Thursday, August 13, 2026
Thursday, August 13, 2026

Bahujana Samaj Party ಪರಿಶಿಷ್ಟ ಜಾತಿ/ವರ್ಗಗಳಿಗೆ ಮೀಸಲಿದ್ದ ಹಣವನ್ನ ಇತರೆ ಕಾರ್ಯಕ್ಕೆ ಬಳಕೆ ವಿರುದ್ಧ ಬಿಎಸ್ ಪಿ ಪ್ರತಿಭಟನೆ

Date:

Bahujana Samaj Party ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರಿಗೆ ಮೀಸಲಿಟ್ಟ ಹಣವನ್ನು ಇತರೆ ಕಾರ್ಯಕ್ಕೆ ಬಳಸಿಕೊಳ್ಳುವುದನ್ನು ವಿರೋಧಿಸಿ ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗಕ್ಕೆ ಎಸ್.ಸಿ.,ಎಸ್.ಪಿ., ಮತ್ತು ಟಿ.ಎಸ್.ಪಿ. ಮೀಸಲು ಹಣವನ್ನು ಜನಾಂಗದ ಪ್ರಗತಿಗೆ ಯಾವುದೇ ಸರ್ಕಾರಗಳು ಬಳಸದೇ ಬೇರೆ ಕೆಲಸಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಹೊರತಾಗಿಲ್ಲ, ಅದರಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಪರಿಶಿಷ್ಟರ ಅಭಿವೃದ್ಧಿಗೆಂದು ಮೀಸಲಿಟ್ಟ ಕೋಟ್ಯಾಂತರ ರೂ. ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದೆ ಎಂದು ದೂರಿದರು.

10 ವರ್ಷಗಳಲ್ಲಿ ಎರಡು ಲಕ್ಷ 56 ಸಾವಿರ ಕೋಟಿ ಹಣವನ್ನು ಇತರೆ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ. ಈ ಹಣದಿಂದ ಪರಿಶಿಷ್ಟರ ವಿದ್ಯಾರ್ಥಿಗಳ ಶಿಕ್ಷಣಕ್ಕೆ, ಬಡವರ ಮನೆಗಳಿಗೆ, ನಿರುದ್ಯೋಗಿಗಳಿಗೆ ನೆರವು, ಭೂ ರಹಿತ ಕುಟುಂಬಕ್ಕೆ ಜಮೀನು ನೀಡಬಹುದಿತ್ತು. ಆರೋಗ್ಯಕ್ಕೆ ಸಂಬಂಧಿಸಿದಂತೆ ಉತ್ತಮ ಚಿಕಿತ್ಸೆ ಕೊಡಬಹುದಿತ್ತು.

Bahujana Samaj Party ಆದರೆ ಮೂರು ಸರ್ಕಾರಗಳು ಈ ಕೆಲಸ ಮಾಡದೇ ದ್ರೋಹ ಬಗೆದಿವೆ ಎಂದು ದೂರಿದರು.
ಜಾತ್ಯತೀತ, ಮನುವಾದಿ, ಜಾತಿವಾದಿ ಇವೆಲ್ಲವೂ ಒಂದೇ ಆಗಿವೆ. ಈ ಮೂರು ಪಕ್ಷಗಳಿಂದ ಬಹುಜನರ ಉದ್ದಾರ ಸಾಧ್ಯವಿಲ್ಲ. ಬಿಜೆಪಿ ಹುಲ್ಲಿನ ಮೇಲಿನ ಹಾವು ಇದ್ದಂತೆ. ಕಾಂಗ್ರೆಸ್ ಹುಲ್ಲಿನ ಒಳಗಿರುವ ಹಾವಿದ್ದಂತೆ, ಹಾಗಾಗಿ ಇನ್ನಾದರೂ ಪರಿಶಿಷ್ಟರ ಉದ್ದಾರಕ್ಕಾಗಿ ಎಲ್ಲಾ ಸರ್ಕಾರಗಳು ಪ್ರಯತ್ನಿಸಬೇಕು. ಮತ್ತು ಪರಿಶಿಷ್ಟರ ಕಲ್ಯಾಣಕ್ಕಾಗಿಯೇ ಮೀಸಲಿಟ್ಟ ಹಣವನ್ನು ಬಳಸಬೇಕು ಎಂದರು.

ಪ್ರತಿಭಟನೆಯಲ್ಲಿ ಬಿ.ಎಸ್.ಪಿ. ಜಿಲ್ಲಾಧ್ಯಕ್ಷ ಎ.ಡಿ.ಶಿವಪ್ಪ, ಪ್ರಮುಖರಾದ ಹೆಚ್.ಎಂ. ಶ್ರೀನಿವಾಸ್, ಎಂ. ಕೃಷ್ಣಪ್ಪ, ಎ.ಡಿ. ಶಿವಮೂರ್ತಿ, ರಾಜಪ್ಪ, ಗುತ್ಯಪ್ಪ, ಲಕ್ಷ್ಮೀಪತಿ, ಲೋಕೇಶ್, ಅಫ್ಸರ್ ಪಾಶಾ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...