Thursday, August 13, 2026
Thursday, August 13, 2026

Klive Special Article ತಿಂಗಳ ಕವಿತೆ

Date:

Klive Special Article ಉತ್ತು – ಬಿತ್ತಿ ಭುವಿಗೆ
ಬೆವರ ಸುರಿಸಿ ನಾಡಿಗೆ
ಅನ್ನ ನೀಡುವ ನನ್ನ ರೈತ

ಬಿಸಿಲಲ್ಲಿ ಬೆಂದು
ಮಳೆಯಲ್ಲಿ ನೆನೆದು
ಚಳಿಯಲ್ಲಿ ನಡುಗಿ ಊರ ಹಸಿವು ನೀಗಿಸುವ ನನ್ನ ರೈತ

ಬೆಳೆಗಾಗಿ ಸಾಲ – ಸೂಲ ಮಾಡಿ ಹಾಕಿದ ಬೀಜ ಜೀವ – ಜಲವಿಲ್ಲದೆ ಕಂಗೆಟ್ಟು, ಮಳೆ ಬಂದಾಗ ಸಂತೋಷಪಟ್ಟ ನನ್ನ ರೈತ

ಮಳೆ ಬಂದು ಇಳೆತುಂಬಿ
ಬೆಳೆ ಮುಳುಗಿ ಹೋದಾಗ ಯಾರಿಗೂ ಹೇಳದೆ ಸಂಕಟ ಪಟ್ಟ ನನ್ನ ರೈತ

ಕಷ್ಟಪಟ್ಟು ಹೊಟ್ಟೆ – ಬಟ್ಟೆ ಕಟ್ಟಿ ದುಡಿದು – ದುಡಿದು ಸೋತು – ಸೊರಗಿ ಹೋದ ನನ್ನ ರೈತ

ಬೆಳೆಗಾಗಿ ತಂದ ಸಾಲ ತೀರಲಿಲ್ಲ ಕೊಟ್ಟವರು ಬಿಡುತ್ತಿಲ್ಲ ಮಾನಕ್ಕಾಗಿ ಜೀವ ಪಣಕಿಟ್ಟ ನನ್ನ ರೈತ

Klive Special Article ಸಾಲ ಕೊಟ್ಟವರು ಬಿಡಲಿಲ್ಲ
ಸರ್ಕಾರದ ಮನಸ್ಸು ಕರಗಲಿಲ್ಲ ಕೊನೆಗೂ ರೈತನ ಭವಣೆ ತೀರಲಿಲ್ಲ
ಇಷ್ಟೆಲ್ಲಾ ಕಷ್ಟವ ಅನುಭವಿಸಿಯೂ ಎದೆಗುಂದದೆ ದೇಶಕ್ಕೆ ಅನ್ನವ ನೀಡುವಾತ ನನ್ನ ರೈತ
ದೇಶಕ್ಕೆ ಅನ್ನವ ನೀಡುವಾತ ನನ್ನ ರೈತ…..!

ರಚನೆ : ಧರ್ಮರಾಜ್.ಜಿ.ಸಾಗರ, ಪತ್ರಕರ್ತರು ಹಾಗೂ ಹವ್ಯಾಸಿ ಕವಿ, ಸಾಗರ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Araga Jnanendra ಶಿವಮೊಗ್ಗದಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

Araga Jnanendra ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು...

Madhu Bangarappa ವ್ಯವಸ್ಥೆಯಲ್ಲಿ ಮೂಲ ಬದಲಾವಣೆ.ನಮ್ಮ ಸರ್ಕಾರದ ಉದ್ದೇಶ- ಸಚಿವ ಮಧು ಬಂಗಾರಪ್ಪ

Madhu Bangarappa ಸರ್ಕಾರಿ ಶಾಲೆಯ ಅಭಿವೃದ್ಧಿ, ಗುಣಮಟ್ಟದ ಶಿಕ್ಷಣದ ಬಗ್ಗೆ ಸಚಿವನಾಗಿ...