Friday, October 4, 2024
Friday, October 4, 2024

Klive Special Article ನವರಾತ್ರಿ ಎರಡನೇ ದಿನ.ದೇವಿಯ ಶ್ರೀಬ್ರಹ್ಮಚಾರಿಣಿ ರೂಪದಲ್ಲಿ ಆರಾಧನೆ. ಲೇ: ಎನ್.ಜಯಭೀಮ ಜೊಯ್ಸ್.ಶಿವಮೊಗ್ಗ.

Date:

Klive Special Article “ದಧಾನಾಂ ಕರಪದ್ಮಾಭ್ಯಾಂ
ಅಕ್ಷಮಾಲಾ ಕಮಂಡಲೂ/
ದೇವಿ ಪ್ರಸೀದತು ಮಯಿ
ಬ್ರಹ್ಮಚಾರಿಣ್ಯನುತ್ತಮಾ//

ಮೊದಲನೆಯ ದಿನ ದೇವಿಯ ಶೈಲಪುತ್ರಿರೂಪದಿಂದ ಪೂಜಿಸಲ್ಪಡುತ್ತಾಳೆ.ಇಂದು ನವರಾತ್ರಿಯ ಎರಡನೇ ದಿವಸ.
ಎರಡನೆಯ ದಿನ ದೇವಿಯನ್ನು ಬ್ರಹ್ಮಚಾರಿಣಿ
ರೂಪದಲ್ಲಿ ಪೂಜಿಸಲಾಗುತ್ತದೆ.
ಜಗನ್ಮಾತೆಯನ್ನು ಬ್ರಾಹ್ಮೀ ಸ್ವರೂಪದಲ್ಲಿ
ನೋಡುವಬಗೆ,ಕಮಂಡಲುಧಾರಿಣಿ,ಅಕ್ಷಮಾಲೆ.ಸಪ್ತಮಾತೃಕೆಯರಲ್ಲಿ ಬ್ರಾಹ್ಮಿಯೂ ಒಬ್ಬಳೆಂದು ಗುರುತಿಸಲ್ಪಟ್ಟಿದ್ದಾಳೆ.ಬ್ರಹ್ಮಚಾರಿಣಿ ಎಂದರೆ ಸಂತೋಷ ಮತ್ತುಶಾಂತ ಶಕ್ತಿಯನ್ನು ಹೊಂದಿರುವ ರೂಪ.ಮೋಕ್ಷವನ್ನು ಬಯಸಿಅಥವಾ ಕಾರ್ಯಗಳ
ವಿಮೋಚನೆಗೆ ಬಯಸಿ ದೇವಿಯ ಈ ಅವತಾರಕ್ಕೆ ಪೂಜೆ ಸಲ್ಲಿಸಿ ಆರಾಧಿಸಿದರೆದೇವಿ ಅನುಗ್ರಹ ಮಾಡುವಳು.
Klive Special Article ಪ್ರಜಾಪತಿ ದಕ್ಷನಿಂದ ತನ್ನ ಪತಿ ಶಿವನು ಅವಮಾನಿತಗೊಂಡಾಗ,ಸತಿಯಾಗಿ ಮರುಜನ್ಮ ಪಡೆದು
ಮತ್ತೆ ಶಿವನನ್ನೇ ವರಿಸಲು ಬ್ರಹ್ಮಚಾರಿಣಿಯಾಗಿ ಅವತರಿಸಿದ ರೂಪವೇ ಬ್ರಹ್ಮಚಾರಿಣಿ ದೇವಿ.
ಶಿವನನ್ನು ವಿವಾಹವಾಗಲು ದೀರ್ಘಕಾಲ ಬ್ರಹ್ಮಚಾರಿಣಿಯು ಹಣ್ಣು-ಎಲೆ ಸೇವಿಸುತ್ತಾ ,ನಂತರ ಎಲ್ಲವನ್ನೂ ನಿಲ್ಲಿಸಿ ಬಹಳ ಕಠೋರವಾಗಿ ತಪಸ್ಸನ್ನು ಆಚರಿಸುತ್ತಾಳೆ.ಈ ತಪಶಕ್ತಿಯಿಂದ ಶಿವನನ್ನು ಒಲಿಸಿಕೊಂಡು ವಿವಾಹವಾಗುವ ಅವತಾರವೇ ಬ್ರಹ್ಮಚಾರಿಣಿ.
ಬಲಗೈಯಲ್ಲಿ ಜಪಮಾಲೆ,ಮತ್ತೊಂದು ಕೈಯಲ್ಲಿ ಕಮಂಡಲ ಹಿಡಿದು ನಿಂತ ಸ್ವರೂಪದಲ್ಲೇ ಬಹು ದೀರ್ಘಕಾಲತಪಸ್ಸನ್ನು ಆಚರಿಸಿ ತನ್ನನ್ನು ತಾನು ಶಿವನಿಗೆ ಅರ್ಪಿಸಿಕೊಂಡಿದ್ದರಿಂದ ಈ ದೇವಿಯನ್ನು ಅರ್ಪಣಾದೇವಿ ಎನ್ನುವ ಹೆಸರಿನಿಂದಲೂ ಕಲ
ರೆಯಲಾಗಿದೆ.ಮುಂದೆ ಈಶ್ವರನೂ ಪಾರ್ವತಿಯನ್ನು ಪತ್ನಿಯಾಗಿ ಸ್ವೀಕರಿಸುತ್ತಾನೆ.ಬ್ರಹ್ಮಚಾರಿಣಿಯ ಈ ಅವತಾರದಲ್ಲಿ ಬಲಗೈಯಲ್ಲಿ ಜಪಮಾಲೆ ಹಾಗೂ ಎಡಗೈಯಲ್ಲಿ ಕಮಂಡಲುವನ್ನು ಹಿಡಿದಿರುವ ದುರ್ಗೆಯ ರೂಪವನ್ನು ಕಾಣಬಹುದು.ದೇವಿಯ ಎರಡನೆಯ ಅವತಾರವಾದಬ್ರಹ್ಮಚಾರಿಣಿದೇವಿಯನ್ನುಆರಾಧಿಸಿ,
ಪೂಜಿಸಿ ದೇವಿಯ ಅನುಗ್ರಹಕ್ಕೆ ಪ್ರಾರ್ಥಿಸೋಣ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N.Chennabasappa ಬನ್ನಿ ಪೂಜೆಗೆ ಶಾಸಕ ಚೆನ್ನಿ ಅವರಿಂದ ಪೂರ್ವೋಚಿತ ಸಿದ್ಧತೆ

S.N.Chennabasappa ನವರಾತ್ರಿ ಉತ್ಸವದ ಕಡೆಯ ದಿನದಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ...

Shree Sigandur Chowdeshwari Temple ಸಿಗಂದೂರು ದೇವಿ ವೈಭವದ ನವರಾತ್ರಿ ಉತ್ಸವ

Shree Sigandur Chowdeshwari Temple ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ...

Madhu Bangarappa ಸಾರ್ವಜನಿಕರ ಅಹವಾಲುಗಳಿಗೆ ಸಕಾಲದಲ್ಲಿ ಅಗತ್ಯ ಸೌಲಭ್ಯ ಒದಗಿಸಿ- ಮಧು ಬಂಗಾರಪ್ಪ

Madhu Bangarappa ಸೌಲಭ್ಯ ಅರಸಿ ಕಚೇರಿಗೆ ಆಗಮಿಸುವ ಗ್ರಾಮೀಣ ಮತ್ತು...

CM Siddharamaiah ಚಾಮುಂಡೇಶ್ವರಿ ಆಶೀರ್ವಾದದಿಂದಲೇ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದೇನೆ- ಸಿದ್ಧರಾಮಯ್ಯ

CM Siddharamaiah ತಾಯಿ ಚಾಮುಂಡೇಶ್ವರಿ ಹಾಗೂ ಇಲ್ಲಿನ ಜನರ ಆಶೀರ್ವಾದದಿಂದಲೇ ಎರಡನೇ...