಅಂದಾಜಿಸುವಲ್ಲಿ ತಪ್ಪಿದರರು.ಆಘಾತ ಅನುಭವಿಸಿದರು.ಇನ್ನಿಂಗ್ಸ್ ನ ಕೊನೆಯ ಓವರ್ ನಲ್ಲಿ ಬುಮ್ರಾ ಹಾಕಿದ ಯಾರ್ಕರ್ ಗೆ ರಾತ್ರಿಕಾವಲುಗಾರ ಕೇಶವ್ ಮಹರಾಜ್ ಅವರು ಶರಣಾದರು.
ಇನ್ನಿಂಗ್ಸ್ ನ ಎರೆಡನೇ ಓವರ್ ನಲ್ಲಿಯೇ ಮೊಹಮ್ಮದ್ ಶಮಿಯ ಸ್ಟಿಂಗ್ ಎಸೆತಕ್ಕೆ ಏಡನ್ ಮಾರ್ಕರಮ್ ಕ್ಲೀನ್ ಬೌಲ್ಡ್ ಆದರು.15 ನೇ ಓವರ್ ನಲ್ಲಿ ಕೀಗನ್ ಪೀಟರ್ಸನ್ ಅವರು ಸಿರಾಜ್ ಎಸೆತವನ್ನು ಕೆಣಕಿ ರಿಷಬ್ ಪಂತ್ ಗೆ ಕ್ಯಾಚ್ ಕೊಟ್ಟರು.
ಇವೆಲ್ಲದರ ನಡುವೆಯೂ ಡೀನ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...