Thursday, February 5, 2026
Thursday, February 5, 2026

Rajya Bal Bhavan ಬಾಲ ಭವನದ ಮುಖಾಂತರ ನಿರಂತರ ಕಾರ್ಯಕ್ರಮ ನಡೆಸಲು ಅಧ್ಯಕ್ಷರ ಸೂಚನೆ

Date:

Rajya Bal Bhavan ರಾಜ್ಯ ಬಾಲಾಭವನ ಅಧ್ಯಕ್ಷ ಬಿ ಆರ್ ನಾಯ್ಡು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿ ಕಾಂಗ್ರೆಸ್ ಮುಖಂಡ ಯೋಗೀಶ್ ರವರೊಂದಿಗೆ ರಾಜ್ಯ ಬಾಲ ಭವನ ಸೊಸೈಟಿಯ ಅನುದಾನದಲ್ಲಿ ಮಹಾತ್ಮಾ ಗಾಂಧಿ ಪಾರ್ಕ್ ನಲ್ಲಿ ನಡೆಯುತ್ತಿರುವ ಮಕ್ಕಳ ಪುಟಾಣಿ ರೈಲು, ಈಜು ಕೊಳ ನಿರ್ವಹಣೆ ಪರಿಶೀಲಿಸಿದರು.

ಇವುಗಳ ಉತ್ತಮ ನಿರ್ವಹಣೆ ಹಾಗೂ ಉನ್ನತಿಕರಣ ಬಗ್ಗೆ ಮಹಾ ನಗರ ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಮಕ್ಕಳ ಉಪಯೋಗಕ್ಕೆ ಯೋಗ್ಯವಾಗುವಂತೆ ಪಾಲಿಕೆ, CSR ಅನುದಾನ ಬಳಸಿಕೊಳ್ಳಲು ಸೂಚಿಸಿದರು. ತದನಂತರ ಮಹಿಳಾ ಮತ್ತು ಮಕ್ಕಳ ಉಪ ನಿರ್ದೇಶಕರ ಕಚೇರಿಯಲ್ಲಿ ಬಾಲ ಭವನ ಚಟುವಟಿಕೆಗಳ ಪ್ರಗತಿ ಪರಿಶೀಲನೆ ನಡೆಸಿ ಜಿಲ್ಲಾ ಮತ್ತು ತಾಲ್ಲೂಕು ಬಾಲ ಭವನ ನಿರ್ಮಾಣ ಮಾಡಲು ಕನಿಷ್ಠ ಅರ್ಧ ಎಕರೆ ನಿವೇಶನ ರಾಜ್ಯ ಬಾಲ ಭವನ ಸೊಸೈಟಿ ಹೆಸರಿಗೆ ಜಿಲ್ಲಾಧಿಕಾರಿಯವರಿಂದ ಮಂಜೂರಾತಿ ಪಡೆಯಲು ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.

Rajya Bal Bhavan ಜಿಲ್ಲಾ ಬಾಲ ಭವನ ಕಾರ್ಯಕ್ರಮ ಸಂಯೋಜಕರ ಮೂಲಕ ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲು ತಿಳಿಸಿದರು. ಈ ಸಂದರ್ಭದಲ್ಲಿ ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಿ ಹೆಚ್ ಕೃಷ್ಣಪ್ಪ, ಇಲಾಖಾ ಅಧಿಕಾರಿಗಳು, ಮಹಾ ನಗರ ಪಾಲಿಕೆ, ಶಿಕ್ಷಣ, ಯುವ ಜನ ಕ್ರೀಡಾ ಇಲಾಖೆ, ಅಧಿಕಾರಿಗಳು ಹಾಜರಿದ್ದರು.

ನಂತರ ಬಾಲಕಿಯರ ಬಾಲ ಮಂದಿರಕ್ಕೆ ಭೇಟಿ ಪರಿಶೀಲಿಸಿ ಇಲಾಖಾ ಸಂಕಿರ್ಣದಲ್ಲಿ ಬಾಲ ಭವನ ಆಡಿಟೋರಿಯಂ, ಮಕ್ಕಳ ಉದ್ಯಾನವನ ನಿರ್ಮಾಣ ಮಾಡುವ ಸಾಧ್ಯತೆ ಬಗ್ಗೆ ನಿವೇಶನಗಳ ಸ್ಥಳ ಪರಿಶೀಲನೆ ನಡೆಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Narayana Super Specialty Hospital ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರ

Narayana Super Specialty Hospital ಸಾರ್ವಜನಿಕರಲ್ಲಿ ಮೂಳೆ ಆರೋಗ್ಯದ ಬಗ್ಗೆ ಜಾಗೃತಿ...