Saturday, December 6, 2025
Saturday, December 6, 2025

Forest Department ಆನೆ ದಾಳಿಯಿಂದ ಆತಂಕದಲ್ಲಿ ಸಿರಿಗೆರೆ ಭಾಗದ ರೈತರು, ಅರಣ್ಯ ಇಲಾಖೆ ಮೌನ?

Date:

Forest Department ಇತ್ತೀಚೆಗೆ ಆನೆಗಳ ಗುಂಪು ದಾಳಿಯಿಂದಾಗಿ ಸಿರಿಗೆರೆ ಆಯನೂರು ವಿಭಾಗದ ರೈತರು ಕಂಗೆಟ್ಟಿದ್ದಾರೆ.
ಇವತ್ತು‌ ಬೆಳಿಗ್ಗೆ ಆರು ಗಂಟೆಗೇ ಸ್ಷಷ್ಟ‌ ಹಗಲಿನಲ್ಲಿ
ಆನೆಗುಂಪು ರಾಜಾರೋಷವಾಗಿ‌‌ ಸಿರಿಗೆರೆಯ ಹೊಲಗದ್ದೆಗಳಲ್ಲಿ‌ ಕಾಲ್ನಡಿಗೆ ಜಾಥಾ ಬಂದಿವೆ.
ಸಿರಿಗೆರೆಯ ಕೃಷಿಕರು
ಜೀವಭಯ‌ ಪಡುವಂತಾಗಿದೆ. ಇದಕ್ಕೆ ಪೂರ್ಣವಿರಾಮವೇ ಇಲ್ಲವೆ? ಎಂದು ಕಣ್ಣುಕಣ್ಣು ಬಿಡುತ್ತಿದ್ದಾರೆ.

ಪದೇಪದೇ ಆನೆಗಳು ಬಾಳೆ ,ಅಡಿಕೆ ತೋಟಗಳಿಗೆ, ಮೆಕ್ಕೆ ಜೋಳದ ಹೊಲಗಳಿಗೆ ದಾಳಿಯಿಟ್ಟಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಹಾನಿಗೆ ಕಾರಣವಾಗಿವೆ.
ದಾಳಿ ಆದಾಗಲೆಲ್ಲ ಒಂದಲ್ಲ ಒಂದು‌ಕಾರಣ ಹೇಳಿ ರೈತರನ್ನ ಸುಮ್ಮನಾಗಿಸುವ ಕೆಲಸ ಅರಣ್ಯ ಇಲಾಖೆ ಮಾಡುತ್ತಿದೆ.

“ವನ್ಯ ಪ್ರಾಣಿಗಳನ್ನ ರಕ್ಷಿಸಿ” ಎಂಬ ಘೋಷಣೆಯನ್ನ ಮಕ್ಕಳಿಂದಾಗಿಯಾಗಿ ದೊಡ್ಡವತ ತನಕ ಬಾಯಿಪಾಠವಾಗಿದೆ.
ಈಗ ಗ್ರಾಮಸ್ಥರು
” ವನ್ಯ ಪ್ರಾಣಿಗಳಿಂದ ರೈತರ ಬೆಳೆ ರಕ್ಷಿಸಿ” ಎಂಬ ಘೋಷಣೆಯನ್ನ ಅರಣ್ಯ ಇಲಾಖೆಗ ರವಾನಿಸ ಬೇಕಿದೆ.
ಇಲ್ಲಿಯವರೆಗೆ ಆನೆದಾಳಿಗೆ ಬೆಳೆಗಳಷ್ಟೇ ಅಲ್ಲ ಗ್ರಾಮಸ್ಥರ ಜೀವ ಬಲಿ‌ಯಾಗಿದೆ.
ಕೇವಲ ಪರಿಹಾರ ನೀಡಿ ಕೈತೊಳೆದುಕೊಂಡರೆ
ಆನೆದಾಳಿ ಸಮಸ್ಯೆ
ಬಗೆಹರಿಯದು. Forest Department ಈ ಸತ್ಯ ಅರಣ್ಯ ಇಲಾಖೆಯವರಿಗೂ ತಿಳಿದಿದೆ
ಈಗ ರೈತ ಸಮುದಾಯ‌ಎಲ್ಲ ರೀತಿಯ ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆದಿದೆ.
ಆದರೂ ಆನೆ ಗುಂಪನ್ನ ನಿಯಂತ್ರಿಸಿಲ್ಲ.
ಈಗ ಉಳಿದಿರುವುದು ಒಂದೇ ಮಾರ್ಗ.
ನಮ್ಮ ಜಿಲ್ಲಾ ಉಸ್ತುವಾರಿ ಸಚಿವ‌
ಮಧು ಬಂಗಾರಪ್ಪ ಅವರು
ತಕ್ಷಣ ಮಧ್ಯ ಪ್ತವೇಶಿಸಿ ರೈತರ ಸಮಸ್ಯೆಗೆ ಕೂಡಲೇ
ಸೂಕ್ತ ಪರಿಹಾರ ಕಂಡು ಹಿಡಿಯ ಬೇಕಿದೆ.
ಇಲ್ಲದದ್ದರೆ ಇದು ಶಿವಮೊಗ್ಗ ಪ್ರದೇಶದ ಭೀಕರ ,ಗಂಭೀರ ಸಮಸ್ಯೆಯಾಗಿ ತಲೆದೋರುವುದರಲ್ಲಿ‌ಸಂದೇಹವಿಲ್ಲ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...