Wednesday, May 27, 2026
Wednesday, May 27, 2026

New Year ಹೊಸ ಇಸವಿಯ ಹೊಸ್ತಿಲಲ್ಲಿ… ಕವಿ. ಸ್ವಾಮಿ , ಸಾಗರ

Date:

New Year ಸೋಲು..

ಅಂತು ಕಳೆದೆವು ಹಲವು ದಿನಗಳು
ಮತ್ತೇ ಬರುವುದೇ ಆ ನೆನಪುಗಳು |
ಸೋಲು ಗೆಲುವಿನ ಪಯಣಗಳ
ಮರೆಯಲಾರದ ಕ್ಷಣಗಳ ||

ಯೋಚಿಸುವ ಮುನ್ನ ಆಲೋಚಿಸಿದೆ
ಗೆಲುವಿಗಿಂತ ಸೋತದ್ದೆ ಹೆಚ್ಚೆಂದು |
ಇಲ್ಲಿ ನನಗಾರು ಸೋಲಿಸಿಲ್ಲ..!
ನನಗೆ ನಾನೇ ಸೋತಿದ್ದು ||

ಸೋಮಾರಿತನದ ನೆಪದಲ್ಲಿ
ದ್ವೇಷದ ಪರದಿಯಲ್ಲಿ |
ಜಾತಿ-ಧರ್ಮಗಳ ಮನದಲ್ಲಿ
ಹೊರಬಾರದೆ ಸೋತಿದ್ದೇನೆ ||

ಅಧಿಕಾರದ ಅಹಮಿನಲಿ
ಸಿರಿತನದ ಸೋಗಿನಲಿ |
ಬೇವರ ಹರಿಸದ ಬದುಕನು
ಕಾಣದಂತೆ ನಾನೆ ಸೋತಿರುವೆ ||

ಅದೆಷ್ಟು ದಿನಗಳ ಕಳೆದೆವು
ನೆನಪಿಗೆ ಬಾರದ ಕ್ಷಣಗಳ |
ಮರೆತು ಬಿಡುವ ಮುನ್ನ
ನನ್ನ ಸೋಲನ್ನು ನಾನೆ ಸೋಲಿಸಬೇಕು ||

New Year ಹೊಸತನದಿ ಹೊಸಬಗೆಯ
ನಿತ್ಯ ಹರಿಯಲಿ ಹೃದಯದಿ |
ಕಣ ಕಣದಲ್ಲೂ ವಿಶ್ವಪಥದಿ ಸಾಗುವ
ಮನುಜ ಪಥದಿ ಗೆಲುವನು ||

ವಿ.ಟಿ.ಸ್ವಾಮಿ,ಕವಿತೋಟ
ಸಾಗರ
ಮೊ:9880871716

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akashavani Bhadravati ಜೂನ್ 2. ಭದ್ರಾವತಿ ಆಕಾಶವಾಣಿಯಿಂದ” ಬಾನುಲಿ ಬರಹ ” ವಿಶೇಷ ಕಾರ್ಯಾಗಾರ

Akashavani Bhadravati ಭಾರತದ ಸಾರ್ವಜನಿಕ ಪ್ರಸಾರ ಸೇವೆ ಸಂಸ್ಥೆಯಾದ ಪ್ರಸಾರ ಭಾರತಿಯ...

JCI Institute ಯುವ ನಾಯಕತ್ವ ಬೆಳವಣಿಗೆಯಲ್ಲಿ ಜೆಸಿಐ ಸಂಸ್ಥೆ ಸದಾ ಮುಂಚೂಣಿಯಲ್ಲಿದೆ- ವಿಜಯಲಕ್ಷ್ಮಿ ಕಡಂಬ.

JCI Institute ಸ್ಥಳೀಯ ಸಮಾಜಮುಖಿ ಕಾರ್ಯಗಳಲ್ಲಿ ಹಾಗೂ ಯುವ ನಾಯಕತ್ವದ ಬೆಳವಣಿಗೆಯಲ್ಲಿ...

B.Y. Vijayendra ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟ. ಅವಧಿಗೆ ಮುನ್ನವೇ ಚುನಾವಣೆ- ಬಿ.ವೈ.ವಿಜಯೇಂದ್ರ

B.Y. Vijayendra ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ದೆಹಲಿಯಲ್ಲಿ...