Araga Jnanendra ಭಾರಿ ಚರ್ಚೆಗೆ ಗ್ರಾಸವಾಗಿದ್ದ ತೀರ್ಥಹಳ್ಳಿಯ ಸರ್ಕಾರಿ ಕಟ್ಟಡ ಮತ್ತು ತಡೆಗೋಡೆ ಕುಸಿತದ ಬಗ್ಗೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿ, ನಾನೊಬ್ಬ ಶಾಸಕ, ಮೇಸ್ತ್ರಿ ಅಲ್ಲ ಎಂದಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ತಡೆಗೋಡೆ ಕಟ್ಟಿದ್ದು ಮಣ್ಣು ರಸ್ತೆಗೆ ಬರಬಾರದು ಎಂದು. ಆದರೆ ಗುಡ್ಡವೇ ಕುಸಿದರೆ ಯಾರು ತಡೆಯಲು ಸಾಧ್ಯ. ಎಲ್ಲಾ ಕಟ್ಟಡ ಸುರಕ್ಷಿತವಾಗಿದೆ. ತಾಲೂಕು ಪಂಚಾಯಿತಿ ಕಟ್ಟಡ ಎಲೆಕ್ಟ್ರಿಕಲ್ ವಯರ್ ನಿರ್ಮಾಣದಲ್ಲಿ ಹೋಲ್ ಆಗಿ ಲೀಕೇಜ್ ಆಗಿದೆ. ಗುತ್ತಿಗೆದಾರರು ಇನ್ನೂ ಕಟ್ಟಡ ಬಳಕೆಗೆ ಹಸ್ತಾಂತರಿಸಿಲ್ಲ. ಕಟ್ಟಡ ಸರಿಪಡಿಸುವ ಭರವಸೆಯಿದೆ. ಆದರೆ ನಾನೇ ಕಟ್ಟಡವನ್ನು ಹಾಳು ಮಾಡಿದ ರೀತಿ ಆರೋಪಿಸಲಾಗುತ್ತಿದೆ ಎಂದು ಹೇಳಿದರು.
ತುಂಗಾ ಜಲಾಶಯದಲ್ಲಿ ಹೂಳು ತುಂಬಿದೆ. ಈ ಬಗ್ಗೆ ಎರಡು ವರ್ಷಗಳ ಹಿಂದೆ ಮೂರು ಇಲಾಖೆಯ ಅಧಿಕಾರಿಗಳು ಸೇರಿ ಹೂಳೆತ್ತಬೇಕಿದೆ. ಸರ್ಕಾರ ಯೋಚಿಸಿ ಹೂಳೆತ್ತಬೇಕಿದೆ. ಹೂಳೆತ್ತದಿದ್ದರೆ ನೀರು ಬಳಕೆಯಾಗುವುದಿಲ್ಲ ಎಂದರಲ್ಲದೆ, ನನ್ನ ಕ್ಷೇತ್ರದ ತುಂಗ ತಾಯಿಗೆ ಬಾಗಿನ ಅರ್ಪಿಸಲಾಗಿದೆ. ಜೀವನದಿ ಹೀಗೆ ಹರಿಯಲಿ, ನಾಡು ಸಂಮೃದ್ಧಿಯಾಗಲಿ ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ವಿಚಾರದಲ್ಲಿ ಬಿಜೆಪಿ ಕಾಲದ ಭ್ರಷ್ಠಚಾರದ ತನಿಖೆ ಮಾಡುವುದಾಗಿ ಆಡಳಿತ ಪಕ್ಷದ ನಾಯಕರು ಹೇಳಿಕೆ ನೀಡುತ್ತಿದ್ದಾರೆ.ನೀನು ಕಳ್ಳ ಎಂದರೆ ಅಲ್ಲ ನೀನು ಕಳ್ಳ ಎಂಬ ರೀತಿ ವರ್ತಿಸುತ್ತಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಠಾಚಾರದಲ್ಲಿ ಡೆತ್ ನೋಟ್ ನಲ್ಲಿ ಸಚಿವರ ಹೆಸರು ಉಲ್ಲೇಕಿಸಿಲ್ಲ ಎಂದು ಸಿಎಂ ಹೇಳುತ್ತಾರೆ.
Araga Jnanendra ಮೃತ ಚಂದ್ರಶೇಖರ್ ಪತ್ನಿಯಿಂದ ಮೂರು ಸ್ಟೇಟ್ ಮೆಂಟ್ ಪಡೆದು ಆರೋಪಿಗಳು ಸೇರಿ ಕೃತ್ಯ ನಡೆಸಿದ್ದಾರೆ ಎಂದರೂ ಹೆಸರು ಉಲ್ಲೇಖಿಸಲಿಲ್ಲ ಎಂದರು.
ಡಿವೈಎಸ್ಪಿ ಮೂಲಕ ಮತ್ತೊಂದು ಹೇಳಿಕೆ ಪಡೆದುಕೊಳ್ಳಲಾಗಿದೆ. ಆದರೂ ಆರೋಪಿ ಸ್ಥಾನದಲ್ಲಿ ಸಚಿವರ ಹೆಸರು ಉಲ್ಲೇಖಿಸಿದರೂ ದಾಖಲಾಗಿಲ್ಲ. ಸಚಿವರ ಆರೋಪಿಗಳ ಹೆಸರು ಇದೆ. ಆದರೆ ಮುಚ್ಚಿಹಾಕುವ ಕೆಲಸ ನಡೆಸಲಾಗುತ್ತಿದೆ. ವಾಲ್ಮೀಕಿ ಹಗರಣದ ಹಣ ತೆಲಂಗಾಣದ ಚುನಾವಣೆಯಲ್ಲಿ ಬಳಕೆಯಾಗಿರುವುದು ಸ್ಪಷ್ಟವಾಗುತ್ತಿದೆ. ಇದನ್ನ ಇಡಿ ಉಲ್ಲೇಖಿಸಿದೆ. ವಿಧಾನ ಸಭೆಯಲ್ಲಿ ಡೆತ್ ನೋಟ್ನ್ನು ಸಿಎಂ ಪೂರ್ಣ ಓದಿಲ್ಲ. ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸಮಯದಲ್ಲಿ ಭ್ರಷ್ಠಾಚಾರ ನಡೆದಿದೆ ಎಂದು ಆಡಳಿತ ಪಕ್ಷ ಆರೋಪಿಸಿದೆ.
ನಾವು ಭ್ರಷ್ಠಾಚಾರ ನಡೆಸಿದ್ದರೆ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.
ನನ್ನ ಕ್ಷೇತ್ರದಲ್ಲಿ ಬರುವ ತುಂಗ ನದಿ ಜಲಾಶಯಕ್ಕೆ ಇಂದು ಬಾಗಿನ ಅರ್ಪಿಸಲಾಗಿದೆ. ಜೀವನದಿ ತುಂಗೆ ಭರ್ತಿಯಾದರೂ, ತೀರ್ಥಹಳ್ಳಿಯಲ್ಲಿ ವಾಡಿಕೆ ಮಳೆಗಿಂತ ಕಡಿಮೆ ಆಗಿದೆ. ಮಳೆ ಇನ್ನೂ ಮಳೆ ಆಗಬೇಕಿದೆ ಎಂದರು.