Sunday, October 6, 2024
Sunday, October 6, 2024

Kirloskar Ferrous ಬೀಡುಕಬ್ಬಿಣ ಕೈಗಾರಿಕೆಗಳಲ್ಲಿ ಸುರಕ್ಷತೆ ಬಗ್ಗೆ 120 ಉದ್ಯೋಗಿಗಳಿಗೆ ಕೊಪ್ಪಳದಲ್ಲಿ ತರಬೇತಿ

Date:

Kirloskar Ferrous ದಿನಾಂಕ 28 -8- 2018 ರಂದು ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಆಡಿಟೋರಿಯಂ ನಲ್ಲಿ ಸೆಮಿನಾರ್ ಕಾರ್ಯಕ್ರಮವನ್ನು ಆಯೋಜಿಸುವುದರ ಮೂಲಕ ಯಶಸ್ವಿಗೊಳಿಸಲಾಯಿತು, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ನಾ ಸುತ್ತಮುತ್ತಲು ಇರುವ ಬಳ್ಳಾರಿ ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಯ 30 ಕಾರ್ಖಾನೆಗಳ ಮೈಂಟೇನೆನ್ಸ್ ಮತ್ತು ಸುರಕ್ಷತಾ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನವನ್ನು ಪಡೆದರು.

ವರ್ಕಿಂಗ್ ಅಟ್ ಹೈಟ್ ಮತ್ತು ಕಂಪೈನ್ಡ್ ಸ್ಪೇಸ್ ಎಂಟ್ರಿ ವಿಷಯದ ಮೇಲೆ ಸೆಮಿನಾರ್ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಬೆಂಗಳೂರಿನ ಕರಂ ಸೇಫ್ಟಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಹಾಗೂ ಕಾರ್ಖಾನೆಗಳು ಮತ್ತು ಬಾಯ್ಲರ್ ಗಳ ಇಲಾಖೆಯ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, 120 ಉದ್ಯೋಗಿಗಳಿಗೆ ತರಬೇತಿಯನ್ನು ನೀಡುವುದರ ಮೂಲಕ ಅಣುಕು ಪ್ರದರ್ಶನವನ್ನು ಆಯೋಜನೆ ಮಾಡಿ ತಿಳಿಸಿಕೊಡಲಾಯಿತು.

ಕೆಲಸದ ಸಂದರ್ಭದಲ್ಲಿ ಮೇಲಿನಿಂದ ಅಪಘಾತವಾದ ವ್ಯಕ್ತಿಯನ್ನು ಕೆಳಗಡೆ ಸುರಕ್ಷಿತವಾಗಿ ತರುವಂತಹ ವಿಧಾನ ಮತ್ತು ಒಳ ಭಾಗದಲ್ಲಿ ( ಕಂಫೈಂಡ್ ಸ್ಪೇಸ್) ನಲ್ಲಿ ಅಪಘಾತವಾದಂತಹ ವ್ಯಕ್ತಿಯನ್ನು ಸುರಕ್ಷಿತವಾಗಿ ಹೊರಗಡೆ ತರುವಂತಹ ವಿಧಾನವನ್ನು ತಿಳಿಸಿಕೊಟ್ಟರು.

Kirloskar Ferrous ಪ್ರಾರಂಭದಲ್ಲಿ ಬೆಳಿಗ್ಗೆ 9:30ಕ್ಕೆ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಆರ್ ವಿ ಗುಮಾಸ್ತೆ, ಕರ್ನಾಟಕ ಸರ್ಕಾರದ ಹುಬ್ಬಳ್ಳಿ ವಿಭಾಗದ ಕಾರ್ಖಾನೆಗಳ ಜಂಟಿ ನಿರ್ದೇಶಕರಾದ ಶ್ರೀ ರವೀಂದ್ರನಾಥ್ ರಾಥೋಡ್ ಹಾಗೂ ನ್ಯಾಷನಲ್ ಸೇಫ್ಟಿ ಕೌನ್ಸಿಲ್ ಸೆಕ್ರೆಟರಿ ಶ್ರೀ ಪಿ ವೆಂಕಟೇಶ್ವರಲು, ಬಳ್ಳಾರಿ ವಿಭಾಗದ ಕಾರ್ಖಾನೆಗಳ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀ ವರುಣ್, ಕೊಪ್ಪಳ ವಿಭಾಗದ ಕಾರ್ಖಾನೆಗಳ ಸಹಾಯಕ ನಿರ್ದೇಶಕರಾದ ಶ್ರೀ ವಿಜಯಕುಮಾರ್ ಹಾಗೂ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಶ್ರೀ ಪಿ ನಾರಾಯಣ್ ಹಾಗೂ ಬೀಡು ಕಬ್ಬಿಣ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಶ್ರೀ ಎಂಜಿ ನಾಗರಾಜ್ ಇವರಿಂದ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವು ಉದ್ಘಾಟನೆಯಾಯಿತು,

ನ್ಯಾಷನಲ್ ಸೇಫ್ಟಿ ಕೌನ್ಸಿಲ್ ಬೆಂಗಳೂರು ಕರ್ನಾಟಕ ಚಾಪ್ಟರ್ ಇವರು ಈ ಕಾರ್ಯಕ್ರಮ ಆಯೋಜನೆ ಮಾಡಿ ಸೆಮಿನಾರ್ ಕಾರ್ಯಕ್ರಮದಲ್ಲಿ ನ್ಯಾಷನಲ್ ಸೇಫ್ಟಿ ಕೌನ್ಸಿಲ್ ಸೆಕ್ರೆಟರಿ ಶ್ರೀ ಪಿ ವೆಂಕಟೇಶ್ವರಲು ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಸುರಕ್ಷತಾ ವಿಭಾಗದ ಮ್ಯಾನೇಜರ್ ಶ್ರೀ ಎಂಎಂ ನಾಡಿಗೇರ್, ಹೊಸಪೇಟೆ ಸ್ಟೀಲ್ ಲಿಮಿಟೆಡ್, ಗಿಣಿಗೇರಾ ಕಾರ್ಖಾನೆಯ ಸುರಕ್ಷತಾ ವಿಭಾಗದ ಜನರಲ್ ಮ್ಯಾನೇಜರ್ ಶ್ರೀ ಚಂದ್ರಶೇಖರ ಬೆಲ್ಲದ್, ನ್ಯಾಷನಲ್ ಸೇಫ್ಟಿ ಕೌನ್ಸಿಲ್ ಉಪಾಧ್ಯಕ್ಷರಾದ, ಶ್ರೀ ಹರಿದಾಸ ಉಪಾಧ್ಯಾಯ, ನ್ಯಾಷನಲ್ ಸೇಫ್ಟಿ ಕೌನ್ಸಿಲ್ ಜಂಟಿ ಕಾರ್ಯದರ್ಶಿಗಳಾದ ಶ್ರೀ ಚಂದ್ರಶೇಖರ ಶಾಸ್ತ್ರಿ ಮತ್ತು ಕರಂ ಸೇಫ್ಟಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವಿಭಾಗೀಯ ಅಧಿಕಾರಿಯದ ಶ್ರೀ ಆವಿಷ್ಕಾರ್ ಇವರುಗಳಿಂದ ಸುರಕ್ಷತಾ ವಿಷಯಗಳ ಮೇಲೆ ಉಪನ್ಯಾಸವನ್ನು ನೀಡಿದರು.

ಮಧ್ಯಾಹ್ನ ಕರಂ ಸೇಫ್ಟಿ ಪ್ರವೇಟ್ ಲಿಮಿಟೆಡ್ ವಿಭಾಗಿಯ ಅಧಿಕಾರಿಯದ ಶ್ರೀ ಆವಿಷ್ಕಾರ್ ಮತ್ತು ಅವರ ತಂಡದೊಂದಿಗೆ ವರ್ಕಿಂಗ್ ಅಟ್ ಹೈಟ್ ಮತ್ತು ಕಂಫೈನ್ಡ್ ಸ್ಪೇಸ್ ಬಗ್ಗೆ ಅಣುಕು ಪ್ರದರ್ಶನವನ್ನು ಮಾಡುವುದರ ಮೂಲಕ ತಿಳುವಳಿಕೆಯನ್ನು ನೀಡಿದರು. ಅಚ್ಚುಕಟ್ಟಾಗಿ ಆಯೋಜನೆ ಮಾಡಲಾದಂತಹ ಕಾರ್ಯಕ್ರಮದ ಕೊನೆಗೆ ಸೆಮಿನಾರ್ ಪ್ರೋಗ್ರಾಂನಲ್ಲಿ ಭಾಗವಹಿಸಿದವರಿಗೆ ಸರ್ಟಿಫಿಕೇಟ್ ನೀಡುವುದರ ಮೂಲಕ ಅವರ ಅನುಭವವನ್ನು ಹಂಚಿಕೊಳ್ಳುವಂತಹ ವ್ಯವಸ್ಥೆ ಮಾಡಲಾಗಿತ್ತು. ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ .

ಮರುಳಿಧರ ನಾಡಿಗೇರ್
ಮ್ಯಾನೇಜರ್ ಸುರಕ್ಷತಾ ವಿಭಾಗ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D Satya Prakash ಯಾವುದೇ ಸಿನಿಮಾ ಭಾವನೆಗಳ ಮೇಲಿ‌ನ ಆಟವಾಗಬಾರದು- ಡಿ.ಸತ್ಯಪ್ರಕಾಶ್

D. Satya Prakash ಸಿನಿಮಾ ಎನ್ನುವುದು ಭಾವನಾತ್ಮಕ ಜೊತೆಗೆ ವಿಚಿತ್ರವೂ ಹೌದುಖ್ಯಾತ...

Press Distributors ಪತ್ರಿಕಾ ವಿತರಕರಿಗೆ ಸಂಕಷ್ಟದ ಸಮಯದಲ್ಲಿ ಸರ್ಕಾರದ ಸಹಕಾರ ಅಗತ್ಯ- ಜಿ.ಕೆ.ಹೆಬ್ಬಾರ್

Press Distributors ಶಿಕಾರಿಪುರ ನಿನ್ನೆ ಮಧ್ಯಾಹ್ನ ಹಠ ತ್ ಲಘು ಹೃದಯಘಾತವಾಗಿ...