Thursday, October 3, 2024
Thursday, October 3, 2024

ವಿಜಯ್ ಹಜಾರೆ ಟ್ರೋಫಿ ಕರ್ನಾಟಕದ ಕನಸು ಭಗ್ನ

Date:

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಸರಣಿಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ತಂಡಗಳ ನಡುವೆ ಪಂದ್ಯ ನಡೆಯಿತು. ಕರ್ನಾಟಕದ ವಿರುದ್ಧ ತಮಿಳುನಾಡು ಭರ್ಜರಿ ಜಯ ಸಾಧಿಸಿತು. ಈ ಮೂಲಕ ಕರ್ನಾಟಕ ತಂಡದ ವಿಜಯ್ ಹಜಾರೆ ಟ್ರೋಫಿ ಗಳಿಸುವ ಕನಸು ನುಚ್ಚುನೂರಾಯಿತು.
K.L ಸೈನಿ ಮೈದಾನದಲ್ಲಿ ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು, ಎದುರಾಳಿ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡಲು ಅವಕಾಶ ಮಾಡಿಕೊಟ್ಟಿತು.
ಪಂದ್ಯದ ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು ತಂಡ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 354 ರನ್ ಗಳಿಸಿತು.
6 ನೇ ಓವರ್ ನಲ್ಲಿ ಬಾಬಾ ಅಪರಾಜಿತ್ ವಿಕೆಟ್ ಗಳಿಸಿದ ವೈಶಾಖ ವಿಜಯ್ ಕುಮಾರ್ ಉತ್ತಮ ಆರಂಭ ಒದಗಿಸಿದರು. ಆದರೆ, ಜಗದೀಶನ್ ಜೊತೆಯಾಟದಲ್ಲಿ 147 ರನ್ ತಂಡಕ್ಕೆ ಸೇರಿಸಿದರು. 29ನೇ ಓವರ್ ನವರೆಗೂ ಕರ್ನಾಟಕದ ಬೌಲರ್ ಗಳು ವಿಕೆಟ್ ಲಭಿಸದೆ ಪರದಾಡಿದರು. ಇವರ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ತಮಿಳುನಾಡು ತಂಡ 355 ರನ್ ಗಳ ಗುರಿ ಕರ್ನಾಟಕ ತಂಡಕ್ಕೆ ಸವಾಲಾಕಿತು.
ನಂತರ ಬಂದ ಶಾರೂಕ್ ಖಾನ್ ಎಂದಿನಂತೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು, (ಅಜೇಯ 79 ರನ್) ‘ಸೈಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿಯ ಫೈನಲ್’ ನಲ್ಲಿ ತಮಿಳುನಾಡು ಗೆಲುವಿಗೆ ಕಾರಣರಾಗಿದ್ದ ಖಾನ್, ಇಲ್ಲಿಯೂ ಕೂಡ ಇದೇ ರೀತಿ ಆಟವಾಡಿ ಕರ್ನಾಟಕವನ್ನು ಎದೆಗುಂದುವಂತೆ ಮಾಡಿದರು,6 ಸಿಕ್ಸರ್ ಮತ್ತು 7 ಬೌಂಡರಿಗಳನ್ನು ಸಿಡಿಸಿ ತಂಡದ ಮೊತ್ತ 350 ರನ್ ದಾಟಲು ಕಾರಣರಾದರು.
ಬೃಹತ್ ಗುರಿಯನ್ನು ಬೆನ್ನತ್ತಿ ಆಡಿದ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಕರ್ನಾಟಕ 39 ಓವರ್ ಗಳಲ್ಲಿ ಆಲ್-ಔಟ್ ಆಗಿ 203 ರನ್ ಗಳಿಸಿಕೊಂಡಿತು.
ಮನೀಷ್ ಪಾಂಡೆ (8 ಎಸೆತಗಳಲ್ಲಿ 9 ರನ್) ದೊಡ್ಡ ಮೊತ್ತದ ಇನ್ನಿಂಗ್ಸ್ ಕಟ್ಟದಂತೆ ತಮಿಳುನಾಡಿನ ಬೌಲರ್ M. ಸಿದ್ದಾರ್ಥ್ ನೋಡಿಕೊಂಡರು. ಇದು ತಂಡಕ್ಕೆ ಬಹಳ ದೊಡ್ಡ ಪೆಟ್ಟಾಯಿತು, ಮಧ್ಯಮ ಕ್ರಮಾಂಕದಲ್ಲಿ ಅಭಿನವ್ ಮನೋಹರ್ ಮತ್ತು ಶ್ರೀನಿವಾಸ್ ಶರತ್ ಅವರು ಹೋರಾಟ ಮಾಡಿದರು. ತಂಡವನ್ನು ಜಯದತ್ತ ಮುನ್ನಡೆಸುವಲ್ಲಿ ವಿಫಲರಾದರು.
ದೇವದತ್ತ ಪಡಿಕ್ಕಲ್ ಖಾತೆ ತೆರೆಯದೇ ಮರಳಿದರು, ರೋಹನ್ ಕದಂ (24) ಮತ್ತು K.V ಸಿದ್ದಾರ್ಥ್ (29) ಎರಡನೇ ವಿಕೆಟ್ ಗೆ 59 ರನ್ ಸೇರಿಸಿದರು. ಸಿಲಂಬರಸನ್ ಬೌಲಿಂಗ್ ನಲ್ಲಿ ರೋಹನ್ ಔಟಾದರೆ, ಸಾಯಿ ಕಿಶೋರ್ ಎಸೆತದಲ್ಲಿ ಸಿದ್ದಾರ್ಥ್ ಪೆವಿಲಿಯನ್ ಗೆ ಮರಳಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Jawahar Navodaya Vidyalaya ಗಾಜನೂರಿನ ನವೋದಯ ಶಾಲಾ ಪ್ರವೇಶಾತಿ 2025-26 ಪರೀಕ್ಷೆಗೆ ಆನ್ ಲೈನ್ ಅರ್ಜಿ ಆಹ್ವಾನ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯವು 2025-26ನೇ ಸಾಲಿಗೆ 9...

Department of Parliamentary Affairs and Legislation ಅಕ್ಟೋಬರ್ 5 ರಂದು ನಡೆಯುವ “ಯುವ ಸಂಸತ್” ಸ್ಥಳ‌ ಬದಲಾವಣೆ ಗಮನಿಸಿ

Department of Parliamentary Affairs and Legislation ಸಂಸದೀಯ ಮತ್ತು ವ್ಯವಹಾರಗಳು...

MESCOM ಅ.4 ರಿಂದ7 ವರೆಗೆ ಮೆಸ್ಕಾಂ ಆನ್ ಲೈನ್ ಸೇವೆ ತಾತ್ಕಾಲಿಕ ಅಲಭ್ಯ

MESCOM ಅ.04ರಿಂದ 07 ರ ವರೆಗೆ ಮೆಸ್ಕಾಂ ಮಾಹಿತಿ ತಂತ್ರಜ್ಞಾನ...

Shivamogga Dasara ಶಿವಮೊಗ್ಗ ಚಲನಚಿತ್ರ ದಸರಾ ಚಾಲನೆಗೆ ಹಿರಿಯ ನಟಿ ಉಮಾಶ್ರೀ ಆಗಮನ

Shivamogga Dasara ಶಿವಮೊಗ್ಗ ಮಹಾ ನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿರುವ...