Thursday, September 17, 2026
Thursday, September 17, 2026

New Year ಹೊಸ ಇಸವಿಯ ಹೊಸ್ತಿಲಲ್ಲಿ… ಕವಿ. ಸ್ವಾಮಿ , ಸಾಗರ

Date:

New Year ಸೋಲು..

ಅಂತು ಕಳೆದೆವು ಹಲವು ದಿನಗಳು
ಮತ್ತೇ ಬರುವುದೇ ಆ ನೆನಪುಗಳು |
ಸೋಲು ಗೆಲುವಿನ ಪಯಣಗಳ
ಮರೆಯಲಾರದ ಕ್ಷಣಗಳ ||

ಯೋಚಿಸುವ ಮುನ್ನ ಆಲೋಚಿಸಿದೆ
ಗೆಲುವಿಗಿಂತ ಸೋತದ್ದೆ ಹೆಚ್ಚೆಂದು |
ಇಲ್ಲಿ ನನಗಾರು ಸೋಲಿಸಿಲ್ಲ..!
ನನಗೆ ನಾನೇ ಸೋತಿದ್ದು ||

ಸೋಮಾರಿತನದ ನೆಪದಲ್ಲಿ
ದ್ವೇಷದ ಪರದಿಯಲ್ಲಿ |
ಜಾತಿ-ಧರ್ಮಗಳ ಮನದಲ್ಲಿ
ಹೊರಬಾರದೆ ಸೋತಿದ್ದೇನೆ ||

ಅಧಿಕಾರದ ಅಹಮಿನಲಿ
ಸಿರಿತನದ ಸೋಗಿನಲಿ |
ಬೇವರ ಹರಿಸದ ಬದುಕನು
ಕಾಣದಂತೆ ನಾನೆ ಸೋತಿರುವೆ ||

ಅದೆಷ್ಟು ದಿನಗಳ ಕಳೆದೆವು
ನೆನಪಿಗೆ ಬಾರದ ಕ್ಷಣಗಳ |
ಮರೆತು ಬಿಡುವ ಮುನ್ನ
ನನ್ನ ಸೋಲನ್ನು ನಾನೆ ಸೋಲಿಸಬೇಕು ||

New Year ಹೊಸತನದಿ ಹೊಸಬಗೆಯ
ನಿತ್ಯ ಹರಿಯಲಿ ಹೃದಯದಿ |
ಕಣ ಕಣದಲ್ಲೂ ವಿಶ್ವಪಥದಿ ಸಾಗುವ
ಮನುಜ ಪಥದಿ ಗೆಲುವನು ||

ವಿ.ಟಿ.ಸ್ವಾಮಿ,ಕವಿತೋಟ
ಸಾಗರ
ಮೊ:9880871716

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...