Sunday, December 7, 2025
Sunday, December 7, 2025

Kote Gangur Government Junior Primary School ಮಕ್ಕಳು ವಿದ್ಯೆಯಲ್ಲಿ ಪರಿಪೂರ್ಣರಾಗ ಬೇಕಾದರೆ ಪೂರಕ ವಾತಾವರಣ ಇರಬೇಕು-ದಿವ್ಯಪ್ರೇಮ್

Date:

Kote Gangur Government Junior Primary School ನಾವು ಮಾಡುವ ದಾನ ಯಾವ ಪ್ರಮಾಣದ್ದೇ ಇರಬಹುದು ಅದು ಸರಿಯಾದ ಫಲಾನುಭವಿಗಳಿಗೆ ತಲುಪಿದಾಗ ಆ ದಾನದಿಂದ ಸಿಗುವ ತೃಪ್ತಿಯೇ ಬೇರೆ ಅದರಲ್ಲೂ ಶೈಕ್ಷಣಿಕ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳಿಗೆ ನಾವು ಮಾಡುವ ದಾನ ಸೇವೆ ಆ ಮಕ್ಕಳಲ್ಲಿ ಇರುವ ಪ್ರತಿಭೆ ಅನಾವರಣಗೊಳ್ಳಲು ಅವಕಾಶ ಕಲ್ಪಿಸಿ ಕೊಟ್ಟಂತಾಗುತ್ತದೆ ಎಂದು ಇನ್ನರ್ವಿಲ್ ಶಿವಮೊಗ್ಗ ಪೂರ್ವ ಸಂಸ್ಥೆಯ ನಿರ್ದೇಶಕರಾದ ದಿವ್ಯ ಪ್ರೇಮ್ ಅವರು ಅಭಿಮತ ವ್ಯಕ್ತಪಡಿಸಿದರು.

ಅವರು ಕೋಟೆ ಗಂಗೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನಲಿಕಲಿ ಟೇಬಲ್ ಹಾಗೂ ಚೇರ್ ಗಳನ್ನು. ವಿತರಣೆ ಮಾಡಿ ಮಾತನಾಡಿದರು ಚಳಿಗಾಲ ಹಾಗೂ ಮಳೆಗಾಲದಲ್ಲಿ ನೆಲದ ಮೇಲೆ ಕುಂತು ಅಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಚೇರ್ ಮೇಲೆ ಕೂತು ಕಲಿಯುವಾಗ ಅವರ ಮುಖದಲ್ಲಿ ಮಂದಹಾಸ ನೋಡಿ ನಮ್ಮ ಸೇವೆ ಸಾರ್ಥಕವಾಯಿತು. ಎಂದು ನುಡಿದರು ಮಕ್ಕಳು ವಿದ್ಯಾಭ್ಯಾಸದಲ್ಲಿ ಪರಿಪೂರ್ಣತೆ ಹೊಂದಬೇಕಾದರೆ ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣ ಬೇಕು ಈ ನಿಟ್ಟಿನಲ್ಲಿ ಸರ್ಕಾರದ ಎಷ್ಟೇ ಸೌಲಭ್ಯಗಳು ಇದ್ದರೂ ಸಂಘ ಸಂಸ್ಥೆಗಳ ನೆರವು ತುಂಬಾ ಅಗತ್ಯ ಎಂದು ನುಡಿದರು.

Kote Gangur Government Junior Primary School ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇನ್ನರ್ ವೀಲ್ ಶಿವಮೊಗ್ಗಪೂರ್ವ ಸಂಸ್ಥೆಯ ಅಧ್ಯಕ್ಷರಾದ ವಾಗ್ದೇವಿ ಬಸವರಾಜ ಅವರು ವಹಿಸಿ ಈಗಾಗಲೇ ನಮ್ಮ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಬೆಂಚು.ಡೆಸ್ಕೂ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಅಗತ್ಯ ಸಾಮಗ್ರಿಗಳನ್ನು ಒದಗಿಸುವುದರ ಜೊತೆಗೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದರ ಮುಖಾಂತರ ನಮ್ಮ ಇನ್ನರ್ ವೀಲ್ ಸದಸ್ಯರು ಮಾನವೀಯತೆಯನ್ನು ಮೆರೆದಿದ್ದಾರೆ ಜೊತೆಗೆ ಅಂಗವಿಕಲರಿಗೆ ನೆರವು ನೀಡುವುದರ ಮುಖಾಂತರ.ವೀಲ್ ಚೇರುಗಳನ್ನು ನೀಡಿ ಅವರಿಗೆ ಬದುಕನ್ನು ಕಟ್ಟಿ ಕೊಟ್ಟಿದ್ದಾರೆ ಈ ನಿಟ್ಟಿನಲ್ಲಿ. ಈ ಶಾಲೆಯನ್ನು ಪರಿಶೀಲಿಸಿ ಈ ಅಗತ್ಯ ವಸ್ತುಗಳನ್ನು ನಮ್ಮ ಸದಸ್ಯ ದಿವ್ಯ ಪ್ರೇಮ್. ಅವರು ದೇಣಿಗೆ ನೀಡಿದ್ದಾರೆಂದು ಅವರನ್ನು ಪ್ರಶಂಸಿಸಿದರು.. ಇನ್ನರ್ ವೀಲ್ ಕ್ಲಬ್ಬಿನ ಮಾಜಿ ಅಧ್ಯಕ್ಷರಾದ ಶ್ರೀಮತಿ ಬಿಂದು ವಿಜಯ ಕುಮಾರ್ ಮಾತನಾಡುತ್ತಾ ಗ್ರಾಮೀಣ ಪ್ರದೇಶದ ಮಕ್ಕಳಲ್ಲೂ ಸಾಕಷ್ಟು ಪ್ರತಿಭೆ ಇರುತ್ತೆ ಅವರಿಗೆ ಸೂಕ್ತವಾದ ವ್ಯವಸ್ಥೆ ಮಾಡಿದರೆ ಅವರು ಸದೃಢರಾಗಿ ಒಳ್ಳೆಯ ವ್ಯಕ್ತಿಗಳಾಗಿ ನಿರ್ಮಾಣಗೊಳ್ಳುತ್ತಾರೆ ಎಂದು ನುಡಿದರು.

ಮುಖ್ಯೋಪಾಧ್ಯಾಯ ಮಂಜಪ್ಪನವರು ಇನ್ನರ್ ವೀಲ್ ಸೇವೆಯನ್ನು ಸ್ಮರಿಸಿ. ದಾನಿಗಳನ್ನು ಅಭಿನಂದಿಸಿದರು ವೇದಿಕೆಯಲ್ಲಿ.. ಇನ್ನರ್ ವೀಲ್ ಶಿವಮೊಗ್ಗ ಪೂರ್ವದ ಕಾರ್ಯದರ್ಶಿ ಲತಾ ಸೋಮಶೇಖರ್
ಮಾಜಿ ಅಧ್ಯಕ್ಷ ರಾಧಾ ಜಯಂತಿ ವಾಲಿ ಶಿಕ್ಷಕರಾದ ತೇಜಸ್ವಿನಿ. ಮಂಜುನಾಥ್ ಯು ಬಿ
ಹಾಗೂ ಇನ್ನರ್ ವೀಲ್ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...