Friday, March 20, 2026
Friday, March 20, 2026

Klive Special Article ನವರಾತ್ರಿ ಎರಡನೇ ದಿನ.ದೇವಿಯ ಶ್ರೀಬ್ರಹ್ಮಚಾರಿಣಿ ರೂಪದಲ್ಲಿ ಆರಾಧನೆ. ಲೇ: ಎನ್.ಜಯಭೀಮ ಜೊಯ್ಸ್.ಶಿವಮೊಗ್ಗ.

Date:

Klive Special Article “ದಧಾನಾಂ ಕರಪದ್ಮಾಭ್ಯಾಂ
ಅಕ್ಷಮಾಲಾ ಕಮಂಡಲೂ/
ದೇವಿ ಪ್ರಸೀದತು ಮಯಿ
ಬ್ರಹ್ಮಚಾರಿಣ್ಯನುತ್ತಮಾ//

ಮೊದಲನೆಯ ದಿನ ದೇವಿಯ ಶೈಲಪುತ್ರಿರೂಪದಿಂದ ಪೂಜಿಸಲ್ಪಡುತ್ತಾಳೆ.ಇಂದು ನವರಾತ್ರಿಯ ಎರಡನೇ ದಿವಸ.
ಎರಡನೆಯ ದಿನ ದೇವಿಯನ್ನು ಬ್ರಹ್ಮಚಾರಿಣಿ
ರೂಪದಲ್ಲಿ ಪೂಜಿಸಲಾಗುತ್ತದೆ.
ಜಗನ್ಮಾತೆಯನ್ನು ಬ್ರಾಹ್ಮೀ ಸ್ವರೂಪದಲ್ಲಿ
ನೋಡುವಬಗೆ,ಕಮಂಡಲುಧಾರಿಣಿ,ಅಕ್ಷಮಾಲೆ.ಸಪ್ತಮಾತೃಕೆಯರಲ್ಲಿ ಬ್ರಾಹ್ಮಿಯೂ ಒಬ್ಬಳೆಂದು ಗುರುತಿಸಲ್ಪಟ್ಟಿದ್ದಾಳೆ.ಬ್ರಹ್ಮಚಾರಿಣಿ ಎಂದರೆ ಸಂತೋಷ ಮತ್ತುಶಾಂತ ಶಕ್ತಿಯನ್ನು ಹೊಂದಿರುವ ರೂಪ.ಮೋಕ್ಷವನ್ನು ಬಯಸಿಅಥವಾ ಕಾರ್ಯಗಳ
ವಿಮೋಚನೆಗೆ ಬಯಸಿ ದೇವಿಯ ಈ ಅವತಾರಕ್ಕೆ ಪೂಜೆ ಸಲ್ಲಿಸಿ ಆರಾಧಿಸಿದರೆದೇವಿ ಅನುಗ್ರಹ ಮಾಡುವಳು.
Klive Special Article ಪ್ರಜಾಪತಿ ದಕ್ಷನಿಂದ ತನ್ನ ಪತಿ ಶಿವನು ಅವಮಾನಿತಗೊಂಡಾಗ,ಸತಿಯಾಗಿ ಮರುಜನ್ಮ ಪಡೆದು
ಮತ್ತೆ ಶಿವನನ್ನೇ ವರಿಸಲು ಬ್ರಹ್ಮಚಾರಿಣಿಯಾಗಿ ಅವತರಿಸಿದ ರೂಪವೇ ಬ್ರಹ್ಮಚಾರಿಣಿ ದೇವಿ.
ಶಿವನನ್ನು ವಿವಾಹವಾಗಲು ದೀರ್ಘಕಾಲ ಬ್ರಹ್ಮಚಾರಿಣಿಯು ಹಣ್ಣು-ಎಲೆ ಸೇವಿಸುತ್ತಾ ,ನಂತರ ಎಲ್ಲವನ್ನೂ ನಿಲ್ಲಿಸಿ ಬಹಳ ಕಠೋರವಾಗಿ ತಪಸ್ಸನ್ನು ಆಚರಿಸುತ್ತಾಳೆ.ಈ ತಪಶಕ್ತಿಯಿಂದ ಶಿವನನ್ನು ಒಲಿಸಿಕೊಂಡು ವಿವಾಹವಾಗುವ ಅವತಾರವೇ ಬ್ರಹ್ಮಚಾರಿಣಿ.
ಬಲಗೈಯಲ್ಲಿ ಜಪಮಾಲೆ,ಮತ್ತೊಂದು ಕೈಯಲ್ಲಿ ಕಮಂಡಲ ಹಿಡಿದು ನಿಂತ ಸ್ವರೂಪದಲ್ಲೇ ಬಹು ದೀರ್ಘಕಾಲತಪಸ್ಸನ್ನು ಆಚರಿಸಿ ತನ್ನನ್ನು ತಾನು ಶಿವನಿಗೆ ಅರ್ಪಿಸಿಕೊಂಡಿದ್ದರಿಂದ ಈ ದೇವಿಯನ್ನು ಅರ್ಪಣಾದೇವಿ ಎನ್ನುವ ಹೆಸರಿನಿಂದಲೂ ಕಲ
ರೆಯಲಾಗಿದೆ.ಮುಂದೆ ಈಶ್ವರನೂ ಪಾರ್ವತಿಯನ್ನು ಪತ್ನಿಯಾಗಿ ಸ್ವೀಕರಿಸುತ್ತಾನೆ.ಬ್ರಹ್ಮಚಾರಿಣಿಯ ಈ ಅವತಾರದಲ್ಲಿ ಬಲಗೈಯಲ್ಲಿ ಜಪಮಾಲೆ ಹಾಗೂ ಎಡಗೈಯಲ್ಲಿ ಕಮಂಡಲುವನ್ನು ಹಿಡಿದಿರುವ ದುರ್ಗೆಯ ರೂಪವನ್ನು ಕಾಣಬಹುದು.ದೇವಿಯ ಎರಡನೆಯ ಅವತಾರವಾದಬ್ರಹ್ಮಚಾರಿಣಿದೇವಿಯನ್ನುಆರಾಧಿಸಿ,
ಪೂಜಿಸಿ ದೇವಿಯ ಅನುಗ್ರಹಕ್ಕೆ ಪ್ರಾರ್ಥಿಸೋಣ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...