Wednesday, August 12, 2026
Wednesday, August 12, 2026

Shree Veeranjaneya Educatioal & Charitable Trust ಬಂಗಾರಮಕ್ಕಿಯಲ್ಲಿ ಡಿಸೆಂಬರ್ 14 & 15 ರಂದು ಶ್ರೀದತ್ತ ಜಯಂತ್ಯುತ್ಸವ

Date:

Shree Veeranjaneya Educatioal & Charitable Trust ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ (ರಿ.) ಶ್ರೀ ಕ್ಷೇತ್ರ ಬಂಗಾರಮಕ್ಕಿ ಇದರ ಆಡಳಿತಕ್ಕೊಳಪಟ್ಟಿರುವ ಹೊನ್ನಾವರ ದುರ್ಗಾಕೇರಿಯ ಶ್ರೀ ದತ್ತ ಮಂದಿರದಲ್ಲಿ ಧರ್ಮಾಧಿಕಾರಿಗಳಾದ ಶ್ರೀ ಮಾರುತಿ ಗುರೂಜಿಯವರ ನೇತೃತ್ವದಲ್ಲಿ ಡಿ. 14ಮತ್ತು 15 ರಂದು ಶ್ರೀ ದತ್ತ ಜಯಂತ್ಯುತ್ಸವ ಆಯೋಜಿಸಲಾಗಿದೆ.

ಈ ಸಂದರ್ಭದಲ್ಲಿ ಡಿ. 14ರಂದು ಸಂಜೆ 06:30ಕ್ಕೆ ತೊಟ್ಟಿಲೋತ್ಸವ ಹಾಗೂ ಈ ಎರಡೂ ದಿನಗಳಂದು ಮಧ್ಯಾಹ್ನ 01:00 ಗಂಟೆಯಿಂದ ಮಹಾ ಪ್ರಸಾದ ವಿನಿಯೋಗ ನಡೆಯಲಿದೆ.

ಏ. 1,2 ಮಹಾ ಕುಂಭ
ಶ್ರೀ ಕ್ಷೇತ್ರದಲ್ಲಿ ಏ. 1ರಿಂದ 12 ರವರೆಗೆ ಶ್ರೀ ವೀರಾಂಜನೇಯ ದೇವರ ಜೀರ್ಣಾಷ್ಟಬಂಧ ಪ್ರತಿಷ್ಠೆ, ನೂತನ ಶಿಖರ ಸ್ವರ್ಣ ಕಳಶ,
ಸುಬ್ರಹ್ಮಣ್ಯ ನಾಗಬನ ಪೂಜೆ, ಚೌಡೇಶ್ವರಿ ಅಮ್ಮನವರು ಹಾಗೂ ಪರಿವಾರ ದೇವತೆಗಳ ಪ್ರತಿಷ್ಟಾಪನೆ, ಶ್ರೀ ಮಾರುತಿ ಗುರೂಜಿಯವರ ಪೀಠಾರೋಹಣ ರಜತ ಮಹೋತ್ಸವ, ಸಂಸ್ಕೃತಿ ಕುಂಭ – ಮಲೆನಾಡು ಉತ್ಸವ ಹಾಗೂ ಶ್ರೀ ದೇವರ ಬ್ರಹ್ಮರಥೋತ್ಸವ ನಡೆಯಲಿದೆ.

  • Shree Veeranjaneya Educatioal & Charitable Trust ಪೂರ್ವಭಾವೀ ಸಭೆ
    ಈ ಎಲ್ಲಾ ಕಾರ್ಯಕ್ರಮಗಳ ಆಯೋಜನೆಯ ಕುರಿತಾಗಿ ಸಮಾಲೋಚಿಸಲು ಡಿ. 16 ರಿಂದ 17 ರವರೆಗೆ ನಿತ್ಯ ಬೆಳಿಗ್ಗೆ 9 :00 ರಿಂದ 11:30 ರ ವರೆಗೆ ಹಾಗೂ ಮಧ್ಯಾಹ್ನ 2:00 ರಿಂದ 4:00ರ ವರೆಗೆ ಹಾಗೂ ಡಿ. 20 ರಿಂದ 23 ಮಧ್ಯಾಹ್ನ 03:00 ರಿಂದ 5:00ರ ವರೆಗೆ ಹಾಗೂ ರಾತ್ರಿ 08:30 ರಿಂದ 10:00 ರ ವರೆಗೆ) ಭಕ್ತಾದಿಗಳ ಸಭೆ ಕರೆಯಲಾಗಿದೆ.

ಭಕ್ತಾದಿಗಳು ವೈಯಕ್ತಿಕವಾಗಿ ಅಥವಾ ತಮ್ಮ ಗ್ರಾಮ,ತಾಲೂಕು, ಜಿಲ್ಲೆಯ ತಂಡದೊಂದಿಗೆ ಆಗಮಿಸಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡುವುದರ ಮೂಲಕ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಕೈ ಜೋಡಿಸಿ, ಸಹಕರಿಸಬೇಕಾಗಿ ಶ್ರೀ ಕ್ಷೇತ್ರದ ಆಡಳಿತಾಧಿಕಾರಿಗಳು ಕೋರಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...